ನಿಮ್ಮ ಜೀವನದಲ್ಲಿ ಕುಬೇರನ ಕೃಪೆ ಇರಬೇಕು ಎಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ, ಕುಬೇರನಂತೆ ಶ್ರೀಮಂತರಾಗುತ್ತೀರಿ.
ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಇರಬೇಕು ಎಂದರೆ, ಮನೆಯ ವಾಸ್ತು ಚೆನ್ನಾಗಿರುವುದು ಬಹಳ ಮುಖ್ಯ ಆಗುತ್ತದೆ. ವಾಸ್ತು ದೋಷ ಇದ್ದರೆ ಮನೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಸಹ ಇರುತ್ತದೆ. ಒಬ್ಬ ಮನುಷ್ಯನ ಏಳಿಗೆಗೆ ವಾಸ್ತು ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಕುಬೇರನ ಕೃಪೆ ಬಹಳ ಮುಖ್ಯ, ಅವರ ಕೃಪೆ ಆಶೀರ್ವಾದ ಇದ್ದರೆ, ಜೀವನದಲ್ಲಿ ಉತ್ತಮವಾದ ಏಳಿಗೆ ಹಾಗೂ ಲಾಭ ಗಳಿಸುತ್ತೀರಿ. ನಿಮ್ಮ ಜೀವನದಲ್ಲಿ ಕುಬೇರನ ಕೃಪೆ ಪಡೆಯಲು, ಈ ರೀತಿಯ ಕೆಲವು ಕೆಲಸಗಳನ್ನು ಮಾಡಿ, ಇದರಿಂದ ಜೀವನದಲ್ಲಿ ಶ್ರೀಮಂತಿಕೆ ಪಡೆಯುತ್ತೀರಿ.
*ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ನಿಮ್ಮ ಕೋಣೆಯ ಪೂರ್ವ ದಿಕ್ಕಿಗೆ, ತಿಳಿಯಾದ ನೀಲಿ ಬಣ್ಣವನ್ನು ಆರಿಸಿ, ಉತ್ತರ ದಿಕ್ಕೆಗೆ ಹಸಿರು ಬಣ್ಣ, ಪೂರ್ವ ದಿಕ್ಕಿಗೆ ಬಿಳಿ ಬಣ್ಣ, ಪಶ್ಚಿಮ ದಿಕ್ಕಿಗೆ ನೀಲಿ ಬಣ್ಣ, ದಕ್ಷಿಣ ದಿಕ್ಕಿಗೆ ಕೆಂಪು ಬಣ್ಣ ಹಚ್ಚಿ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
*ನಿಮ್ಮ ಮನೆಯಲ್ಲಿ ನೀರಿನ ಮೂಲವನ್ನು ಈಶಾನ್ಯ ಅಥವಾ ಉತ್ಯರ ದಿಕ್ಕೆಗೆ ಬರುವ ಹಾಗೆ ಇರಿಸಿ. ಮನೆಯಲ್ಲಿ ದಕ್ಷಿಣ, ನೈಋತ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ತೊಟ್ಟಿ ಮಾಡಿಸಿ, ವಾಸ್ತು ಶಾಸ್ತ್ರದ ಪ್ರಕಾರ ಇದರಿಂದ ಹಣದ ಹರಿವು ಹೆಚ್ಚಾಗುತ್ತದೆ.
*ಮನೆಯ ತಿಜೋರಿಯನ್ನು ದಕ್ಷಿಣ ಅಥವಾ ನೈಋತ್ಯದ ದಿಕ್ಕಿನಲ್ಲಿ ಇಡಿ, ಹಾಗೂ ಕಮಾನಿನ ಬಾಗಿಲು ದಕ್ಷಿಣ ದಿಕ್ಕಿಗೆ ಇಡಬೇಕು ಎಂದು ಹೇಳಲಾಗುತ್ತದೆ.
*ನಿಮ್ಮ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡರೆ ಮಾತ್ರ ಲಕ್ಷ್ಮೀದೇವಿ ಅಲ್ಲಿ ನೆಲೆಸಿರುತ್ತಾಳೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಅದರಲ್ಲೂ ಮನೆಯ ದಕ್ಷಿಣ ದಿಕ್ಕನ್ನು ಸ್ವಚ್ಛವಾಗಿ ಇಡುವುದರಿಂದ ಐಶ್ವರ್ಯ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರದ ಪ್ರಕಾರ ತಿಳಿದುಬಂದಿದೆ.
*ಮನೆಯ ಕಿಟಕಿ ಬಾಗಿಲುಗಳನ್ನು ಸದಾ ಸ್ವಚ್ಛವಾಗಿಡಿ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಜಾಸ್ತಿಯಾಗುತ್ತದೆ. ಹಾಗೂ ಬರ್ಕತ್ ಮನೆಗೆ ಬರುತ್ತದೆ.
Comments are closed.