Neer Dose Karnataka
Take a fresh look at your lifestyle.

ದರ್ಶನ್ ಜೊತೆ ಜಗಳ ಎಂದವರಿಗೆ ಉಮಾಪತಿ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ?? ಕ್ರಾಂತಿ ಸಿನಿಮಾಗಾಗಿ ಏನು ಮಾಡಿದ್ದಾರೆ ಗೊತ್ತೇ??

ನಟ ದರ್ಶನ್ ಅವರು ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ, ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ನು ದರ್ಶನ್ ಅವರ ಅಭಿಮಾನಿಗಳು ಸಿನಿಮಾ ಪ್ರೊಮೋಷನ್ ಅನ್ನು ಎಲ್ಲೆಡೆ ಅದ್ಧೂರಿಯಾಗಿ ಮಾಡುತ್ತಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಆ ವಿಷಯ ಮಾಧ್ಯಮಗಳಲ್ಲಿ ಸಹ ದೊಡ್ಡ ಸುದ್ದಿಯಾಗಿತ್ತು, ಒಂದು ಕಡೆ ದರ್ಶನ್ ಅವರು ಮತ್ತೊಂದು ಕಡೆ ಉಮಾಪತಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದರು. ಆಗಿನ ವಿವಾದ ಹೆಚ್ಚಾಗಿದ್ದ ಕಾರಣ, ಆ ಎಲ್ಲಾ ವಿವಾದಗಳಿಂದ ದರ್ಶನ್ ಹಾಗೂ ಉಮಾಪತಿ ಅವರ ಸ್ನೇಹ ಅಲ್ಲಿಗೆ ಮುಗಿದೇ ಹೋಯ್ತು ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು.

ಆದರೆ ಈಗ ಆ ಎಲ್ಲಾ ಪ್ರಶ್ನೆ, ಅನುಮಾನಗಳಿಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರೊಡನೆ ಉಮಾಪತಿ ಶ್ರೀನಿವಾಸ್ ಅವರಿಗೆ ಒಳ್ಳೆಯ ಗೆಳೆತನ ಇತ್ತು, ಬೇಡದ ವಿವಾದಗಳಿಂದ ಆ ಸ್ನೇಹಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು, ಇದೀಗ ಉಮಾಪತಿ ಅವರು ನಡೆದ ಎಲ್ಲವನ್ನು ಪಕ್ಕಕ್ಕಿಟ್ಟು, ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಸಾಥ್ ನೀಡಿದ್ದಾರೆ. ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಮಾಪತಿ ಶ್ರೀನಿವಾಸ್ ಅವರು ಪಾಲ್ಗೊಂಡು, ಕ್ರಾಂತಿ ಸಿನಿಮಾ ಪೋಸ್ಟರ್ ಹಿಡಿದು ಸಿನಿಮಾ ಪ್ರೊಮೋಷನ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.