Neer Dose Karnataka
Take a fresh look at your lifestyle.

ಸುದೀಪ್,,ಯಶ್ ವಿರುದ್ಧ ತಿರುಗಿಬಿದ್ದ ವಿಷ್ಣುವರ್ಧನ್ ರವರ ಅಭಿಮಾನಿಗಳು. ಕನ್ನಡ ಚಿತ್ರರಂಗ ಅಲ್ಲೋಲ ಕಲ್ಲೋಲ. ಯಾಕೆ ಗೊತ್ತೇ?? ಸುದೀಪ್ ಯಶ್ ಮಾಡಿದ ತಪ್ಪೇನು ಅಂತೇ ಗೊತ್ತೇ??

ನಿನ್ನೆ ಕನ್ನಡ ಚಿತ್ರರಂಗದ ಅಭಿನವ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ, ವಿಷ್ಣು ಅವರು ಅಗಲಿ 12 ವರ್ಷ ಕಳೆದಿದೆ, ನಿನ್ನೆ ಅವರ 72ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಅಚ್ಚರಿಸಿದರು. 50ಅಡಿ ಎತ್ತರದ ವಿಷ್ಣು ದಾದ ಅವರ ಕಟೌಟ್ ಅನ್ನು ನಿಲ್ಲಿಸಿ, ಹುಟ್ಟುಹಬ್ಬ ಆಚರಿಸಿ, ಸಮಾಧಿ ಬಳಿ ವಿಷ್ಣುವರ್ಧನ್ ಅವರ ಆಶೀರ್ವಾದ ಪಡೆದುಕೊಂಡರು. ಆದರೆ ಈಗಲೂ ಅಭಿಮಾನಿಗಳಲ್ಲಿ ನೋವು ಕಡಿಮೆ ಆಗಿಲ್ಲ. ವಿಷ್ಣು ಅವರು ಅಗಲಿ 12 ವರ್ಷ ಕಳೆದಿದ್ದರು, ಅವರ ಸ್ಮಾರಕದ ನಿರ್ಮಾಣವಾಗಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇದೆ.

ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ಚಂದನವನದ ಯಾವುದೇ ಒಬ್ಬ ನಟ ಸಪೋರ್ಟ್ ಮಾಡುತ್ತಿಲ್ಲ, ವಿಷ್ಣುವರ್ಧನ್ ಅವರ ಸಮಾಧಿ ಬಳಿ ಬಂದು ಯಾರು ಭೇಟಿ ನೀಡುವುದಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇದೆ, ನಿನ್ನೆಯ ದಿನ ಅಭಿಮಾನಿಗಳು ನೇರವಾಗಿಯೇ ನಟ ಸುದೀಪ್ ಹಾಗೂ ನಟ ಯಶ್ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಶ್ ಬೆಳೆದದ್ದು ವಿಷ್ಣುದಾದ ಹೆಸರು ಹೇಳಿಕೊಂಡು, ರಾಮಾಚಾರಿ ಸಿನಿಮಾದಲ್ಲಿ ವಿಷ್ಣುದಾದ ಅವರ ಹೆಸರನ್ನು ಬಳಸಿ ಮಾಡಿಲ್ಲದೆ ಹೋದರೆ, ಯಶ್ ಗೆ ಇಂಡಸ್ಟ್ರಿ ಹಿಟ್ ಕೊಡಲು ಆಗುತ್ತಿರಲಿಲ್ಲ. ಕೆಜಿಎಫ್ ಮಾಡೋದಕ್ಕೂ ಆಗುತ್ತಿರಲಿಲ್ಲ. ಹೆಸರನ್ನು ಬಳಸಿಕೊಂಡು ಬೆಳೆದರು.

ಇಂದು ದಾದ ಹುಟ್ಟುಹಬ್ಬಕ್ಕೆ ಒಂದು ವಿಶ್ ಮಾಡೋದಕ್ಕೂ ಆಗೋದಿಲ್ಲ. ಸೈಮಾ ಗೆ ಹೋಗಿ ಹಾಯ್ ಹಾಯ್ ಅಂತ ಹೇಳೋದಕ್ಕೆ ಆಗುತ್ತೆ. ಸಮಾಧಿ ವಿಷಯದಲ್ಲಿ ಯಾರು ಒಂದು ಮಾತು ಆಡೋದಿಲ್ಲಮ್..” ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಸುದೀಪ್ ಅವರ ಬಗ್ಗೆ ಸಹ ಮಾತನಾಡಿ, “ಒಬ್ಬರು ಟ್ಯಾಟೂ ಹಾಕಿಸಿಕೊಂಡರು, ಇನ್ನೊಬ್ಬರು ನಾನು ವಿಷ್ಣುದಾದ ಅಭಿಮಾನಿ ಎನ್ನುತ್ತಾ ಬೆಳೆದರು, ಆದರೆ ಇಬ್ಬರಿಗೂ ಇಲ್ಲಿಗೆ ಬರೋದಕ್ಕೆ ಸಮಯ ಇಲ್ಲ. ಇಬ್ಬರು ದಾದ ಹೆಸರು ಬಳಸಿಕೊಂಡು ಬೆಳೆದರು ಅಷ್ಟೇ..” ಎಂದು ಇಬ್ಬರ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

Comments are closed.