Neer Dose Karnataka
Take a fresh look at your lifestyle.

ನಿಮ್ಮ ಮನೆಯಲ್ಲಿ ಈ ಜಾಗದಲ್ಲಿ ಕುಬೇರೆನ ವಿಗ್ರಹ ಇಟ್ಟರೆ ಸಾಕು, ನೀವು ಬೇಡ ಬೇಡ ಅಂದ್ರು ದುಡ್ಡು ಹುಡುಕಿಕೊಂಡು ಬರುತ್ತದೆ.

ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯ, ಹಣ ಇದ್ದರೆ ಮಾತ್ರ ಎಳ್ಳಿಗಾದರು ಹೋಗಲು ಸಾಧ್ಯವಾಗುತ್ತದೆ. ಏನನ್ನಾದರೂ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದಲೇ ಎಲ್ಲರೂ ಹಣ ಸಂಪಾದನೆ ಮಾಡಲು ಬಹಳ ಕಷ್ಟಪಡುತ್ತಾರೆ. ಆರ್ಥಿಕವಾಗಿ ಬಲವಾಗಿದ್ದಾಗ ಮಾತ್ರ, ಕುಟುಂಬದಲ್ಲಿ ಎಲ್ಲರೂ ಸಂತೋಷವಾಗುತ್ತಾರೆ. ಆದ ಕಾರಣದಿಂದ ಹಣ ಸಂಪಾದನೆ ಮಾಡಲು ಹಗಲು ರಾತ್ರಿ ಎನ್ನದೆ ಜನರು ಕಷ್ಟಪಡುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟ ಪಟ್ಟರು ಅವರ ಮನೆಯಲ್ಲಿ ಹಣ ನಿಲ್ಲುವುದಿಲ್ಲ, ಎಷ್ಟೇ ಕಷ್ಟಪಟ್ಟು ಸಂಪಾದನೇ ಮಾಡಿದರು ಸಹ, ಊಹಿಸದೆ ಇರುವ ರೀತಿಯಲ್ಲಿ ಹಣ ಖರ್ಚಾಗುತ್ತಿರುತ್ತದೆ. ಹೀಗೆ ಹಣ ಖರ್ಚಾಗುತ್ತಲೇ ಇರುವವರು ಕೆಲವು ವಾಸ್ತು ನಿಯಮಗಳನ್ನು ಅನುಸರಿಸಿದರೆ, ಹಣ ಉಳಿಸಲು ಕೆಲವು ಪರಿಹಾರ ಸಿಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಲಕ್ಷ್ಮೀದೇವಿಯ ಅನುಗ್ರಹ ಇರಬೇಕೆಂದರೆ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಮನೆಯಲ್ಲಿ ಖರ್ಚು ಹೆಚ್ಚಾಗುತ್ತಿದೆ ಎಂದು ಭಾವಿಸಿದರೆ, ಶುದ್ಧವಾದ ಕೆಂಪು ಬಟ್ಟೆಯಲ್ಲಿ 7 ಚಿಪ್ಪುಗಳನ್ನು ಕಟ್ಟಿ, ಇದರಿಂದ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ಜಾಸ್ತಿಯಾಗುತ್ತದೆ. ಅದೇ ರೀತಿ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಹೊಸ ನೋಟುಗಳು, ಹಣದ ಹೊಸ ನೋಟುಗಳನ್ನು ಹಣದ ಬಂಡಲ್ ನಲ್ಲಿ ಇರಿಸಿ ಲಾಕರ್ ಗೆ ಸೇರಿಸಿದರೆ, ಹೆಚ್ಚಿನ ಹಣ ಖರ್ಚಾಗದ ಹಾಗೆ ಇರುತ್ತದೆ. ಹಣದ ದೇವರು ಎಂದು ಹೇಳುವ ಕುಬೇರನ ಅನುಗ್ರಹ ಪಡೆಯಲು, ನೀವು ಹಣ ಇಡುವ ಲಾಕರ್ ನಲ್ಲಿ ಕುಬೇರನ ವಿಗ್ರಹ ಅಥವಾ ಫೋಟೋ ಇಡಿ.

ಇದರಿಂದ ಹಣ ಬರುವುದು ಮಾತ್ರವಲ್ಲದೆ ಅದರೊಡನೆ ಲಾಭಗಳು ಹೆಚ್ಚಾಗುವಂತ ಪರಿಸ್ಥಿತಿ ಬಲವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಲಕ್ಷ್ಮೀದೇವಿಯ ಅನುಗ್ರಹ ಪಡೆಯಲು ಮನೆಯ ಲಾಕರ್ ನಲ್ಲಿ ಪುಟ್ಟ ಕನ್ನಡಿ ಇಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಬಾಗಿಲು ತೆರದಾಗ ಕನ್ನಡಿ ಕಾಣುವ ಹಾಗೆ ಇರಬೇಕು, ಆಗ ಹಣ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಲಕ್ಷ್ಮೀದೇವಿಗೆ ಇಷ್ಟ ಆಗದ ನಿರುಪಯುಕ್ತ ವಸ್ತುಗಳನ್ನು ಲಾಕರ್ ನಲ್ಲಿ ಇಡಬೇಡಿ, ಫೋಟೋಗಳು, ಬೇರೆ ವಿವರಗಳು, ದಾಖಲೆಗಳು ಇದೆಲ್ಲವನ್ನು ಲಾಕರ್ ನಲ್ಲಿ ಇಡುತ್ತಾರೆ, ಆದರೆ ಆ ರೀತಿ ಮಾಡಬೇಡಿ. ಲಾಕರ್ ನಲ್ಲಿ ಹಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾತ್ರ ಇಡಬೇಕು, ಬೇರೆ ವಸ್ತುಗಳನ್ನು ಇಡಬಾರದು. ಇದರಿಂದ ಲಕ್ಷ್ಮಿದೇವಿಗೆ ಕೋಪ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಎಷ್ಟು ಹಣವನ್ನು ನೀವು ಗಳಿಸಿದ್ದೀರಿ ಎಂದು ಚಿಂತೆ ಮಾಡುತ್ತಿದ್ದರೆ, ಈ ಸಲಹೆಗಳನ್ನು ಅನುಸರಿಸಿ.

Comments are closed.