Neer Dose Karnataka
Take a fresh look at your lifestyle.

ನಾನು ಮಗು ಬಿಟ್ಟು ಬಂದಿರೋದು ಇಲ್ಲಿ ಸಂಬಂಧ ಬೆಸೆಯಲು ಅಲ್ಲ, ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟ ಮಯೂರಿ. ಬಿಗ್ ಬಾಸ್ ನಲ್ಲಿ ಹೇಳಿದ ಸತ್ಯ ಏನು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ, ಸ್ಪರ್ಧಿಗಳು ಮನೆಯೊಳಗೆ ಹೋಗಿ ಇನ್ನೇನು ಒಂದು ವಾರ ಕಳೆಯುತ್ತಿದೆ. ಮನೆಯೊಳಗೆ ಇರುವ ಸ್ಪರ್ಧಿಗಳಲ್ಲಿ ಬಹಳ ಅಚ್ಚರಿ ಮೂಡಿಸಿದವರು ನಟಿ ಮಯೂರಿ. ಇವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಬಹಳ ಸರಳವಾಗಿ ಮತ್ತು ಸೈಲೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದವರು ನಟಿ ಮಯೂರಿ. ಇವರು ಚಿತ್ರರಂಗಕ್ಕೆ ಬಂದಮೇಲು ಬೇರೆ ನಟಿಯರ ಹಾಗಿರದೆ, ತಾವಾಯಿತು ತಮ್ಮ ಕೆಲಸ ಆಯಿತು ಎಂದು ಇರುತ್ತಿದ್ದರು. ಸಿನಿಮಾ ನಂತರ ನೈಟ್ ಪಾರ್ಟಿ ಗಳಲ್ಲಿ ಒಂದು ಸಾರಿಯು ಕಾಣಿಸಿಕೊಂಡಿಲ್ಲ.

ಒಂದು ಬಾರಿಯು ವಿವಾದವನ್ನು ಮೈಮೇಲೆ ಎಳೆದುಕೊಂಡಿಲ್ಲ. ಮದುವೆ ಬಳಿಕ ಸಿನಿಮಾ ಇಂದಲೇ ದೂರವಿದ್ದ ಮಯೂರಿ ಅವರು ಮಗು ಹುಟ್ಟಿದ ಬಳಿಕ ಮಗನ ಜೊತೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಹೀಗಿರುವ ಮಯೂರಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದು ಅಚ್ಚರಿಯೇ ಆಗಿತ್ತು. ಮಯೂರಿ ಅವರು ಬಹಳ ಸೆನ್ಸಿಟಿವ್ ಆಗಿರುವುದರಿಂದಲೋ ಏನೋ ಮೊದಲ ವಾರವೇ ಕಣ್ಣೀರು ಹಾಕಿದ್ದಾರೆ. ಊಟದ ವಿಚಾರದಲ್ಲಿ ನಟಿ ನೇಹಾ ಗೌಡ ಅವರು ಹೇಳಿದ ಅದೊಂದು ಮಾತು ಮಯೂರಿ ಅವರಿಗೆ ಹರ್ಟ್ ಆಗಿ ಕಣ್ಣೀರು ಹಾಕಿದರು.

ಇದೇ ವಿಷಯವಾಗಿ ಮಾತನಾಡುತ್ತಾ, ನಾನು ಈ ಮನಗೆ ಆಟ ಆಡೋದಕ್ಕೆ ಬಂದಿದ್ದೀನಿ, ರಿಲೇಶನ್ಷಿಪ್ ಇಟ್ಕೊಳ್ಳೋಕೆ ಬಂದಿಲ್ಲ. ಎಲ್ಲರ ಜೊತೆಗೆ ನಗುತ್ತಾ ಚೆನ್ನಾಗಿಯೇ ಮಾತನಾಡ್ತೀನಿ.. ಆದರೆ ರಿಲೇಶನ್ಷಿಪ್ ಇಟ್ಕೊಳ್ಳೋದಿಲ್ಲ. ಈ ಜರ್ನಿಯನ್ನ ಒಂದು ಆಟವಾಗಿ ನೋಡ್ತೀನಿ..ಎಂದಿದ್ದಾರೆ ನಟಿ ಮಯೂರಿ. ಇಷ್ಟೇ ಅಲ್ಲದೆ, ತಮ್ಮ ಮುದ್ದಿನ ಮಗುವನ್ನು ಸಹ ನೆನೆದು ಕಣ್ಣೀರು ಹಾಕುತ್ತಿದ್ದರು. ಮಯೂರಿ ಅವರು ಇನ್ನು ಈ ನೋವುಗಳಿಂದ ಹೊರಬಂದ ಹಾಗೆ ಕಾಣುತ್ತಿಲ್ಲ. ಮಯೂರಿ ಅವರು ಬೇಸರಗಳಿಂದ ಹೊರಬಂದು, ಆಟವಾಡಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.

Comments are closed.