Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹಚ್ಚಿಕೊಳ್ತು ಬೆಂಕಿ. ಸ್ಪರ್ದಿಗಳ ಮದ್ಯೆ ಫುಲ್ ಜಗಳ. ಏನಾಗುತ್ತಿದೆ ಗೊತ್ತೇ ಬಿಗ್ ಬಾಸ್ ಮನೆಯಲ್ಲಿ??

ಬಿಗ್ ಬಾಸ್ ಮನೆಯಲ್ಲಿ ಕೋಪ ತಾಪ, ಜಗಳ, ಸ್ನೇಹ, ಪ್ರೀತಿ, ಇದೆಲ್ಲವೂ ಇರುತ್ತದೆ. ಬಿಗ್ ಬಾಸ್ ಕನ್ನಡ ಸೀಸನ್9 ಶುರುವಾಗಿ ಒಂದು ವಾರ ಕಳೆದು, ಮೊದಲ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದಿದೆ. ಇಲ್ಲಿ ಉತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನಕ್ಕೆ ಸದಸ್ಯರ ವೋಟಿಂಗ್ ಸಮಯದಲ್ಲಿ ಮನೆಯ ಸ್ಪರ್ಧಿಗಳ ನಡುವೆ ಜಗಳ ನಡೆದಿದೆ. ಈ ಹಿಂದೆ ಆರ್ಯವರ್ಧನ್ ಅವರು, ಈಗ ಎಲ್ಲವೂ ಚೆನ್ನಾಗಿದೆ, ಉತ್ತಮ ಮತ್ತು ಕಳಪೆ ಕೊಡುವ ಸಮಯ ಬಂದಾಗ ಮನೆ ಹತ್ತಿಕೊಳ್ಳುತ್ತೆ ಎಂದು ಹೇಳಿದ್ದರು. ಆ ಮಾತುಗಳೇ ಈಗ ಸತ್ಯವಾಗಿದೆ.

ಉತ್ತಮ ಮತ್ತು ಕಳಪೆ ಪ್ರದರ್ಶನ ನೀಡಿದ ಸದಸ್ಯರನ್ನು ಆಯ್ಕೆ ಮಾಡುವಾಗ, ರೂಪೇಶ್ ಶೆಟ್ಟಿ, ಅರುಣ್ ಸಾಗರ್ ಅವರು ಬಿಗ್ ಬಾಸ್ ರೂಲ್ಸ್ ಫಾಲೋ ಮಾಡಿಲ್ಲ ಅದಕ್ಕಾಗಿ ನಾನು ಕಳಪೆ ಎಂದು ಅವರಿಗೆ ನೀಡುತ್ತೇನೆ ಎಂದರು. ಅದಕ್ಕೆ ಅರುಣ್ ಸಾಗರ್ ಅವರು, ರೂಪೇಶ್ ಶೆಟ್ಟಿ ಇನ್ನು ಎಲ್ಲರ ಜೊತೆಗೆ ಓಪನ್ ಅಪ್ ಆಗಿಲ್ಲ ಅವರು ಯಾರ ಜೊತೆಗು ಬೆರೆಯುವುದಿಲ್ಲ, ರೂಪೇಶ್ ಕಳಪೆಯಲ್ಲಿ ಕಳಪೆ ಎಂದು ಹೇಳಿದ್ದಾರೆ. ಇತ್ತ ಅನುಪಮಾ ಮತ್ತು ನೇಹಾ ಗೌಡ, ರೂಪೇಶ್ ರಾಜಣ್ಣ ಅವರಿಗರ್ ಕಳಪೆ ಪಟ್ಟ ನೀಡಿದ್ದಾರೆ. “ನೀವು ಪ್ರಾಮಾಣಿಕವಾಗಿದ್ದೀರಿ ಅಂತ ಅನ್ನಿಸಲ್ಲ, ತುಂಬಾ ಫೇಕ್ ಅನ್ನಿಸುತ್ತೀರಾ..” ಎಂದಿದ್ದಾರೆ ನೇಹಾ ಗೌಡ.. ಅದಕ್ಕೆ ರೂಪೇಶ್ ರಾಜಣ್ಣ ಅವರು, “ನಾನು ಒರಿಜಿನಲ್ ಆಗಿ ಇರೋದು ಹೀಗೇನೆ. ನಾನೊಬ್ಬ ಹೋರಾಟಗಾರ.. ಇಲ್ಲಿ ನಾಟಕ ಮಾಡುತ್ತಾ ಇರೋದು ಯಾರು ಅಂತ ನನಗೆ ಗೊತ್ತಿದೆ..” ಎಂದು ಹೇಳುತ್ತಾರೆ..

ಆಗ ದೀಪಿಕಾ ದಾಸ್ ಅವರು, “ಇಲ್ಲಿ ಯಾರು ಕೂಡ ಹೋರಾಟ ಮಾಡೋದಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ, “ನಾನು ಮಾತನಾಡುವಾಗ ನೀವು ಮಧ್ಯದಲ್ಲಿ ಮಾತನಾಡಬೇಡಿ..” ಎನ್ನುತ್ತಾರೆ ರೂಪೇಶ್ ರಾಜಣ್ಣ. ಆಗ ದೀಪಿಕಾ ದಾಸ್ ಅವರು, “ಇರುವ ವಿಷಯ ಬಿಟ್ಟು ನೀವು ಬೇರೆ ಎಲ್ಲವನ್ನು ಮಾತನಾಡುತ್ತೀರಿ..” ಎನ್ನುತ್ತಾರೆ. ಈ ಮಾತಿಗೆ ಕೋಪಗೊಳ್ಳುವ ರೂಪೇಶ್ ಶೆಟ್ಟಿ ಅವರು, ನಾನು ಇಲ್ಲಿಗೆ ಯಾರ ಮಾತನ್ನು ಕೇಳೋದಕ್ಕೆ ಬಂದಿಲ್ಲ ಎಂದು ಹೇಳಿ ಮೈಕ್ ತೆಗೆದಿಟ್ಟು ನಾನು ಈ ಆಟ ಆಡುವುದಿಲ್ಲ ಎಂದು ಹೇಳಿ, ಬೆಡ್ ರೂಮ್ ಗೆ ಹೋಗುತ್ತಾರೆ. ಒಟ್ಟಿನಲ್ಲಿ ಮೊದಲ ವಾರವೆ ಹೀಗೆ ಜಗಳ ನಡೆದಿದ್ದು, ಮೊದಲ ವಾರ ಉತ್ತಮ ಪ್ರದರ್ಶನ ಹಾಗು ಕಳಪೆ ಪ್ರದರ್ಶನ ಪಡೆದವರು ಯಾರು, ಜೈಲಿಗೆ ಹೋದವರು ಯಾರು ಎಂದು ತಿಳಿಯಲು ಎಪಿಸೋಡ್ ನೋಡಿ..

Comments are closed.