Neer Dose Karnataka
Take a fresh look at your lifestyle.

ಆಕಾಶದೀಪ ಸೀರಿಯಲ್ ನಟಿಯ ದಾಂಪತ್ಯ ಜೀವನದಲ್ಲಿ ಗಂಡನಿಂದ ನೋವಾದರೂ ಕೊನೆಗೆ ಆಕೆ ಹೇಳಿದ್ದೇನು ಗೊತ್ತೇ?? ಇದು ನಿಜವಾದ ಪ್ರೀತಿ.

ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆ ಪ್ರಸಾರವಾದ ಧಾರವಾಹಿ ಆಕಾಶದೀಪ. ಈ ಧಾರವಾಹಿ ಇಂದ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯ ಶ್ರೀಧರ್, ಆಕಾಶದೀಪ ನಂತರ ತಮಿಳಿನಲ್ಲಿ ಅವಕಾಶ ಸಿಕ್ಕ ಕಾರಣ ಅಲ್ಲಿನ ಧಾರವಾಹಿಗಳಲ್ಲಿ ಅಭಿನಯಿಸಲು ಶುರು ಮಾಡಿದರು, ತಮಿಳು ಧಾರವಾಹಿಯಲ್ಲಿ ತಮ್ಮ ಜೊತೆ ನಟಿಸುತ್ತಿದ್ದ, ನಟ ಅರ್ನವ್ ಅವರೊಡನೆ ಮದುವೆಯಾಗಿ, ಮದುವೆಯ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತೀಚೆಗೆ ಇವರ ಮದುವೆ ವಿಚಾರ ಬಹಿರಂಗಪಡಿಸಿದ್ದರು. ದಿವ್ಯ ಶ್ರೀಧರ್ ಗರ್ಭಿಣಿ ಆಗಿದ್ದಾರೆ ಎಂದು ಸಹ ತಿಳಿದುಬಂದಿತ್ತು.

ಆದರೆ ಇದೀಗ ಇವರು ಚೆನ್ನೈನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ, ದಿವ್ಯ ಅವರು ಆಸ್ಪತ್ರೆ ಪಾಲಾಗಿರುವುದು ಗಂಡನಿಂದಲೇ, ಇವರ ಗಂಡ ನಿಜವಾದ ಹೆಸರನ್ನು ಹೇಳದೆ ದಿವ್ಯ ಅವರೊಡನೆ ಮದುವೆಯಾಗಿದ್ದರು. 5 ವರ್ಷಗಳ ಹಿಂದೆಯೇ ಪರಿಚಯವಾಗಿ ಇಬ್ಬರು ಪ್ರೀತಿ ಮಾಡಿ ಲಿವ್ ಇನ್ ರಿಲೇಶನ್ಷಿಪ್ ನಲ್ಲಿದ್ದರು., ಮದುವೆಯೂ ಮಾಡಿಕೊಂಡರು. ಕೋವಿಡ್ ಸಮಯದಲ್ಲಿ ಗಂಡನಿಗೆ ಕೆಲಸ ಇಲ್ಲದೆ ಇದ್ದಾಗ, ದಿವ್ಯ ಅವರೇ ಗಂಡನನ್ನು ನೋಡಿಕೊಂಡಿದ್ದಾರೆ. ಹಾಗೆಯೇ, 30 ಲಕ್ಷ ರೂಪಾಯಿ ಲೋನ್ ಕೊಡಿಸಿ ಮನೆ ಹೊಸ ಕೊಡಿಸಿದ್ದರು ಸಹ, ಗಂಡನಿಂದ ಸಿಕ್ಕಿದ್ದು ನೋವು ಕಿರುಕುಳ ಹಿಂಸೆ ಮಾತ್ರವೇ ಆಗಿದೆ.

ದಿವ್ಯ ಅವರು ಗರ್ಭಿಣಿ ಎನ್ನುವುದನ್ನು ನೋಡದೆ, ಹೊಡೆಸಿ ಥಳಿಸಿದ್ದಾರೆ. ಗಂಡನನ್ನು ಅಷ್ಟು ಚೆನ್ನಾಗಿ ನೋಡಿಕೊಂಡಿದ್ದರು, ಆತ ಹೀಗೆ ಮಾಡಿ, ಆಸ್ಪತ್ರೆ ಸೇರುವ ಹಾಗೆ ಆಗಿದ್ದರು ಸಹ ದಿವ್ಯ ಅವರು, ಮತ್ತೆ ಗಂಡ ಬೇಕು ಎಂದು ಕೇಳುತ್ತಿದ್ದಾರೆ, ನನಗೆ ನನ್ನ ಗಂಡ ಬೇಕು, ನನ್ನ ಮಗು ಚೆನ್ನಾಗಿರಬೇಕು, ನನಗೋಸ್ಕರ ಮತ್ತು ನನ್ನ ಮಗುವಿಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು ವಿಡಿಯೋ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಷ್ಟು ಪ್ರೀತಿ ಮಾಡಿ ಮದುವೆಯಾಗಿ ಗಂಡನನ್ನು ಒಂದು ಪುಟ್ಟ ಮಗುವಿನ ಹಾಗೆ ನೋಡಿಕೊಂಡಿದ್ದರು ಸಹ, ಆತ ಈ ರೀತಿ ಮೋಸ ಮಾಡಿದ್ದು, ಹಾಗಿದ್ದರೂ ಇವರು ಗಂಡನೆ ಬೇಕು ಎನ್ನುತ್ತಿರುವುದು ಒಂದು ಹೆಣ್ಣಿನ ಪ್ರೀತಿ ಎಂಥದ್ದು ಎಂದು ತೋರಿಸುತ್ತದೆ.

Comments are closed.