Neer Dose Karnataka
Take a fresh look at your lifestyle.

ಆರ್ಯವರ್ಧನ್ ರವರ ಪಾತ್ರಕ್ಕೆ ಬಂದಿರುವ ಹರೀಶ್ ರಾಜ್ ರವರ ನಟನೆಯ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆ ಏನು ಗೊತ್ತೇ?? ಅನಿರುದ್ ರವರಂತೆ ಇಷ್ಟ ಪಟ್ಟರೆ??

ಜೊತೆ ಜೊತೆಯಲಿ ಧಾರವಾಹಿ ಈಗ ಬೇರೆ ರೀತಿಯಲ್ಲಿ ಸಾಗುತ್ತಿದೆ, ಅನಿರುದ್ಧ ಅವರು ಧಾರವಾಹಿ ಇಂದ ಹೊರಬಂದ ಬಳಿಕ, ಹರೀಶ್ ರಾಜ್ ಅವರು ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಹರೀಶ್ ರಾಜ್ ಅವರ ಪಾತ್ರದ ಪರಿಚಯ ಆಗಿರುವುದು ಸಂಜು ಎನ್ನುವ ಹೆಸರಿನಲ್ಲಿ, ಅಪಘಾತದಲ್ಲಿ ಆರ್ಯವರ್ಧನ್ ತಲೆಗೆ ಪೆಟ್ಟು ಬಿದ್ದಿರುವ ಕಾರಣ ಹಳೆಯದೆಲ್ಲವನ್ನು ಮರೆತಿದ್ದಾನೆ, ಪ್ಲಾಸ್ಟಿಕ್ ಸರ್ಜರಿ ಸಹ ಆಗಿರುವುದರಿಂದ, ಆತ ಆರ್ಯನೇ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗುತ್ತಿಲ್ಲ, ಸ್ವತಃ ಆರ್ಯನಿಗೂ ಗೊತ್ತಾಗುತ್ತಿಲ್ಲ. ಈ ಸಮಯದಲ್ಲಿ ಸಂಜುಗೆ ಹಳೆಯ ನೆನಪುಗಳು ಬರುವ ಹಾಗೆ ಭಾಸವಾಗುತ್ತಿದೆ. ಹಳೆಯ ಆರ್ಯವರ್ಧನ್, ನಟ ಅನಿರುದ್ಧ ಅವರನ್ನು ಮರೆತು ಈ ಹೊಸ ಪಾತ್ರವನ್ನ ಜನರು ಒಪ್ಪಿಕೊಂಡರೆ? ಈಗ ಜೊತೆ ಜೊತೆಯಲಿ ಧಾರವಾಹಿ ಹೇಗೆ ನಡೆಯುತ್ತಿದೆ?

ಧಾರವಾಹಿಯಲ್ಲಿ ಈಗ ಸಂಜುಗೆ ಹಳೆಯ ನೆನಪುಗಳು ಸ್ವಲ್ಪ ಮರಳಿ ಬರುತ್ತಿದೆ, ಕೌನ್ಸೆಲಿಂಗ್ ಗೆ ಹೋಗಿದ್ದ ಸಂಜುಗೆ ಹಳೆಯ ಪ್ರೀತಿಯ ನೆನೆಪುಗಳು ಸಣ್ಣದಾಗಿ ಮರುಕಳಿಸುತ್ತಿದೆ. ಇದರಿಂದ ಸಂತೋಷವಾಗಿ ಬಸ್ ನಲ್ಲಿ ಹೋಗುತ್ತಿದ್ದ ಸಂಜು, ಇದ್ದಕ್ಕಿದ್ದ ಹಾಗೆ ಬಸ್ ಇಂದ ಇಳಿದುಕೊಂಡಿದ್ದಾನೆ, ಆತ ಇಳಿದಿರುವುದು ಕಮಲಮ್ಮನ ವಠಾರದಲ್ಲಿ, ಆ ಜಾಗಕ್ಕೆ ಬಂದಿದ್ದಾದರು ಯಾಕೆ ಎಂದು ಸಂಜುಗು ಅರ್ಥವಾಗುತ್ತಿಲ್ಲ, ತನಗೂ ಆ ಜಾಗಕ್ಕೂ ಏನೋ ಸಂಬಂಧ ಇದೆ ಎನ್ನಿಸುತ್ತಿದೆ, ವಠಾರಕ್ಕೆ ಬಂದ ತಕ್ಷಣ ಅನು ಸಿರಿಮನೆ ಅವರ ತಂದೆ ಸುಬ್ಬು, ಸಂಜುವನ್ನು ನೋಡಿ ಮನೆಗೆ ಕರೆದುಕೊಂಡು ಹೋಗುತ್ತಾರೆ, ಮುಂಚೆ ಈ ಜಾಗಕ್ಕೆ ತುಂಬಾ ಸಾರಿ ಬಂದಿರುವುದಾಗಿ ಅನ್ನಿಸಿ ಅದೇ ಜಾಗದಲ್ಲಿ ಇಳಿದುಕೊಂಡೆ, ಯಾಕೆ ಅಂತ ಗೊತ್ತಿಲ್ಲ ಎಂದು ಹೇಳುತ್ತಾನೆ ಸಂಜು.

ಮನೆಯೊಳಗೆ ಹೋದಾಗ, ಪುಷ್ಪ ಶುಂಠಿ ಟೀ ತಂದುಕೊಡುತ್ತಾರೆ, ಅದನ್ನು ಕುಡಿಯುತ್ತಾ, ಟೀ ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾ, ಈ ಟೀ ಮೊದಲ ಸಲ ಕುಡಿತಾ ಇದ್ದೀನಿ ಅಂತ ಅನ್ನಿಸುತ್ತಾ ಇಲ್ಲ, ಹಿಂದೆ ತುಂಬಾ ಸಲ ಕುಡಿದಿದ್ದೀನಿ ಎಂದು ಅನ್ನಿಸುತ್ತಿದೆ ಎನ್ನುತ್ತಾನೆ, ಆಗ ಪುಷ್ಪ ನನ್ನ ಅಳಿಯ ಬಿಟ್ಟರೆ ಈ ಟೀ ಬಗ್ಗೆ ಹೊಗಳಿದ್ದು ನೀವು ಮಾತ್ರ ಎಂದು ಹೇಳುತ್ತಾರೆ. ಇತ್ತ ಅನು ನೀರಿನಲ್ಲಿ ಬಿದ್ದ ಬಳಿಕ ಅಪ್ಪನ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಯೇ ರೆಸ್ಟ್ ಪಡೆಯುತ್ತಿದ್ದಾಳೆ ಅನು. ಅನುವನ್ನು ನೋಡಿದರು ಸಂಜುಗೆ ಈ ಹಿಂದೆ ಹೆಚ್ಚು ಆತ್ಮೀಯತೆ ಇತ್ತು ಎನ್ನುವ ಭಾವನೆ ಮೂಡಿದೆ. ಇತ್ತ ಅನುಗು ಅದೇ ರೀತಿ ಅನ್ನಿಸುತ್ತಿದೆ. ಆರ್ಯವರ್ಧನ್ ಪಾತ್ರ ಬದಲಾಗಿದಾಗಜ್ ಮೊದಲಿಗೆ ಹೊಸ ಪಾತ್ರ ಒಪ್ಪಿಕೊಳ್ಳಲು ಜನರಿಗೆ ಕಷ್ಟವಾದರು ಕೂಡ ಈಗ ಜನರು ನಿಧಾನವಾಗಿ ಹೊಸ ಪಾತ್ರವನ್ನು ಇಷ್ಟಪಡಲು ಶುರು ಮಾಡಿದ್ದಾರೆ.

Comments are closed.