Neer Dose Karnataka
Take a fresh look at your lifestyle.

ಸುಖಾಸುಮ್ಮನೆ ಅಪ್ಪು ವಿವಾದ ಕೆದಕಿದ ರಮ್ಯಾ: ಪುನೀತ್ ಪರಂಪರೆ ಮುಂದುವರೆಸುವುದು ಯಾರಂತೆ ಗೊತ್ತೇ?? ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಕರ್ನಾಟಕದ ವನ್ಯ ಸ್ಥಳಗಳನ್ನು ತೋರಿಸಿರುವ ಡಾಕ್ಯುಮೆಂಟರಿ ಗಂಧಗುಡಿ ಆಕ್ಟೊಬರ್ 28ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಇದು ಅಪ್ಪು ಅವರ ಬಹುದೊಡ್ಡ ಕನಸಾಗಿತ್ತು. ಇನ್ನಿಲ್ಲವಾಗುವ ಒಂದೆರಡು ದಿನಗಳ ಮುಂಚೆಯಷ್ಟೇ ಅಪ್ಪು ಅವರು ಗಂಧದಗುಡಿ ಡಾಕ್ಯುಮೆಂಟರಿ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಸಣ್ಣ ಸುಳಿವು ಒಂಸನ್ನು ನೀಡಿದ್ದರು. ಆದರೆ ಈ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ತಿಳಿದು ಬಂದಿದ್ದು ಅಪ್ಪು ಅವರು ಮೃತರಾದ ಬಳಿಕ.

ಅಪ್ಪು ಅವರ ಈ ಅತಿದೊಡ್ಡ ಕನಸ್ಸನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊರತರುತ್ತಿದ್ದಾರೆ. ಗಂಧದಗುಡಿ ಡಾಕ್ಯುಮೆಂಟರಿಯನ್ನು ನ್ಯಾಷನಲ್ ಅವಾರ್ಡ್ ವಿನ್ನರ್ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದಾರೆ. ಅಪ್ಪು ಅವರು ಮತ್ತು ಅಮೋಘವರ್ಷ ಅವರು ಇಡೀ ಕರ್ನಾಟಕ ಸುತ್ತಿ ಈ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಗಂಧದಗುಡಿ ಟೀಸರ್ ನೋಡಿಯೇ ಅಭಿಮಾನಿಗಳು ಫಿದಾ ಆಗಿ ಕಾತುರರಾಗಿ ಕಾಯುತ್ತಿದ್ದರು.

ಆಕ್ಟೊಬರ್ 9ರಂದು ಗಂಧದಗುಡಿ ಡಾಕ್ಯುಮೆಂಟರಿ ಟೀಸರ್ ನೋಡಿ, ಒಂದು ಕಡೆ ಅಪ್ಪು ಅವರು ಎಂಥಹ ಅದ್ಭುತ ಪ್ರಯತ್ನ ಮಾಡಿದ್ದಾರೆ ಎಂದು ಸಂತೋಷವಾದರೆ, ಮತ್ತೊಂದು ಕಡೆ ಮಹಾನುಭಾವ ಇಲ್ಲ ಎನ್ನುವ ನೋವು ಸಹ ಇದೆ. ಆಕ್ಟೊಬರ್ 9ರಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಶ್ವಿನಿ ಪುನೀತ್ ರಾಜ್ ಅವರು ಗಂಧದಗುಡಿ ಟ್ರೈಲರ್ ಬಿಡುಡೆ ಮಾಡಿದರು, ರಾಘಣ್ಣ ಅವರು ಮತ್ತು ದೊಡ್ಮನೆ ಕುಟುಂಬ ಅಲ್ಲಿತ್ತು. ಟ್ರೈಲರ್ ನೋಡಿ ಅಲ್ಲಿದ್ದ ಎಲ್ಲರೂ ಭಾವುಕರಾದರು. ಅಶ್ವಿನಿ ಅವರು ಮಾತನಾಡಿ ನಿಮ್ಮ ಅಪ್ಪು ಅವರ ಸಿನಿಮಾ, ತಪ್ಪದೇ ನೋಡಿ ಎಂದು ಮನವಿ ಮಾಡಿದರು.

ಗಂಧದಗುಡಿ ಟ್ರೈಲರ್ ಈಗಾಗಲೇ 1 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಸಣ್ಣ ಹಳ್ಳಿಯ ಪ್ರತಿಯೊಬ್ಬರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರ ವರೆಗು ಎಲ್ಲರೂ ಗಂಧದಗುಡಿ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕ್ಟೊಬರ್ 28ರಂದು ಗಂಧದಗುಡಿ ಬಿಡುಗಡೆಯಾಗಲಿದೆ. ಇದು ಅಪ್ಪು ಅವರನ್ನು ಕೊನೆಯ ಬಾರಿ ಥಿಯೇಟರ್ ನಲ್ಲೂ ಕಣ್ತುಂಬಿಕೊಳ್ಳುವ ಕೊನೆಯ ಅವಕಾಶ. ಹಾಗಾಗಿ ಗಂಧದಗುಡಿ ಡಾಕ್ಯುಮೆಂಟರಿ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡದಾಗಿ ಬಿಡುಗಡೆ ಮಾಡುವ ಪ್ಲಾನ್ ಮಾಡುಕೊಳ್ಳಲಾಗಿದೆ. ಆಕ್ಟೊಬರ್ 21ರಂದು ಗಂಧದಗುಡಿ ಡಾಕ್ಯುಮೆಂಟರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಇಡೀ ದೊಡ್ಮನೆ ಕುಟುಂಬ ಮತ್ತು ಕನ್ನಡ ಚಿತ್ರರಂಗದ ಗಣ್ಯರು ಅತಿಥಿಗಳಾಗಿ ಬರಲಿದ್ದಾರೆ.

ಇದಕ್ಕಾಗಿ ವಿಶೇಷವಾದ ಇನ್ವಿಟೇಶನ್ ಮಾಡಿಸಲಾಗಿದೆ, ಪೂರ್ತಿ ಮರದಲ್ಲಿ ಮಾಡಿರುವ ಇನ್ವಿಟೇಶನ್ ಜೊತೆಗೆ ಅಪ್ಪು ಅವರ ಪುತ್ಥಳಿ ಇದೆ, ಜೊತೆಗೆ, ಗಂಧದ ತುಂಡಿನಲ್ಲಿ ಪುನೀತ್ ರಾಜ್ ಕುಮಾರ್ ಎಂದು ಬರೆದಿರುವ ಹಸ್ತಾಕ್ಷರ ಸಹ ಇದೆ. ಈ ವಿಶೇಷವಾದ ಆಹ್ವಾನ ಪತ್ರಿಕೆಯನ್ನು ಗಣ್ಯರಿಗೆ ನೀಡಿ ಆಮಂತ್ರಿಸಲಾಗುತ್ತಿದೆ. ನಟಿ ರಮ್ಯಾ ಅವರಿಗೆ ಯುವ ರಾಜ್ ಕುಮಾರ್ ಅವರು ಆಮಂತ್ರಣ ನೀಡಿದ್ದು, ಯುವ ಅವರ ಜೊತೆಗಿನ ಫೋಟೊವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದ ರಮ್ಯಾ ಅವರು, ಮೈ ಸ್ವೀಟ್ ಬಾಯ್ ಈಗ ಚಿಕ್ಕ ಹುಡುಗನಲ್ಲ, ಅಪ್ಪು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ ಎಂದು ಬರೆದುಕೊಂಡಿದ್ದರು.

ಇದನ್ನು ನೋಡಿದ ಅಭಿಮಾನಿಗಳು ಸಿಟ್ಟಿನಿಂದ ಉತ್ತರ ಕೊಡುತ್ತಿದ್ದಾರೆ. ಅಪ್ಪು ಅವರದ್ದು ಸುವರ್ಣ ಪರಂಪರೆ, ಕನ್ನಡದ ಸುವರ್ಣ ಯುವ ಅವರದ್ದು, ಅವರಷ್ಟು ಸಮರ್ಥವಾಗಿ ಇನ್ಯಾರಿಂದಲು ಅದನ್ನು ಉಳಿಸಿಕೊಂಡು ಹೋಗಲು ಆಗುವುದಿಲ್ಲ. ನಿಮ್ಮ ಪ್ರಾಚಾರಕ್ಕೆ ಅಪ್ಪು ಅವರನ್ನು ಎಳೆದು ತರಬೇಡಿ ಎಂದು ರಮ್ಯಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗದುಕೊಂಡಿದ್ದಾರೆ ಅಭಿಮಾನಿಗಳು.

Comments are closed.