Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಕಾಂತಾರ ಸಿನೆಮಾ ನೋಡಿದ ಅಲ್ಲೂ ಅರ್ಜುನ್ ತಂದೆ ಅರವಿಂದ್ ಹೇಳಿದ್ದೇನು ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ಅರವಿಂದ್.

ಈಗ ಎಲ್ಲಾ ಕಡೆ ಕಾಂತಾರ ಸಿನಿಮಾದ್ದೇ ಹವಾ ನಡೀತಾ ಇದೆ. ನಮ್ಮ ಕನ್ನಡದ ಸಿನಿಮಾ ಒಂದು ಇಷ್ಟು ಎತ್ತರಕ್ಕೆ ಬೆಳೆಯುತ್ತಿರುವುದು, ಕನ್ನಡ ಚಿತ್ರರಂಗದ ಬಗ್ಗೆ ಎಲ್ಲಾ ಭಾಷೆಯವರು ಮಾತನಾಡಿ, ಕನ್ನಡ ಸಿನಿಮಾಗಳನ್ನು ನೋಡಬೇಕು ಎನ್ನುವ ಹಾಗೆ ಮಾಡಿರುವ ಕಾಂತಾರ ಸಿನಿಮಾ ನಮ್ಮ ಹೆಮ್ಮೆ ಎಂದೇ ಹೇಳಬಹುದು. ಈಗ ಕಾಂತಾರ ಸಿನಿಮಾಗೆ ಡಿಮ್ಯಾಂಡ್ ಹೇಗಿದ್ರೆ ಅಂದ್ರೆ, ಬೇರೆ ಭಾಷೆಯ ಸಿನಿಮಾ ತಯಾರಕರು ನಾ ಮುಂದು ತಾ ಮುಂದು ಎಂದು ಬಂದು ನಮ್ಮ ಭಾಷೆಗೆ ಕಾಂತಾರ ಸಿನಿಮಾವನ್ನು ಡಬ್ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ.

ಅದೇ ರೀತಿ ಈ ವಾರ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಕಾಂತಾರ ಸಿನಿಮಾ ಬಿಡುಗಡೆ ಆಗುತ್ತಿದೆ. ಕಾಂತಾರ ತೆಲುಗು ವರ್ಷನ್ ಅನ್ನು ಗೀತಾ ಆರ್ಟ್ಸ್ ಬ್ಯಾನರ್ ನ ಅಲ್ಲು ಅರವಿಂದ್ ಅವರು, ನಟ ಅಲ್ಲು ಅರ್ಜುನ್ ಅವರ ತಂದೆ ಖರೀದಿ ಮಾಡಿದ್ದಾರೆ. ತೆಲುಗು ಪ್ರೆಸ್ ಮೀಟ್ ನಲ್ಲಿ ಅಲ್ಲು ಅರವಿಂದ್ ಅವರು ಸಹ ಬಂದು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ, ಅಲ್ಲು ಅರವಿಂದ್ ಅವರು ಕಾಂತಾರ ಸಿನಿಮಾ ಬಗ್ಗೆ ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. “ಪುಷ್ಪ ಸಿನಿಮಾ ನೋಡಿದ ಎಲ್ಲರಿಗೂ ಕಾಂತಾರ ಸಿನಿಮಾ ತುಂಬಾ ಇಷ್ಟ ಆಗುತ್ತೆ. ಎರಡು ಸಿನಿಮಾಗಳು ಕಾಡಿನ ಬ್ಯಾಕ್ ಡ್ರಾಪ್ ನಲ್ಲಿ ತೆಗೆದಿರೋದು, ಕಾಂತಾರದಲ್ಲಿ ಕಾಡಿನ ಜೊತೆಗೆ ದೈವದ ಅಂಶ ಇದೆ, ಸಿನಿಮಾ ಕಥೆಯನ್ನು ರಿಷಬ್ ಶೆಟ್ಟಿ ಅವರು ಅಚ್ಚುಕಟ್ಟಾಗಿ ಬರೆದಿದ್ದಾರೆ.

ಒಂದು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಅದ್ಧೂರಿಯಾಗಿ ತೆರೆಮೇಲೆ ತರುವಲ್ಲಿ ನಾನು ಅನೇಕ ಪ್ರಯತ್ನಗಳನ್ನು ಮಾಡಿದ್ದೇನೆ, ಹೊಂಬಾಳೆ ಸಂಸ್ಥೆಯಿಂದ ಕೆಲವು ವಿಷಯಗಳನ್ನು ಕಲಿಯಬೇಕು ಎಂದು ನನಗೆ ಅನ್ನಿಸಿತು. ರಿಷಬ್ ಶೆಟ್ಟಿ ಡೈರೆಕ್ಟ್ ಮಾಡಿರುವ ಸಿನಿಮಾಗಳನ್ನ ನೋಡಿದ್ದೇ, ಬೆಲ್ ಬಾಟಮ್ ಸಿನಿಮಾದಲ್ಲಿ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದೆ. ಆದರೆ ಕಾಂತಾರ ಸಿನಿಮಾದಲ್ಲಿ ಅವರ ನಟನೆ ಅತ್ಯದ್ಭುತ. ಕೊನೆಯ 40 ನಿಮಿಷಗಳ ಕಾಲ ಉಸಿರನ್ನು ಬಿಗಿಹಿಡಿದು, ಸೀಟ್ ಇಂದ ಮುಂದೆ ಬಂದು ಕೂತು ಸಿನಿಮಾ ನೋಡಿದ್ದೀನಿ. ನಾನು ಹೇಗೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ನೋ ನೀವು ಹಾಗೆ ಎಂಜಾಯ್ ಮಾಡ್ತೀರಾ ಅಂತ ಭಾವಿಸುತ್ತೇವೆ..” ಎಂದು ಕಾಂತಾರ ಸಿನಿಮಾವನ್ನು ಮತ್ತು ರಿಷಬ್ ಶೆಟ್ಟಿ ಅವರ ಅಭಿನಯವನ್ನು ಹಾಡಿ ಹೊಗಳಿದ್ದಾರೆ ಅಲ್ಲು ಅರವಿಂದ್.

Comments are closed.