Neer Dose Karnataka
Take a fresh look at your lifestyle.

ಬುಮ್ರಾ ಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಿದ್ ಗವಾಸ್ಕರ್: ತಂಡ ಸೇರಿಕೊಳ್ಳಬೇಕಾದ ಖಡಕ್ ಆಟಗಾರ ಯಾರು ಗೊತ್ತೇ?? ಈತ ಬಂದರೆ ಕಪ್ ನಮ್ಮದೇನಾ?

ವಿಶ್ವಕಪ್ ಪಂದ್ಯಗಳು ಶುರುವಾಗಲು ಉಳಿದಿರುವುದು ಇನ್ನು ಕೆಲವು ದಿನಗಳು ಮಾತ್ರ, ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಸಹ ಭಾರತ ತಂಡದಲ್ಲಿ ಇರುವ ಸಮಸ್ಯೆಗಳು ಗೊಂದಲಗಳು ಇನ್ನು ಕಡಿಮೆ ಆಗಿಲ್ಲ. ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಸಮಸ್ಯೆಯಿಂದ ವಿಶ್ವಕಪ್ ಇಂದ ಹೊರಗುಳಿದಿದ್ದಾರೆ, ಅವರ ಬದಲಿ ಆಟಗಾರನನ್ನು ಭಾರತ ತಂಡ ಇನ್ನು ಆಯ್ಕೆ ಮಾಡಿ, ತಿಳಿಸದೆ ಇರುವುದು ಸಹ ಆತಂಕಕ್ಕೆ ಕಾರಣವಾಗಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಜಸ್ಪ್ರೀತ್ ಬುಮ್ರ ಅವರ ಬದಲಾಗಿ ಸ್ಟ್ಯಾಂಡ್ ಬೈ ನಲ್ಲಿರುವ ಇಬ್ಬರು ಆಟಗಾರರಲ್ಲಿ ಒಬ್ಬರು ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಆಯ್ಕೆಗೆ ಇರುವುದು ಮೊಹಮ್ಮದ್ ಶಮಿ ಅವರು ಮತ್ತು ದೀಪಕ್ ಚಹರ್ ಅವರು, ದೀಪಕ್ ಚಹರ್ ಅವರಿಗೂ ಆಂಕಲ್ ಟ್ವಿಸ್ಟ್ ಆಗಿರುವುದರಿಂದ ಅವರು ಸಹ ವಿಶ್ವಕಪ್ ಇಂದ ಹೊರಬಿದ್ದಿದ್ದಾರೆ. ಶಮಿ ಅವರನ್ನೇ ಆಯ್ಕೆಮಾಡಬಹುದು ಎಂದು ಚರ್ಚೆಗಳು ನಡೆಯುತ್ತಿರುವಾಗ, ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರು ಮತ್ತೊಬ್ಬ ಆಟಗಾರನನ್ನು ಆಯ್ಕೆ ಮಾಡಿ ಶಾಕ್ ನೀಡಿದ್ದಾರೆ.

ಗವಾಸ್ಕರ್ ಅವರಿಗೆ ಬುಮ್ರ ಅವರ ಬದಲಾಗಿ ಯಾವ ಆಟಗಾರನನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳಲಾಗಿದ್ದು, “ನಾನು ಸಿರಾಜ್ ಅವರನ್ನು ಆಯ್ಕೆ ಮಾಡುತ್ತೇನೆ. ಏಕೆಂದರೆ ಶಮಿ ಅವರು ಇತ್ತೀಚೆಗೆ ಯಾವ ಪಂದ್ಯವನ್ನು ಆಡಿಲ್ಲ..ಅವರನ್ನು ಆಯ್ಕೆ ಮಾಡಿದರೆ, ವಿಶ್ವಕಪ್ ನಲ್ಲೇ ನೇರವಾಗಿ ಆಡಬೇಕಾಗುತ್ತದೆ. ಶಮಿ ಅವರು 15 ಸದಸ್ಯರ ಸ್ಕ್ವಾಡ್ ಗೆ ಸೆಲೆಕ್ಟ್ ಆಗಿಲ್ಲ, ಇವರು ಅಡದೆ ಇರುವುದು ಆತಂಕಕಾರಿ ಅಂಶ. ಅವರ ಸಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ. ಆದರೆ ಕೋವಿಡ್ ಇಂದ ಚೇತರಿಸಿಕೊಂಡ ಬಳಿಕ ಆಡುವುದು ಬಹಳ ಕಷ್ಟ, ಅದಕ್ಕಿಂತ ಮೊದಲು ಕೂಡ ಶಮಿ ಅವರು ಆಟವಾಡಿಲ್ಲ. ಸಿರಾಜ್ ಅವರನ್ನು ನೋಡಿದರೆ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ, ಅವರು ಬೌಲಿಂಗ್ ಮಾಡುತ್ತಿರುವ ರೀತಿ ಚೆನ್ನಾಗಿದೆ..”ಎಂದಿದ್ದಾರೆ ಸುನೀಲ್ ಗವಾಸ್ಕರ್.

Comments are closed.