Neer Dose Karnataka
Take a fresh look at your lifestyle.

ತನ್ನನ್ನು ಬಿಟ್ಟು ಹೋಗುತ್ತಿರುವ ನರೇಶ್ ರವರಿಗೆ ಶಾಕ್ ಕೊಟ್ಟ ಪವಿತ್ರ: ಬೇಡಿಕೆ ಇಟ್ಟದ್ದು ಎಷ್ಟು ಹಣಕ್ಕೆ ಗೊತ್ತೇ??

ತೆಲುಗಿನ ಖ್ಯಾತ ಹಿರಿಯ ನಟಿ ವಿಜಯ ನಿರ್ಮಲ ಅವರ ಮಗ ನರೇಶ್ ಅವರು ಇತ್ತೀಚಿನ ದಿನಗಳಲ್ಲಿ ಹಲವು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಜಗಳಗಳು, ಅಫೇರ್ ಗಳು ಇಂತಹ ವಿಚಾರದ ಮೂಲಕ ಸುದ್ದಿಯಲ್ಲಿದ್ದಾರೆ ನರೇಶ್. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ರಿಲೇಶನ್ಷಿಪ್ ವಿಚಾರ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು, ಕೆಲ ದಿನಗಳಿಂದ ಇದೆ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇವರಿಬ್ಬರ ಬಗ್ಗೆ ಮೀಡಿಯಗಳು ಅದು ಇದು ಸುದ್ದಿ ಹೊರಬಿಡುತ್ತಲೇ ಇರುವಾಗ, ಪವಿತ್ರಾ ಲೋಕೇಶ್ ಅವರು ತಮ್ಮ ರಿಲೇಶನ್ಷಿಪ್ ವಿಚಾರದ ಬಗ್ಗೆ ಬಹಿರಂಗವಾಗಿಯೇ ಕಮೆಂಟ್ ಮಾಡಿದ್ದರು. ತಾವಿಬ್ಬರು ಜೊತೆಗೆ ಇರುವುದಾಗಿಯು, ತಮ್ಮಿಬ್ಬರಿಗೂ ಮದುವೆ ಆಗಿಲ್ಲ ಎಂದು, ತಮ್ಮನ್ನು ಸಪೋರ್ಟ್ ಮಾಡಬೇಕು ಎಂದು ಕೇಳಿಕೊಂಡಿದ್ದರು ಪವಿತ್ರಾ ಲೋಕೇಶ್.

ಇವರಿಬ್ಬರ ಮದುವೆ ಆಗಿತ್ತೋ ಇಲ್ಲವೋ ಎನ್ನುವುದು ಒಂದು ಕಡೆಯಾದರೆ, ಇವರಿಬ್ಬರು ಜೊತೆಯಾಗಿ ಜೀವನ ಮಾಡುತ್ತಿದ್ದಾರೆ ಎನ್ನುವುದು ಅವರಿಬ್ಬರೇ ಹೇಳಿಕೊಂಡಿರುವ ಹಾಗೆ ಸತ್ಯವೇ ಆಗಿದೆ. ಆದರೆ ಸಧ್ಯಕ್ಕೆ ತಿಳಿದು ಬಂದಿರುವ ವಿಚಾರ ಏನೆಂದರೆ, ನರೇಶ್ ಅವರು ಪವಿತ್ರಾ ಲೋಕೇಶ್ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡು ಅವರಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಲಿವುಡ್ ನಲ್ಲಿ ಕಳೆದ ಎರಡು ದಿನಗಳಿಂದ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ. ನರೇಶ್ ಅವರ ನಾಲ್ಕನೇ ಪ್ರಯತ್ನ ನಡೆಯಲಿಲ್ಲವೇ? ಪವಿತ್ರಾ ಅವರನ್ನು ಬಿಟ್ಟುಬಿಟ್ರ? ಇಂತಹ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ಉತ್ತರ ಬೇರೆಯೇ ಸಿಕ್ಕಿದ್ದು, ನರೇಶ್ ಅವರು ಮತ್ತೊಬ್ಬ ಮಹಿಳೆಯ ಜೊತೆಗೆ ಆತ್ಮೀಯತೆ ಇಂದ ಇದ್ದಾರಂತೆ, ಹಾಗಾಗಿ ಪವಿತ್ರಾ ಅವರೇ ಈ ಸಂಬಂಧದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ..ಆದರೆ ಈ ವಿಚಾರದ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ..

ತೆಲುಗಿನ ಹಿರಿಯನಟಿ ಮತ್ತು ನಿರ್ದೇಶಕಿ ವಿಜಯ ನಿರ್ಮಲಾ ಅವರ ಮಗ ನರೇಶ್ ಅವರು ನಾಯಕನಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಲವು ಸಿನಿಮಾಗಳಲ್ಲಿ ನಟಿಸಿ ಸೂಪರ್ ಹಿಟ್ ಹೀರೋ ಎನ್ನಿಸಿಕೊಂಡಿದ್ದರು. ವರ್ಷಗಳು ಕಳೆದ ಹಾಗೆ, ನಾಯಕನಾಗಿ ನಟಿಸುವ ಅವಕಾಶಗಳು ಕಡಿಮೆಯಾದಾಗ, ಬೇಸರ ಮಾಡಿಕೊಳ್ಳದೆ ಕ್ಯಾರೆಕ್ಟರ್ ಆರ್ಟಿಸ್ಟ್ ಪಾತ್ರಗಳಲ್ಲಿ ನಟಿಸಲು ಶುರು ಮಾಡಿದರು. ಈಗಿನ ಹೀರೋಗಳಿಗೆ ತಂದೆಯ, ಚಿಕ್ಕಪ್ಪನ ಪಾತ್ರಗಳಲ್ಲಿ ನಟಿಸುತ್ತಾರೆ. ಇವರ ವೃತ್ತಿಜೀವನ ಏನೋ ಚೆನ್ನಾಗಿದೆ, ಆದರೆ ವೈಯಕ್ತಿಕ ಜೀವನದ ವಿಚಾರದಲ್ಲಿ ಬಹಳಷ್ಟು ಏರಿಳಿತಗಳನ್ನು ನೋಡಿದ್ದಾರೆ. ಈಗ ಪವಿತ್ರಾ ಅವರ ಜೊತೆಗಿನ ಬ್ರೇಕಪ್ ವಿಚಾರ ವೈರಲ್ ಆಗುತ್ತಿದ್ದು, ಮೀಡಿಯಾಗಳು ಈ ಸುದ್ದಿ ಹಬ್ಬಿಸಿವೆ, ಆದರೆ ಈ ಇಬ್ಬರು ಕಲಾವಿದರು ಇದರ ಬಗ್ಗೆ ಅಧಿಕೃತವಾಗಿ ಏನು ಹೇಳಿಕೆ ನೀಡಿಲ್ಲ.

Comments are closed.