Neer Dose Karnataka
Take a fresh look at your lifestyle.

ಕೊನೆಗೂ ಸಿಕ್ತು ಖಚಿತ ಮಾಹಿತಿ: ಗಟ್ಟಿಮೇಳ ಮೂಲಕ ಜನರ ಮನಗೆದಿರುವ ಧ್ರುವ ನಿಜಕ್ಕೂ ಯಾರು ಗೊತ್ತೇ?? ಅಪ್ಪು ಜೊತೆ ಕಾಣಿಸಿಕೊಳ್ಳುವುದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಸಿನಿಮಾಗಳು ನಂಬರ್ ವನ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರು. ಈಗ ಕಿರುತೆರೆ ಕ್ಷೇತ್ರ ಬೆಳೆದು ನಿಂತಿರುವುದರಿಂದಾಗಿ ದಾರವಾಹಿಗಳು ನಂಬರ್ 1 ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿವೆ. ಇಂದಿನ ವಿಚಾರದಲ್ಲಿ ನಾವು ಇದೇ ಕಿರುತೆರೆ ಕ್ಷೇತ್ರದ ಧಾರವಾಹಿಯೊಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ.

ಅದರಲ್ಲೂ ನಾವು ಇಂದು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಕುರಿತಂತೆ. ಗಟ್ಟಿಮೇಳ ಧಾರಾವಾಹಿ ಪ್ರಸಾರವಾಗಲು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಕೂಡ ಪ್ರೇಕ್ಷಕರಿಗೆ ಒಂದು ಕ್ಷಣವು ಕೂಡ ಬೇಸರವನ್ನು ನೀಡಿಲ್ಲ.ಪ್ರೇಕ್ಷಕರು ಗಟ್ಟಿಮೇಳ ಧಾರಾವಾಹಿ ಯನ್ನು ಹಾಗೂ ಅದರಲ್ಲಿ ಬರುವಂತಹ ದ್ರುವ ಪಾತ್ರವನ್ನು ನೋಡಲು ಸಂಜೆಯಾದರೆ ಸಾಕು ಕಾತರರಾಗಿರುತ್ತಾರೆ.

ಹೀಗಾಗಿ ಇಂದಿನ ವಿಚಾರದಲ್ಲಿ ನಾವು ಧ್ರುವ ಪಾತ್ರದಾರಿ ನಿಜಕ್ಕೂ ಯಾರು ಅವರ ಹಿನ್ನೆಲೆ ಏನು ಎಂಬುದರ ಕುರಿತಂತೆ ವಿವರವಾಗಿ ತಿಳಿಸುತ್ತೇವೆ.ಗಟ್ಟಿಮೇಳ ಧಾರಾವಾಹಿ ಪ್ರಮುಖ ಪಾತ್ರವಾಗಿರುವ ಧ್ರುವ ಪಾತ್ರದಾರಿಯ ನಿಜವಾದ ಹೆಸರು ರಂಜನ್ ಎಂದು.

ಇವರು ಮೂಲತಃ ಮಂಡ್ಯದವರು. ಮೊದಲಿನಿಂದಲೂ ಕೂಡ ನಟನೆಯ ಕುರಿತಂತೆ ಸಾಕಷ್ಟು ವಿಶೇಷವಾದ ಆಸಕ್ತಿ ಅವರಲ್ಲಿತ್ತು.ಹೀಗಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಾಗಿರುವ ನಾಗಾಭರಣ ರವರ ನಟನೆಯ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿಗಾಗಿ ಸೇರುತ್ತಾರೆ. ನಟನೆಯ ಮಜಲುಗಳನ್ನು ಕಲಿತ ನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿ ಆಗೊಮ್ಮೆ-ಈಗೊಮ್ಮೆ ತೆರೆಯಮೇಲೆ ಕಾಣಿಸಿಕೊಳ್ಳುತ್ತಿದ್ದರು

ಹೀಗಾಗಿ ಒಂದಾದಮೇಲೊಂದರಂತೆ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಕೆಲವು ಪಾತ್ರಗಳಲ್ಲಿ ನಟಿಸುತ್ತಾ ಇಂದು ಗಟ್ಟಿಮೇಳ ಧಾರವಾಹಿಯ ಧ್ರುವ ಪಾತ್ರಧಾರಿಯಾಗಿ ನಿಮ್ಮ ಮುಂದೆ ಇದ್ದಾರೆ. ಇಷ್ಟ ದೇವತೆ ಎಂಬ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಇವರ ಇಷ್ಟವಾಗುತ್ತಾರೆ ನಂತರ ಗಟ್ಟಿಮೇಳ ದಲ್ಲಿ ನಟಿಸಲು ಆರಂಭಿಸುತ್ತಾರೆ.

ಹಲವಾರು ಸಿನಿಮಾಗಳಲ್ಲಿ ಕೂಡ ಚಿಕ್ಕಪುಟ್ಟ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.ಇನ್ನೊಂದು ವಿಚಾರ ಏನೆಂದರೆ ಇವರು ಎಲ್ಲಿಗೆ ಹೋದರು ಇವರನ್ನು ಗುರುತಿಸುವುದು ಗಟ್ಟಿಮೇಳ ಧಾರವಾಹಿಯ ಧ್ರುವ ಹೆಸರಿನಿಂದಲೇ ಹೊರತು ಅವರ ನಿಜವಾದ ಹೆಸರು ರಂಜನ್ ನಿಂದಲ್ಲ. ಇದಕ್ಕಾಗಿ ರಂಜನ್ ರವರು ಎಲ್ಲೇ ಹೋದರು ಗಟ್ಟಿಮೇಳ ಧಾರವಾಹಿಯಿಂದಾಗಿ ನಾನು ಇಷ್ಟರಮಟ್ಟಿಗೆ ಯಶಸ್ವಿಯಾಗಲು ಸಾಧ್ಯ ಎಂಬುದಾಗಿ ಧಾರವಾಹಿಗೆ ಕೃತಜ್ಞರಾಗಿದ್ದಾರೆ.

ಇನ್ನೊಂದು ಪ್ರಮುಖವಾದ ವಿಚಾರವೇನೆಂದರೆ ರಂಜನ್ ರವರ ಬಳಿ ನಿಮ್ಮ ನೆಚ್ಚಿನ ನಟ ಯಾರು ಎಂದು ಎಲ್ಲೇ ಕೇಳಿದರು ಅವರು ಹೇಳುವ ಒಂದೇ ಉತ್ತರವೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರು.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಡೆ ಹಾಗೂ ನಡವಳಿಕೆ ನುಡಿಯೆನ್ನುವುದು ರಂಜನ ರವರಿಗೆ ಸಾಕಷ್ಟು ಸ್ಪೂರ್ತಿಯನ್ನು ತಂದುಕೊಟ್ಟಿದೆಯಂತೆ.

ಇನ್ನು ಜಿಮ್ ನಲ್ಲಿ ಟ್ರೈನರ್ ಕೂಡ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ನಟ ರಂಜನ್.ಮುಂದಿನ ದಿನಗಳಲ್ಲಿ ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಕೂಡ ಉತ್ತಮ ಅವಕಾಶಗಳು ನಟ ರಂಜನ್ ರವರಿಗೆ ದೊರಕಲಿ ಎಂದು ಹಾರೈಸೋಣ. ನಟ ರಂಜನ್ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕೂಡ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.