Neer Dose Karnataka
Take a fresh look at your lifestyle.

ಬಿಗ್ ಬಾಸ್ ಅನ್ನು ತಪ್ಪಿಸಿಕೊಳ್ಳುತ್ತಿರುವ ಸುದೀಪ್ ಬದಲು ಯಾರು ನಡೆಸಿಕೊಡುತ್ತಾರೆ ಈ ವಾರದ ಪಂಚಾಯ್ತಿ.?

ಬಿಗ್ ಬಾಸ್ ಶೋ ಎಂದರೆ ಎಲ್ಲರಿಗೂ ಕುತೂಹಲ ಆಸಕ್ತಿ ಹೆಚ್ಚು. ಈ ಶೋ ಶುರುವಾಗಲು ಕಿರುತೆರೆ ವೀಕ್ಷಕರು ಕಾದಿರುತ್ತಾರೆ. ಕನ್ನಡದಲ್ಲಿ 8 ಸೀಸನ್ ಮುಗಿಸಿ, 9ನೇ ಸೀಸನ್ ಈಗ ನಡೆಯುತ್ತಿದೆ. ಬಿಬಿಕೆ9 ನಲ್ಲಿ ನಾಲ್ಕನೇ ವಾರವನ್ನು ಕಳೆದಿರುವ ಸದಸ್ಯರು, 5ನೇ ವಾರಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರಿರಬಹುದು ಎನ್ನುವ ಕುತೂಹಲ ಸಹ ಇದೆ.

ಬಿಬಿಕೆ9 ಸೀಸನ್ ಬಹಳ ವಿಶೇಷವಾಗಿ ಸಾಗುತ್ತಿದೆ, ಈ 9ನೇ ಸೀಸನ್ ನಲ್ಲಿ ಪ್ರವೀಣರು ಮತ್ತು ನವೀನರು ಕಾನ್ಸೆಪ್ಟ್ ನಲ್ಲಿ 9 ಹಳೆಯ ಸದಸ್ಯರು ಮತ್ತು 9 ಹೊಸ ಸದಸ್ಯರನ್ನು ಕಳಿಸಲಾಗಿದ್ದು, ಸೆಲೆಬ್ರಿಟಿಗಳಿಂದ ಮನೆ ರಂಗೇರಿದೆ. ಪ್ರತಿವಾರ ಸ್ಪರ್ಧಿಗಳು ಮನರಂಜನೆಯನ್ನಂತೂ ನೀಡುತ್ತಿದ್ದಾರೆ. ಮೂರು ವಾರಗಳಲ್ಲಿ ಮೂರು ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಮೊದಲ ವಾರ ಐಶ್ವರ್ಯ ಪಿಸ್ಸೇ, ಎರಡನೇ ವಾರ ನವಾಜ್, ಮೂರನೇ ವಾರ ದರ್ಶ್ ಮನೆಯಿಂದ ಹೊರಬಂದಿದ್ದು, ಬಿಗ್ ಮನೆಯಿಂದ ಹೊರಬರುವ ನಾಲ್ಕನೇ ಸ್ಪರ್ಧಿ ಯಾರಿರಬಹುದು ಎನ್ನುವ ಕುತೂಹಲ ಶುರುವಾಗಿದೆ, ಆದರೆ ಈ ಸಾರಿ ವೀಕೆಂಡ್ ಎಪಿಸೋಡ್ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಬರುವುದಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ.

ಸುದೀಪ್ ಅವರು ಎಷ್ಟೇ ಕೆಲಸ ಇದ್ದರು, ಸಿನಿಮಾ ಚಿತ್ರೀಕರಣ ಇದ್ದರು ಸಹ ಬಿಗ್ ಬಾಸ್ ಶೋಗೆ ಬರುವುದನ್ನಂತೂ ತಪ್ಪಿಸುವುದಿಲ್ಲ. ಬಿಡುವು ಮಾಡಿಕೊಂಡು ವೀಕೆಂಡ್ ಎಪಿಸೋಡ್ ನಲ್ಲಿ ಪಾಲ್ಗೊಳ್ಳುತ್ತಾರೆ. ಸುದೀಪ್ ಅವರು ಕೋವಿಡ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಮಾತ್ರ, ಬಿಗ್ ಬಾಸ್ ಶೋ ನಿರೂಪಣೆಗೆ ಬರಲು ಸಾಧ್ಯವಾಗಿರಲಿಲ್ಲ.

ಆದರೆ ಈ ವಾರ ಸುದೀಪ್ ಅವರು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಆಕ್ಟೊಬರ್ 18ರಂದು ಸುದೀಪ್ ಮತ್ತು ಪ್ರಿಯಾ ದಂಪತಿಯ ವಿವಾಹ ವಾರ್ಷಿಕೋತ್ಸವ, ಈ ವಿಶೇಷ ದಿನವನ್ನು ಆಚರಿಸಲು ಸುದೀಪ್ ಮತ್ತು ಪ್ರಿಯಾ ದಂಪತಿ ವಿದೇಶಕ್ಕೆ ಹಾರಿದ್ದು, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಬಳಿಕ ಶುಕ್ರವಾರವಾದ ಇಂದು ಆಕ್ಟೊಬರ್ 28ರಂದು ಪುನೀತ ಪರ್ವ ಕಾರ್ಯಕ್ರಮಕ್ಕೆ ಸುದೀಪ್ ಅವರು ಬರಬೇಕಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ಪುನೀತ ಪರ್ವ ಕಾರ್ಯಕ್ರಮ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ನಡೆಯಲಿದ್ದು, ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಬರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಬರಲಿದ್ದಾರೆ. ಹಾಗಾಗಿ ಇಂದು ಸಹ ಸುದೀಪ್ ಅವರು ಬ್ಯುಸಿ ಇರುವ ಕಾರಣ, ನಾಳೆ ವೀಕೆಂಡ್ ಎಪಿಸೋಡ್ ಗೆ ಗೈರಾಗುತ್ತಾರೆ ಎಂದು ಹೇಳಲಾಗುತ್ತಿದೆ..

ಆದರೆ ಸುದೀಪ್ ಅವರು ಕಿಚ್ಚನ ಪಂಚಾಯ್ತಿ ವೀಕೆಂಡ್ ಎಪಿಸೋಡ್ ಗೆ ಬರುವುದಿಲ್ಲ ಎಂದು ಅಧಿಕೃತ ಮಾಹಿತಿ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಆಗಲಿ ಅಥವಾ ಸುದೀಪ್ ಅವರ ಕಡೆಯಿಂದ ಆಗಲಿ ಸಿಕ್ಕಿಲ್ಲ. ಒಂದು ವೇಳೆ ಸುದೀಪ್ ಅವರು ಬರದೆ ಹೋದರೆ, ವೀಕೆಂಡ್ ಎಪಿಸೋಡ್ ಅನ್ನು ನಿರೂಪಣೆ ಮಾಡುವವರು ಯಾರು ಎನ್ನುವ ಪ್ರಶ್ನೆಯೊಂದು ಶುರುವಾಗಿದೆ..

ಕಿಚ್ಚ ಸುದೀಪ್ ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಬಿಗ್ ಬಾಸ್ ನಿರೂಪಣೆ ಮಾಡಲು ಸಾಧ್ಯವಿಲ್ಲ, ಅವರ ಗತ್ತು ಗಾಂಭೀರ್ಯ, ಶೋ ನಡೆಸಿಕೊಡುವ ಆ ಸ್ಟೈಲ್ ಎಲ್ಲರಿಗೂ ಬರುವುದಿಲ್ಲ ಎನ್ನುವ ಅಭಿಪ್ರಾಯ ವೀಕ್ಷಕರದ್ದು. ಹೀಗಿರುವಾಗ,, ಈ ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯಿತಿ ಎಪಿಸೋಡ್ ಏನಾಗುತ್ತದೆ? ಯಾರು ನಿರೂಪಣೆ ಮಾಡುತ್ತಾರೆ? ಸುದೀಪ್ ಅವರು ನಿಜವಾಗಲೂ ಬರುವುದಿಲ್ಲವಾ? ಈ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.

Comments are closed.