Neer Dose Karnataka
Take a fresh look at your lifestyle.

ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಶಾಶ್ವತವಾಗಿ ನೆಲೆಸಬೇಕು ಎಂದರೆ ದೀಪಾವಳಿ ದಿನ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ನಿಮ್ಮ ಮನೆಯಲ್ಲಿಯೇ ಇದ್ದು ಬಿಡುತ್ತಾರೆ.

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಉಳಿದಿದೆ. ಈ ಹಬ್ಬದ ದಿನ ವಿಶೇಷವಾಗಿ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಲಕ್ಷ್ಮೀದೇವಿಗೆ ಈ ಹಬ್ಬವನ್ನು ಅರ್ಪಣೆ ಮಾಡುತ್ತಾರೆ. ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಭಾವಿಸುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಅನುಗ್ರಹ ಇದ್ದರೆ ಜೀವನದಲ್ಲಿ ಸಂತೋಷ ಮತ್ತು ಆರ್ಥಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲದ ಹಾಗೆ ಇರುತ್ತೀರಿ. ಲಕ್ಷ್ಮೀದೇವಿಯ ಅನುಗ್ರಹ ಪಡೆಯಬೇಕು ಎಂದರೆ, ದೀಪಾವಳಿ ಹಬ್ಬಕ್ಕಿಂತ ಮೊದಲು, ನಿಮ್ಮ ರಾಶಿಯ ಅನುಸಾರವಾಗಿ, ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸುತ್ತಾ, ದೇವಿಯ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಲಕ್ಷ್ಮಿದೇವಿಯ ಅನುಗ್ರಹ ಪಡೆಯಬಹುದು.

ಮೊದಲಿಗೆ ಮೇಷ ರಾಶಿಯವರು, ಓಂ ಐಂ ಕ್ಲೀಂ ಸೌಂ ಎನ್ನುವ ಮಂತ್ರವನ್ನು ಜಪಿಸಿ, ಲಕ್ಷ್ಮೀದೇವಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಯಿಂದ ಹೊರಬರುತ್ತೀರಿ. ಇನ್ನು ವೃಷಭ ರಾಶಿಯವರು, ಓಂ ಐಂ ಕ್ಲೀಂ ಶ್ರೀಂ ಮಂತ್ರ ಪಠಿಸಿ, ಲಕ್ಷ್ಮೀದೇವಿಯನ್ನು ಪೂಜಿಸಿ., ಹೀಗೆ ಮಾಡುವುದರಿಂದ ಸಾಲ ಮತ್ತು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಮಿಥುನ ರಾಶಿಯವರು, ಓಂ ಕ್ಲಿಮ್ ಐಮ್ ಎನ್ನುವ ಮಂತ್ರ ಪಠಿಸಿ, ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ಜೊತೆಗೆ ಹಣದ ಸಮಸ್ಯೆಗಳು ದೂರವಾಗುತ್ತದೆ. ನಂತರ ಕರ್ಕಾಟಕ ರಾಶಿಯವರು, ಓಂ ಐಂ ಕ್ಲೀಂ ಶ್ರೀಂ ಎನ್ನುವಮಂತ್ರವನ್ನು ಪಠಿಸಿ, ಲಕ್ಷ್ಮಿ ದೇವಿಯ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ.

ನಂತರ ಸಿಂಹ ರಾಶಿಯವರು, ಓಂ ಹ್ರೀಂ ಐಂ ಸೌಂ ಎನ್ನುವ ಮಂತ್ರವನ್ನು ಪಠಿಸಿ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕು, ಇದರಿಂದ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ. ಕನ್ಯಾ ರಾಶಿಯವರು, ಓಂ ಶ್ರೀಂ ಐಂ ಸೌಂ ನೀ, ಎನ್ನುವ ಮಂತ್ರ ಪಠಿಸಿ, ಲಕ್ಷ್ಮಿ ದೇವಿಯ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ, ಲಕ್ಷ್ಮಿದೇವಿಗೆ ನಿಮ್ಮ ಮೇಲೆ ಕರುಣೆ ಬರುತ್ತದೆ. ಇನ್ನು ತುಲಾ ರಾಶಿಯವರು, ಓಂ ಶ್ರೀಂ ಕ್ಲೀಂ ಹ್ರೀಂ ಸಿದ್ಧಲಕ್ಷ್ಮೀ ನಮಃ ಎನ್ನುವ ಮಂತ್ರ ಪಠಿಸಿ, ಲಕ್ಷ್ಮೀದೇವಿಯ ಆರಾಧನೆ ಮಾಡಿ. ಇದರಿಂದ, ನಿಮ್ಮ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ತುಂಬುತ್ತದೆ. ವೃಶ್ಚಿಕ ರಾಶಿಯವರು, ಓಂ ಐಂ ಕ್ಲೀಂ ಸೌ ಎನ್ನುವ ಮಂತ್ರ ಪಠಿಸಿ ಲಕ್ಷ್ಮಿದೇವಿಯನ್ನು ಪೂಜೆ ಮಾಡಿ, ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ, ಹಾಗೂ ದೇವಿಯ ಸಂಪೂರ್ಣ ಅನುಗ್ರಹ ಪಡೆಯುತ್ತೀರಿ.

ಧನು ರಾಶಿಯವರು, ಓಂ ಹ್ರೀಂ ಕ್ಲೀಂ ಸೌಂ ಎನ್ನುವ ಮಂತ್ರ ಪಠಿಸಿ, ಲಕ್ಷ್ಮೀದೇವಿ ಪೂಜೆ ಮಾಡಿ. ಇದರಿಂದ, ಲಕ್ಷ್ಮಿದೇವಿ ಕೃಪೆ ಹಾಗು ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತೀರಿ. ಮಕರ ರಾಶಿಯವರು, ಓಂ ಐಂ ಹ್ರೀಂ ಕ್ಲೀಂ ಶ್ರೀಂ ಸೌಂ ಎನ್ನುವ ಮಂತ್ರ ಪಠಿಸಿ ಲಕ್ಷ್ಮೀದೇವಿಯ ಪೂಜೆ ಮಾಡಬೇಕು. ಇದರಿಂದ ನಿಮ್ಮ ಆದಾಯ ಬೇಗ ಹೆಚ್ಚುತ್ತದೆ. ಕುಂಭ ರಾಶಿಯವರು, ಓಂ ಹ್ರೀಂ ಐಂ ಕ್ಲೀಂ ಶ್ರೀಂ ಎನ್ನುವ ಮಂತ್ರ ಪಠಿಸಿ ಲಕ್ಷ್ಮೀದೇವಿಯ ಮಂತ್ರ ಪಠಿಸಿ,. ಇದರಿಂದಾಗಿ, ಲಕ್ಷ್ಮೀದೇವಿಯ ವಿಶೇಷ ಕೃಪೆಗೆ ಪಾತ್ರರಾಗುತ್ತೀರಿ. ಮೀನಾ ರಾಶಿಯವರು, ಓಂ ಹ್ರೀಂ ಕ್ಲೀಂ ಸೌಂ ಎನ್ನುವ ಮಂತ್ರ ಪಠಿಸಿ, ಲಕ್ಷ್ಮೀದೇವಿಯ ಪೂಜೆ ಮಾಡಿ, ಇದರಿಂದ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಹೀಗೆ, ಎಲ್ಲಾ ರಾಶಿಯವರಿಗೆ ವಿವಿಧ ಮಂತ್ರಗಳನ್ನು ಪಠಿಸುವುದರಿಂದ ಲಕ್ಷ್ಮೀದೇವಿಯ ಕೃಪೆ ಪಡೆದು, ಹಣ ಕಾಸಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

Comments are closed.