Neer Dose Karnataka
Take a fresh look at your lifestyle.

ಮದುವೆ ಬಗ್ಗೆ ಕಡೆಗೂ ಮೌನ ಮುರಿದ ನಟಿ, ನಿರೂಪಕಿ ಅನುಶ್ರೀ. ಹೇಳಿದ್ದೇನು ಗೊತ್ತಾ?? ಕಾಯುತ್ತಿರುವುದು ಯಾಕೆ ಗೊತ್ತೇ??

ಮದುವೆ ಬಗ್ಗೆ ಕಡೆಗೂ ಮೌನ ಮುರಿದ ನಟಿ, ನಿರೂಪಕಿ ಅನುಶ್ರೀ. ಹೇಳಿದ್ದೇನು ಗೊತ್ತಾ?? ಕಾಯುತ್ತಿರುವುದು ಯಾಕೆ ಗೊತ್ತೇ??

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದಲ್ಲಿ ಹೆಚ್ಚಿನ ಸಂಭಾವನೆ ಪಡೆಯುವ ಹಾಗೂ ಹೆಚ್ಚಿನ ಜನಪ್ರಿಯತೆ ಹೊಂದಿರುವ ನಿರೂಪಕಿ ಅನುಶ್ರೀ ಅವರು. ಸುಮಾರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇವರು ನಿರೂಪಣಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅನುಶ್ರೀ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ತಾಯಿ ಮತ್ತು ತಮ್ಮನ ಜೊತೆ ಸಂತೋಷದ ಜೀವನ್ ನಡೆಸುತ್ತಿದ್ದಾರೆ ಅನುಶ್ರೀ. ತಾಯಿಗಾಗಿ ಮತ್ತು ತಮ್ಮನಿಗಾಗಿ ಐಷಾರಾಮಿ ಮನೆ ಕಟ್ಟಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಅನುಶ್ರೀ ಅವರಿಗೆ ಒಬ್ಬ ತಮ್ಮ ಇದ್ದಾನೆ. ತಂದೆ ತಾಯಿ ಜೊತೆ ಬೆಳೆಯುತ್ತಿದ್ದ ಅನುಶ್ರೀ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಕಷ್ಟ ಎದುರಾಯಿತು. ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಅನುಶ್ರೀ ಅವರ ತಂದೆ ಮನೆಬಿಟ್ಟು ಹೋಗಿದ್ದರು. ಅಲ್ಲಿಂದ ಕಷ್ಟದ ದಿನಗಳು ಶುರುವಾದವು. ನಿರೂಪಕಿ ಅನುಶ್ರೀ ಸಣ್ಣ ಪುಟ್ಟ ಕೆಲಸಗಳು, ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದರು. ತಂದೆ ಇಲ್ಲದ ಕಾರಣ ತಾಯಿಗೆ ತಾನೇ ಸಹಾಯವಾಗಿರಬೇಕು ಎಂದು ಛಲದಿಂದ ಕಷ್ಟಪಟ್ಟರು. ಬೆಂಗಳೂರಿಗೆ ಬಂದು ನಿರೂಪಕಿ ಆಗಿ ಹೆಸರು ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ.

ಸಿಕ್ಕ ಅವಕಾಶಗಳನ್ನೆಲ್ಲ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಒಳ್ಳೆಯ ಹಂತಕ್ಕೆ ಬೆಳೆದು ನಿಂತಿದ್ದಾರೆ ಅನುಶ್ರೀ. ಇಂದು ಅನುಶ್ರೀ ಅವರನ್ನು ಇಡೀ ಕರ್ನಾಟಕ ಇಷ್ಟಪಡುತ್ತಿದೆ. ಕೆರಿಯರ್ ನಲ್ಲಿ ಬಹಳ ಮುಂದಿದ್ದಾರೆ. ಜೊತೆಗೆ ಅನುಶ್ರೀ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಅನುಶ್ರೀ ಅವರ ಮದುವೆಯ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಮತ್ತೊಮ್ಮೆ ಅನುಶ್ರೀ ಅವರ ಮದುವೆ ಬಗ್ಗೆ ಸುದ್ದಿಯೊಂದು ಕೇಳಿ ಬಂದಿದೆ. ಆದರೆ ಈ ಸಾರಿ ಸಿಕ್ಕಿರುವ ಸುದ್ದಿ ನಿಜವೇ ಆಗಿದೆ ಎನ್ನಲಾಗುತ್ತಿದ್ದು, ಅನುಶ್ರೀ ಅವರು ಈ ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಸಿಕ್ಕಿದೆ.

ಈ ವಿಚಾರವನ್ನು ಜೀಕನ್ನಡ ವಾಹಿನಿಯಲ್ಲಿ ನಡೆದ ಜೀಕುಟುಂಬ ಅವಾರ್ಡ್ಸ್ ನಂತರ, ಅನುಶ್ರೀ ಅವರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಫೇವರೇಟ್ ಆಂಕರ್ ಅವಾರ್ಡ್ ಬಂದಿತು. ಅದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಕೈಯಿಂದ ಪಡೆದು, ಬಹಳ ಸಂತೋಷಪಟ್ಟ ಅನುಶ್ರೀ ಅವರು, ತಮ್ಮ ಅವಾರ್ಡ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದರು, ಅಶ್ವಿನಿ ಅವರಿಂದ ಅವಾರ್ಡ್ ಪಡೆದದ್ದು ಬಹಳ ಸಂತೋಷವಾಗಿದೆ ಎಂದು ಸಹ ಹೇಳಿದರು.

ಇಷ್ಟು ವರ್ಷಗಳ ಕಾಲ ಕೆರಿಯರ್ ರೂಪಿಸಿಕೊಳ್ಳಲು ಅನುಶ್ರೀ ಅವರು ಕಷ್ಟಪಡುತ್ತಿದ್ದರು, ತಮಗೆ ಸಿಗುತ್ತಿದ್ದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ಒಂದೊಂದು ಕಾರ್ಯಕ್ರಮಗಳ ಮೂಲಕ ಕೂಡ ಯಶಸ್ಸನ್ನು ಪಡೆಯುತ್ತಾ ಬಂದರು ಅನುಶ್ರೀ. ಕೆಲಸದ ಮೇಲೆ ಗಮನ ಹರಿಸಿ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ತಮ್ಮನ ಭವಿಷ್ಯಕ್ಕೆ ಒಂದು ದಾರಿ ಮಾಡಿಕೊಡಬೇಕು ಎನ್ನುವ ಜವಾಬ್ದಾರಿ ಅನುಶ್ರೀ ಅವರಿಗೆ ಇದ್ದ ಕಾರಣ ಅವರು ಇಷ್ಟು ದಿವಸಗಳ ಕಾಲ ಮದುವೆ ಬಗ್ಗೆ ಯೋಚಿಸಿರಲಿಲ್ಲ.

ಮೊದಲು ಕುಟುಂಬ ಸೆಟ್ಲ್ ಆಗಬೇಕು, ತಮಗೂ ಒಂದು ಒಳ್ಳೆಯ ಹೆಸರು ಬರಬೇಕು ಎನ್ನುವುದರಲ್ಲೇ ನಿರತರಾಗಿದ್ದ ಅನುಶ್ರೀ, ಇಂದು ಕರ್ನಾಟಕದಲ್ಲಿ ಎಲ್ಲರಿಗು ಪರಿಚಯ ಇರುವ ಹುಡುಗಿ ಆಗಿದ್ದಾರೆ, ಎಲ್ಲರೂ ಅನುಶ್ರೀ ಅವರನ್ನು ನಮ್ಮ ಮನೆ ಹುಡುಗಿ ಎಂದು ಹೇಳುವ ಮಟ್ಟಕ್ಕೆ ಅನುಶ್ರೀ ಅವರು ಹೆಸರು ಮಾಡಿದ್ದಾರೆ. ಅನುಶ್ರೀ ಅವರ ತಾಯಿ ಹಲವು ಬಾರಿ ಮದುವೆ ಬಗ್ಗೆ ಮಾತು ಎತ್ತಿದರು ಕೂಡ, ಅನುಶ್ರೀ ಅವರೇ ಅದನ್ನು ಮುಂದಕ್ಕೆ ಹಾಕುತ್ತಿದ್ದರಂತೆ.

ಆದರೆ ಈಗ ಅನುಶ್ರೀ ಅವರು ಆಂಕರಿಂಗ್ ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅನುಶ್ರೀ ಅವರಿಗೆ ಭಾರಿ ಬೇಡಿಕೆ ಇದೆ, ಜೊತೆಗೆ ವಯಸ್ಸು ಕೂಡ 30 ವರ್ಷ ದಾಟಿರುವುದರಿಂದ, ಅನುಶ್ರೀ ಅವರ ತಾಯಿ ಮದುವೆ ಆಗಬೇಕು ಎಂದು ಹೇಳಿದ್ದು, ಅನುಶ್ರೀ ಅವರು ಕೂಡ ಈಗ ಮದುವೆಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಿಹಿ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನುಶ್ರೀ ಅವರು ಈಗ ಮದುವೆಗೆ ಒಪ್ಪಿಗೆ ಕೊಟ್ಟಿದ್ದು, ಅಮ್ಮ ನೋಡಿದ ಹುಡುಗನನ್ನೇ ಒಪ್ಪಿಕೊಂಡು ಮದುವೆ ಆಗುವುದಾಗಿ ಹೇಳಿದ್ದಾರೆ ಅನುಶ್ರೀ. ಅನುಶ್ರೀ ಅವರ ತಾಯಿ ಹುಡುಗನನ್ನು ಹುಡುಕಲು ಶುರು ಮಾಡಿದ್ದು, ಎಲ್ಲವೂ ಅಂದುಕೊಂಡ ಹಾಗೆ ನಡೆದರೆ, ಡಿಕೆಡಿ ಈ ಸೀಸನ್ ಮುಗಿದ ಮೇಲೆ ಮದುವೆ ಆಗಬಹುದು ಎಂದು ಸುದ್ದಿ ತಿಳಿದುಬಂದಿದೆ.

Comments are closed.