Neer Dose Karnataka
Take a fresh look at your lifestyle.

ಕರಾವಳಿ ಬೆಡಗಿ ಪೂಜಾ ಹೆಗ್ಡೆ ರವರು ಕಾಂತಾರ ಸಿನಿಮಾ ನೋಡಿ, ನಿಮಗೆ ತಿಳಿದಿರುವುದು ಬರೆಯಿರಿ ಎಂದದ್ದು ಯಾಕೆ ಗೊತ್ತೇ??

ಕಾಂತಾರ ಸಿನಿಮಾವನ್ನು ತಡೆಯಲು ಮತ್ಯಾವ ಸಿನಿಮಾ ಇಂದಲೂ ಆಗುತ್ತಿಲ್ಲ. ಕನ್ನಡದ ಕಾಂತಾರ ಸಿನಿಮಾ ಇಂದು ಗ್ಲೋಬಲ್ ಲೆವೆಲ್ ನಲ್ಲಿ ರೀಚ್ ಆಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ವಾವ್ ಎನ್ನುತ್ತಿದ್ದಾರೆ. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ, ಬೇಡಿಕೆ ಇಂದ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಕಂಡು, ಎಲ್ಲಾ ಭಾಷೆಗಳಲ್ಲು ಸೂಪರ್ ಹಿಟ್ ಎನ್ನಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿ ಸಹ ಕಾಂತಾರ ಸಿನಿಮಾ ಹವಾ ಜೋರಾಗಿದೆ.

ಈಗಾಗಲೇ 150 ಕೋಟಿಗಿಂತ ಹೆಚ್ಚು ಹಣ ಗಳಿಸಿ ಮುನ್ನುಗ್ಗುತ್ತಿದೆ ಕಾಂತಾರ. ಈ ಸಿನಿಮಾದಲ್ಲಿ ತೋರಿಸಲಾಗಿರುವ ತುಳುನಾಡಿನ ಸಂಸ್ಕೃತಿಯನ್ನು ನೋಡಿ, ಭೂತಕೋಲ, ದೈವ ನರ್ತನ ಇದೆಲ್ಲವನ್ನು ಜನರು ಮೆಚ್ಚಿಕೊಂಡಿದ್ದು, ಕೊನೆಯ 20 ನಿಮಿಷದ ದೈವ ನರ್ತನ ನೋಡಿ, ಅಚ್ಚರಿಗೊಂಡಿದ್ದಾರೆ. ಭಾಷೆ ಮತ್ತು ಈ ಆಚರಣೆಯ ಬಗ್ಗೆ ಗೊತ್ತಿಲ್ಲದವರು ಸಹ ಸಿನಿಮಾ ನೋಡಿ ಟ್ರಾನ್ಸ್ ಗೆ ಒಳಗಾಗುತ್ತಿದ್ದಾರೆ. ಬೇರೆ ಊರುಗಳಲ್ಲಿ ನೆಲೆಸಿರುವ ಮಂಗಳೂರಿನ ಜನರು, ತಮ್ಮ ಸಂಸ್ಕೃತಿಯನ್ನು ತೆರೆ ಮೇಲೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮಂಗಳೂರಿನವರಾಗಿ ಮುಂಬೈ ನಲ್ಲಿ ಹುಟ್ಟಿ ಬೆಳೆದು, ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಬಾಲಿವುಡ್ ನಲ್ಲೂ ಹೆಸರು ಮಾಡುತ್ತಿರುವ ನಟಿ ಪೂಜಾ ಹೆಗ್ಡೆ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಆಗಾಗ ಊರಿಗೆ ಹೋಗಿ, ಭೂತ ಕೋಲ ನೋಡುತ್ತಿದ್ದ ನೆನಪುಗಳ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ ಪೂಜಾ ಹೆಗ್ಡೆ, “ನಿಮಗೆ ಗೊತ್ತಿರುವುದನ್ನು ಮಾತ್ರ ಬರೆಯಿರಿ.. ಹೃದಯಕ್ಕೆ ಹತ್ತಿರವಾಗುವ, ಮನಸ್ಸನ್ನು ಮುಟ್ಟುವ ಕಥೆಗಳನ್ನು ಮಾತ್ರ ಹೇಳಿ. ಸಿನಿಮಾದಲ್ಲಿ ಕೊನೆಯ 20 ನಿಮಿಷಗಳು ನಾನು ದಿಗ್ಭ್ರಮೆಗೆ ಒಳಗಾದೆ, ಸಿನಿಮಾ ನೋಡುತ್ತಾ ನನ್ನನ್ನು ನಾನು ಮರೆತಿದ್ದೆ..ರಿಷಬ್ ಶೆಟ್ಟಿ, ಕಾಂತಾರ ಸಿನಿಮಾ ನೋಡಿ ನಾನು ಇಂಪ್ರೆಸ್ ಆಗಿದ್ದೇನೆ. ಕಾಂತಾರಾಜ್ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ತುಂಬಾ ಹೆಮ್ಮೆ ಆಗುತ್ತಿದೆ. ಚಿಕ್ಕ ವಯಸ್ಸಿನಲ್ಲಿ ನಾನು ನೋಡಿದ್ದ ಭೂತಕೋಲಗಳು, ದೈವಗಳನ್ನು ಬೆಳ್ಳಿತೆರೆಯ ಮೇಲೆ ಗೌರವಾನ್ವಿತವಾಗಿ ಮತ್ತು ಸುಂದರವಾಗಿ ತೋರಿಸಿದ್ದೀರಿ. ಒಂದು ಅದ್ಭುತ ಸಿನಿಮಾ ನೀಡಿದ್ದೀರಿ. ಇದೊಂದೇ ಅಲ್ಲ, ಇನ್ನು ಒಳ್ಳೆಯ ಸಿನಿಮಾಗಳು ಬರಬೇಕು. ಇನ್ನು ಎತ್ತರಕ್ಕೆ ಬೆಳೆಯಬೇಕು. ಎಲ್ಲರೂ ಹೋಗಿ ಕಾಂತಾರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ..” ಎಂದು ಬರೆದುಕೊಂಡಿದ್ದಾರೆ ಪೂಜಾ ಹೆಗ್ಡೆ.

Comments are closed.