Neer Dose Karnataka
Take a fresh look at your lifestyle.

ಮಾಡಿದ ತಪ್ಪನ್ನು ಸರಿ ಮಾಡಲು ಮುಂದಾದ ಅಮಲಾ: ಸಮಂತಾ ಹಾಗೂ ನಾಗ ಚೈತನ್ಯ ರವರನ್ನು ಒಂದು ಮಾಡಲು ಮಾಡುತ್ತಿರುವುದೇನು ಗೊತ್ತೇ??

ಟಾಲಿವುಡ್ ಅಂಗಳದಲ್ಲಿ ಕ್ಯೂಟ್ ಆದ ಜೋಡಿ ಎಂದು ಹೆಸರು ಪಡೆದುಕೊಂಡಿದ್ದವರು ನಟಿ ಸಮಂತಾ ಮತ್ತು ನಟ ನಾಗಚೈತನ್ಯ. ಇವರಿಬ್ಬರ ಜೋಡಿಯನ್ನು ನೋಡಿದ ಎಲ್ಲರೂ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಅದ್ಧೂರಿಯಾಗಿ ಈ ಜೋಡಿ ಮದುವೆ ಮಾಡುಕೊಂಡಿತು. ತೆಲುಗು ಮಾತ್ರವಲ್ಲದೆ, ತಮಿಳು ಮತ್ತು ಬಾಲಿವುಡ್ ನಲ್ಲಿ ಸಹ ಚೈತನ್ಯ ಸಮಂತಾ ಜೋಡಿಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಆದರೆ ಈ ಜೋಡಿಯ ಮೇಲೆ ಯಾರ ದೃಷ್ಟಿ ಬಿದ್ದಿತೋ ಏನೋ, ಒಂದು ವರ್ಷದ ಹಿಂದೆ ಇಬ್ಬರು ಸಹ ವೈವಾಹಿಕ ಜೀವನದಿಂದ ಬೇರ್ಪಟ್ಟರು. ಈ ಜೋಡಿ ಜೊತೆಯಾಗಿದ್ದಾಗ ಹಲವರು ಇವರನ್ನು ನೋಡಿ ಸಂತೋಷಪಟ್ಟಿದ್ದರು.

ಅದೇ ರೀತಿ ಇವರಿಬ್ಬರು ಬೇರೆಯಾದಾಗ ಹಲವರು ಬೇಸರ ಪಟ್ಟುಕೊಂಡಿದ್ದರು. ಈ ಜೋಡಿ ಬಹಳ ಮುದ್ದಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಚಿತ್ರರಂಗದ ಕೆಲವು ಹಿರಿಯ ಕಲಾವಿದರು ಸಹ ಇದನ್ನೇ ಹೇಳಿದ್ದರು. ಇವರಿಬ್ಬರು ಮತ್ತೆ ಒಂದಾಗಬೇಕು ಎಂದು ಬಯಸುವವರು ಸಾಕಷ್ಟು ಜನ ಇದ್ದಾರೆ. ಈ ಜೋಡಿ ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಯಿತು ಈ ಜೋಡಿ. ಮದುವೆ ನಂತರ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು, ಬಿಡುವಿನ ಸಮಯ ಸಿಕ್ಕಾಗ, ಜೊತೆಯಾಗಿ ಸಮಯ ಕಳೆಯುತ್ತಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಇವರಿಬ್ಬರನ್ನು ನೋಡಿ, ಮದುವೆಯಾಗಿ ಚೈತನ್ಯ ಸಮಂತಾ ಹಾಗೆ ಎಂಜಾಯ್ ಮಾಡಬೇಕು ಎಂದುಕೊಳ್ಳುತ್ತಿದ್ದರು.

ಆದರೆ ಕಳೆದ ವರ್ಷ ತಮ್ಮಿಬ್ಬರ ಮದುವೆ ವಾರ್ಷಿಕೋತ್ಸವದ ಹಿಂದಿನ ದಿನ ಸಮಂತಾ ಮತ್ತು ಚೈತನ್ಯ ಜೋಡಿ ತಾವಿಬ್ಬರು ಬೇರ್ಪಡುವುದಾಗಿ, ವಿಚ್ಚೇದನೆ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದರು. ಈ ವಿಚಾರ ತಿಳಿದು ಹಲವರಿಗೆ ಬೇಸರ ಆಗಿತ್ತು. ಮೊದಲಿಗೆ ಸಮಂತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಅಕ್ಕಿನೇನಿ ಎನ್ನುವ ಹೆಸರನ್ನು ತೆಗೆದುಹಾಕಿ ಶಾಕ್ ನೀಡಿದ್ದರು. ನಂತರ ವಿಚ್ಛೇದನದ ವಿಷಯ ಹೊರಬಂತು. ಇವರಿಬ್ಬರನ್ನು ಒಂದು ಮಾಡಲು ಅಕ್ಕಿನೇನಿ ಕುಟುಂಬ ಎಷ್ಟೇ ಪ್ರಯತ್ನ ಪಟ್ಟರು ಅದು ಸರಿಹೋಗಲಿಲ್ಲ. ಅದರಿಂದ ಅಮಲಾ ಅಕ್ಕಿನೇನಿ ಅವರು ಚೈತನ್ಯ ಸಮಂತಾರನ್ನು ಒಂದು ಮಾಡಲು ಈಗ ಹೊಸದೊಂದು ಪ್ಲಾನ್ ಮಾಡಿದ್ದಾರೆ., ಮಜಿಲಿ2 ಸಿನಿಮಾಗಾಗಿ ಪ್ಲಾನ್ ಮಾಡುತ್ತಿದ್ದಾರಂತೆ ಅಮಲಾ, ಈ ಸಿನಿಮ ಮೂಲಕ ಚೈತನ್ಯ ಮತ್ತು ಸಮಂತಾ ಮತ್ತೆ ಭೇಟಿಯಾಗುತ್ತಾರೆ, ಎಲ್ಲವೂ ಸರಿಹೋಗಬಹುದು ಎನ್ನುವ ಆಲೋಚನೆ ಇದೆ. ಈ ಸುದ್ದಿಯ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ.

Comments are closed.