Neer Dose Karnataka
Take a fresh look at your lifestyle.

ಕಮಲ್ ಹಾಸನ್ ಹಾಗೂ ರಜನಿ ಇಬ್ಬರು ಸೇರಿದರೆ, ಒಬ್ಬ ವಿಷ್ಣುವರ್ಧನ್, ಯಾಕೆ ಅಂತೇ ಗೊತ್ತೇ?? ಸುಹಾಸಿನಿ ರವರು ಈಗಲೂ ವಿಷ್ಣು ಸರ್ ರವರನ್ನು ನೆನಪು ಮಾಡಿಕೊಳ್ಳುವುದು ಯಾಕೆ ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಎಂದು ಹೆಸರು ಪಡೆದಿರುವವದು ಡಾ.ವಿಷ್ಣುವರ್ಧನ್ ಅವರು. ಇವರನ್ನು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದೇ ಕರೆಯುತ್ತಾರೆ. ಕನ್ನಡದ ಮೇರು ನಟ ಆಗಿರುವ ವಿಷ್ಣುವರ್ಧನ್ ಅವರನ್ನು ಕಂಡರೆ, ಭಾರತ ಚಿತ್ರರಂಗದ ಕಲಾವಿದರಿಗೆ ಬಹಳ ಗೌರವ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು, ತಾವು ಅಷ್ಟು ಎತ್ತರಕ್ಕೆ ಬೆಳೆಯಲು ವಿಷ್ಣುವರ್ಧನ್ ಅವರು ತೋರಿಸಿದ ದಾರಿಯೇ ಕಾರಣ ಎಂದು ಹೇಳಿದ್ದರು. ಆಗ ರಜನೀಕಾಂತ್ ಅವರು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ತಮಿಳಿನಲ್ಲಿ ಉತ್ತಮ ಅವಕಾಶಗಳು ಬರುತ್ತಿದ್ದವು, ಆಗ ರಜನಿಕಾಂತ್ ಅವರಿಗೆ ಕನ್ನಡದಲ್ಲಿಯೇ ಉಳಿಯಬೇಕಾ ಅಥವಾ ತಮಿಳಿಗೆ ಹೋಗಬೇಕಾ ಎನ್ನುವ ಗೊಂದಲ ಶುರುವಾಯಿತಂತೆ.

ಆಗ ಅವರು ವಿಷ್ಣುವರ್ಧನ್ ಅವರ ಬಳಿ ಕೇಳಿದಾಗ, ಸಣ್ಣ ಪಾತ್ರಗಳನ್ನು ಮಾಡಿ ಯಶಸ್ಸು ಪಡೆಯಬಹುದು ದೊಡ್ಡ ಅವಕಾಶಗಳು ನಿನ್ನನ್ನು ಹುಡುಕಿ ಬರುತ್ತಿದೆ, ಒಪ್ಪಿಕೊಂಡು ಮುಂದಕ್ಕೆ ಹೋಗು, ಕನ್ನಡಕ್ಕಿಂತ ತಮಿಳಿನಲ್ಲಿ ನಿನ್ನನ್ನು ಮೆರೆಸುತ್ತಾರೆ ಎಂದು ಹೇಳಿದ್ರಂತೆ. ಅದೇ ರೀತಿ ರಜನಿಕಾಂತ್ ಅವರು ಕೆಲವೇ ವರ್ಷಗಳಲ್ಲಿ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರು. ಇಂತಹ ಮೇರು ನಟ ರಜನಿಕಾಂತ್ ಹಾಗು ಮತ್ತೊಬ್ಬ ಮೇರುನಟ ಕಮಲ್ ಹಾಸನ್ ಇವರಿಬ್ಬರು ಸೇರಿದರೆ ಒಬ್ಬ ವಿಷ್ಣುವರ್ಧನ್ ಎಂದು ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅವರು ಹೇಳಿಕೆ ನೀಡಿದ್ದರು. ಸುಹಾಸಿನಿ ಅವರು ಈ ರೀತಿ ಹೇಳುವುದಕ್ಕೆ ಒಂದು ಕಾರಣ ಇದೆ. ಸುಹಾಸಿನಿ ಅವರು ಹೇಳುವ ಹಾಗೆ.. ನಟನೆ ಅಂದ್ರೆ ಕಮಲ್ ಹಾಸನ್, ಕಮಲ್ ಹಾಸನ್ ಅಂದ್ರೆ ನಟನೆ ಎನ್ನುವ ಮಾತಿದೆ..

ನಟನೆಯಲ್ಲಿ ಕಮಲ್ ಹಾಸನ್ ಅವರು ಅಷ್ಟು ಎತ್ತರಲ್ಲಿದ್ದಾರೆ. ಇನ್ನು ರಜನಿಕಾಂತ್ ಅವರಲ್ಲಿ ಮಾನವೀಯ ಗುಣ, ಮೌಲ್ಯ ಬಹಳಷ್ಟಿದೆ. ಆದರೆ ಈ ಎರಡು ಗುಣಗಳು ವಿಷ್ಣುವರ್ಧನ್ ಅವರಲ್ಲಿ ಅಡಕವಾಗಿತ್ತು. ಅವರೊಬ್ಬ ಅದ್ಭುತ ಕಲಾವಿದ, ಯಾವುದೇ ಪಾತ್ರ ಕೊಟ್ಟರು, ನೈಜವಾಗಿ ಅಭಿನಯಿಸುತ್ತಿದ್ದರು. ಅಷ್ಟೇ ಮಾನವೀಯ ಮೌಲ್ಯಗಳನ್ನು ಹೊಂದಿದ್ದರು. ಅವರು ನನ್ನ ಜೊತೆ ಮತ್ತು ಅಭಿಮಾನಿಗಳ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ನನಗೆ ಬಹಳ ಇಷ್ಟವಾಗುತ್ತಿತ್ತು., ಅದು ನನ್ನ ಮೇಲೆ ಪ್ರಭಾವ ಬೀರಿತ್ತು ಎನ್ನುತ್ತಾರೆ ನಟಿ ಸುಹಾಸಿನಿ. ಇಂದಿಗೂ ಸಹ ವಿಷ್ಣುವರ್ಧನ್ ಅವರ ಬಗ್ಗೆ ಸುಹಾಸಿನಿ ಅವರು ಹಲವು ಕಾರ್ಯಕ್ರಮಗಳಲ್ಲಿ ನೆನಪು ಮಾಡಿಕೊಳ್ಳುತ್ತಾರೆ.

Comments are closed.