ಪಾಕಿಸ್ತಾನ ಹೊರಹೋಗುವುದು ಖಚಿತವಾಗುತ್ತಿದ್ದಂತೆ, ಭಾರತದ ಮೇಲೆ ಮುಗಿಬಿದ್ದ ಅಖ್ತರ್. ಹೇಳಿದ್ದೇನು ಗೊತ್ತೇ?? ಭಾರತದ ಕತೆ ಏನಾಗಲಿದೆ ಅಂತೇ ಗೊತ್ತೇ??
ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಈ ಎರಡು ತಂಗಳು ಸೆಮಿಫೈನಲ್ಸ್ ಮತ್ತು ಫೈನಲ್ಸ್ ಹಂತವನ್ನು ತಲುಪಬಹುದು ಎಂದು ಟೂರ್ನಿ ಶುರುವಾಗುವ ಮೊದಲು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಟೂರ್ನಿ ಶುರುವಾದ ಬಳಿಕ ಭಾರತ ತಂಡಕ್ಕೆ ಪಾಸಿಟಿವ್ ಓಪನಿಂಗ್ ಸಿಕ್ಕರೆ, ಪಾಕಿಸ್ತಾನ್ ತಂಡಕ್ಕೆ ನೆಗಟಿವ್ ಆಗಿ ಎಲ್ಲವೂ ನಡೆಯುತ್ತಿದೆ. ಪಾಕಿಸ್ತಾನ್ ತಂಡ ಆಡಿದ ಎರಡು ಮ್ಯಾಚ್ ಗಳಲ್ಲೂ ಸೋತು, ಸೂಪರ್ 12 ಹಂತದಲ್ಲೇ ಮನೆ ತಲುಪಬಹುದು ಎನ್ನುವ ಹಾಗೆ ಆಗಿದೆ. ಇತ್ತ ಭಾರತ ತಂಡ ಅದಕ್ಕೆ ವಿರುದ್ಧವಾಗಿ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದುಕೊಂಡಿದೆ..
ಕಳೆದ ಭಾನುವಾರ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು, ಜಿಂಬಾಬ್ವೆ ವಿರುದ್ಧ ಎರಡನೇ ಪಂದ್ಯದಲ್ಲಿ ಕೇವಲ 1 ರನ್ ಇಂದ ಸೋತಿದೆ. ಗೆಲುವಿಗೆ ಹತ್ತಿರವಾಗಿದ್ದ ಮ್ಯಾಚ್ ಅನ್ನು ಪಾಕಿಸ್ತಾನ್ ಸೋತಿದ್ದು ಅವರ ಅಭಿಮಾನಿಗಳಿಗೆ ನಿರಾಶೆಯಾಗಿತ್ತು, ಇದರ ಜೊತೆಗೆ ಭಾರತ ತಂಡದ ಗೆಲುವು ಅವರ ಹೊಟ್ಟೆಕಿಚ್ಚು ಹೆಚ್ಚಿಸಿದೆ. ಇದರಿಂದ ಪಾಕಿಸ್ತಾನ್ ಅಭಿಮಾನಿಗಳು ಬೇರೆ ರೀತಿ ಮಾತನಾಡುತ್ತಿದ್ದಾರೆ. ಇತ್ತ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅವರು ಭಾರತದ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್ ಅವರು, ಈ ವಾರ ಪಾಕಿಸ್ತಾನ್ ಮನೆಗೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಮುಂದಿನ ವಾರ ಟೀಮ್ ಇಂಡಿಯಾ ಮನೆಗೆ ಹೋಗುತ್ತದೆ ಎಂದಿದ್ದಾರೆ. ಭಾರತ ಏನು ತೀಸ್ ಮಾರ್ ಖಾನ್ ತಂಡವಲ್ಲ, ಮುಂದಿನ ವಾರ ಅವರು ಕೂಡ ಮನೆಗೆ ಹೋಗುತ್ತಾರೆ ಎಂದು ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದು, ಈ ಹೇಳಿಕೆ ಈಗ ಭಾರಿ ವೈರಲ್ ಆಗುತ್ತಿದೆ. ಭಾರತದ ಅಭಿಮಾನಿಗಳು ಶೋಯೆಬ್ ಅಖ್ತರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇನ್ನು ಪಾಕಿಸ್ತಾನ್ ತಂಡದ ಬಗ್ಗೆ ಮಾತನಾಡಿರುವ ಅವರು, ವಿಶ್ವಕಪ್ ಗೆ ಪಾಕಿಸ್ತಾನ್ ಮ್ಯಾನೇಜ್ಮೆಂಟ್ ತಂಡವನ್ನು ಆಯ್ಕೆ ಮಾಡಿದಾಗಲೇ ಭವಿಷ್ಯ ನುಡಿದಿದ್ದರು, ಇಂತಹ ಟೀಮ್ ಜೊತೆಗೆ ಆಸ್ಟ್ರೇಲಿಯಾಗೆ ಹೋಗಿ, ಟಿ20 ವಿಶ್ವಕಪ್ ನಲ್ಲಿ ಮೊದಲ ರೌಂಡ್ ನಲ್ಲೇ ಮನೆಗೆ ಬರಬೇಕಾಗುತ್ತದೆ ಎಂದಿದ್ದರು. ಪಾಕಿಸ್ತಾನ್ ವಿಚಾರದಲ್ಲಿ ಅದೇ ರೀತಿ ಆಗುತ್ತಿದೆ. ಈಗ ಭಾರತ ತಂಡದ ಬಗ್ಗೆ ಸಹ ಹೇಳಿಕೆ ನೀಡಿದ್ದಾರೆ
ಶೋಯೆಬ್ ಅಖ್ತರ್.
Comments are closed.