ಪುನೀತ್ ಪರ್ವಕ್ಕೆ ತಪ್ಪಿಸಿಕೊಂಡಿದ್ದ ಸುದೀಪ್, ಗಂಧದ ಗುಡಿ ಬಗ್ಗೆ ಇದ್ದಿಕ್ಕಿದ ಹಾಗೆ ಹೇಳಿದ್ದೇನು ಗೊತ್ತೇ?? ವೈರಲ್ ಆದ ಹೇಳಿಕೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಪ್ರೀತಿಯಿಂದ ತಯಾರಿಸಿರುವ ಗಂಧದಗುಡಿ ಈ ಶುಕ್ರವಾರ ತೆರೆಕಾಣುತ್ತಿದೆ. ಈಗಾಗಲೇ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದೆ. ಆಕ್ಟೊಬರ್ 21ರಂದು ಗಂಧದಗುಡಿ ಪ್ರೀರಿಲೀಸ್ ಇವೆಂಟ್ ಪುನೀತಪರ್ವ ನಡೆಯಿತು. ಈ ದಿನ ಇಡೀ ಸ್ಯಾಂಡಲ್ ವುಡ್ ಅಪ್ಪು ಅವರಿಗಾಗಿ ಒಂದಾಗಿ, ಅರಮನೆ ಮೈದಾನದಲ್ಲಿ ಸೇರಿತ್ತು. ಬೇರೆ ಭಾಷೆಯ ಕಲಾವಿದರು ಸಹ ಬಂದಿದ್ದರು. ಎಲ್ಲರೂ ಖುದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಆಮಂತ್ರಣ ನೀಡಿದ್ದರು. ಎಲ್ಲಾ ಕಲಾವಿದರು ಸಹ ಆ ದಿನ ಒಂದಾಗಿದ್ದು, ಅಪ್ಪು ಎನ್ನುವ ಆ ಪ್ರೀತಿತುಂಬಿಕೊಂಡಿದ್ದ ಮನುಷ್ಯನಿಗೋಸ್ಕರ. ಅಪ್ಪು ಅವರು ಇಂದು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದೆ ಹೋದರು, ಅವರ ನೆನಪುಗಳು, ಜನರಿಗೆ ಅವರ ಮೇಲಿರುವ ಪ್ರೀತಿ ಮಾತ್ರ ಸ್ವಲ್ಪವು ಕಡಿಮೆ ಆಗಿಲ್ಲ.
ಅದಕ್ಕೆ ಸಾಕ್ಷಿ ಅಂದು ಪುನೀತಪರ್ವ ಕಾರ್ಯಕ್ರಮದ ದಿನ ಸೇರಿದ್ದ ಜನರು. ನಮ್ಮ ಚಂದನವನದ ಎಲ್ಲಾ ಹಿರಿಯ ಕಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಬಂದಿದ್ದರು. ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಸಹ ಕಾರ್ಯಕ್ರಮಕ್ಕೆ ಬಂದಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತು ಚಂದನವನದ ಬಹುತೇಕ ಕಲಾವಿದರು ಬಂದಿದ್ದರು. ಬೇರೆ ಭಾಷೆಯ ಕಲಾವಿದರಾದ ಸಿದ್ಧಾರ್ಥ್, ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ, ಶರತ್ ಕುಮಾರ್ ಇಂಥಹ ಗಣ್ಯ ಕಲಾವಿದರೆಲ್ಲರು ಅಪ್ಪು ಅವರಿಗಾಗಿ ಬಂದಿದ್ದರು. ಆದರೆ ಎಲ್ಲರೂ ಬಹಳ ನಿರೀಕ್ಷೆ ಮಾಡಿದ್ದ ನಟ ಸುದೀಪ್ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದರಿಂದ ಸುದೀಪ್ ಅವರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿತ್ತು.
ಆದರೆ ಇಂದು ಗಂಧದಗುಡಿ ಬಿಡುಗಡೆ ದಿನ ಸುದೀಪ್ ಅವರು ಟ್ವೀಟ್ ಮಾಡಿ, ಇಡೀ ತಂಡಕ್ಕೆ ಶುಭಕೋರಿದ್ದಾರೆ. “ಪುನೀತ್ ಅವರ ಕುಟುಂಬ ಮತ್ತು ಇಡೀ ಗಂಧದಗುಡಿ ತಂಡಕ್ಕೆ ನನ್ನ ಹೃದಯ ಪೂರ್ವಕ ಶುಭಾಶಯಗಳು..ಅಪ್ಪು ಅವರು ಸದಾ ಮಿನುಗುತ್ತಿದ್ದ ಹಾಗೆ ಈ ಸಿನಿಮಾ ಕೂಡ ಮಿನುಗಲಿ.. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ನಿಮಗೆ ಶುಭವಾಗಲಿ..ಇದೆಲ್ಲವನ್ನು ನೀವು ಎದುರಿಸಿದ್ದೀರಿ..ಪುನೀತ್ ಅವರ ಎಲ್ಲಾ ಅಭಿಮಾನಿಗಳಿಗೆ ಬಹಳಷ್ಟು ಪ್ರೀತಿ ಮತ್ತು ಅಪ್ಪುಗೆ..” ಎಂದು ಟ್ವೀಟ್ ಮಾಡಿದ್ದಾರೆ ಕಿಚ್ಚ.
My heartfelt wishes to #Puneeth ‘s family and the entire team of #Gandhadhagudi.
Let it shine like the way he always did.
Best wishes @Ashwini_PRK . You have truly withstood it all 🙏🏼.Many Hugs&Luv to all Puneeths fans.❤️🥂
Go and Embrace #Gandhadhagudi ,it’s a feast. pic.twitter.com/jqCvTokQ9t— Kichcha Sudeepa (@KicchaSudeep) October 28, 2022
Comments are closed.