Neer Dose Karnataka
Take a fresh look at your lifestyle.

ಏನೇ ಮಾಡಿದರೂ ಉದ್ಯೋಗ-ವ್ಯಾಪಾರದಲ್ಲಿ ಪ್ರಗತಿ ಕಾಣಲು ಆಗುತ್ತಿಲ್ಲವೇ?? ಶನಿ ದೇವನನ್ನು ನೆನೆಯುತ್ತ ಈ ಚಿಕ್ಕ ಕೆಲಸ ಮಾಡಿ ಸಾಕು.

ಶನಿದೇವರು ಕರ್ಮಫಲದಾತ, ಶನಿದೇವರು ಆಶೀರ್ವಾದ ತೋರಿದರೆ ಆ ವ್ಯಕ್ತಿಯ ಜೀವನ ಬಹಳ ಚೆನ್ನಾಗಿರುತ್ತದೆ ಯಾವುದೇ ಕಷ್ಟ ಬರುವುದಿಲ್ಲ. ಆದರೆ ಶನಿದೇವರ ವಕ್ರದೃಷ್ಟಿ ಶುರುವಾದರೆ, ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಶನಿದೇವರ ಮಹಾದಶ, ಸಾಡೇಸಾತಿ, ಧೈಯಾ ಇವುಗಳು ನಡೆಯುತ್ತಿದ್ದರೆ, ಜನರು ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬಹುದು. ಆ ರೀತಿ ಮಾಡುವುದರಿಂದ ಶನಿದೇವರ ಪ್ರಭಾವ, ಅದರಿಂದ ಆಗುವ ತೊಂದರಗಳು ಕಡಿಮೆ ಆಗುತ್ತವೆ. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಬ್ಯುಸಿನೆಸ್ ನಲ್ಲಿ ತೊಂದರೆ ಅಥವಾ ಏಳಿಗೆ ಕಾಣುತ್ತಿಲ್ಲ ಎನ್ನುವುದಾದರೆ, ಶಂ ಹ್ರೀಂ ಶಾಂ ಶನಿಶ್ಚರಾಯ ನಮಃ ಈ ಮಂತ್ರವನ್ನು 11 ಬಾರಿ ಪಠಣೆ ಮಾಡಿ, ಈ ಮಂತ್ರ ಹೇಳುವಾಗ, ನಿಮ್ಮ ಹತ್ತಿರ ಉದ್ದಿನಬೇಳೆ ಇಟ್ಟುಕೊಂಡು, ಶನಿದೇವರಿಗೆ ಅರ್ಪಿಸಿ. ನಂತರ ಹರಿಯುವ ನೀರಿನಲ್ಲಿ ಅವುಗಳನ್ನು ಬಿಡಿ. ಈ ರೀತಿ ಮಾಡುವುದರಿಂದ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.
*ಕೋರ್ಟ್ ಕೇಸ್ ನಡೆಯುತ್ತಿದ್ದು, ಅದರ ಫಲಿತಾಂಶ ನಿಮ್ಮ ಪರವಾಗಿಯೇ ಆಗಬೇಕು ಎನ್ನುವುದಾದರೆ, ನೀವು ಮನೆಯಿಂದ ಕೋರ್ಟ್ ಗೆ ಹೊರಡುವುದಕ್ಕಿಂತ ಮೊದಲು, ಓ ಷಂ ಶನ್ಯೈ ನಮಃ ಈ ಮಂತ್ರವನ್ನು 21 ಸಾರಿ ಪಠಿಸಿ. ಇದರಿಂದ ಕೋರ್ಟ್ ನಲ್ಲಿ ಗೆಲುವು ನಿಮ್ಮದಾಗುತ್ತದೆ.

*ನಿಮ್ಮ ಮನೆಯವರ ಮೇಲೆ ದುಷ್ಟ ದೃಷ್ಟಿಯ ಪರಿಣಾಮ ಇದ್ದರೆ, ಹಣ ಉಳಿಸಲು ಸಾಧ್ಯವಾಗದೆ ಹೋಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ, ಓಂ ಶ್ರೀ ಶ್ರೀ ಶ್ರೀ ಶನಿಶ್ಚರಾಯ ನಮಃ ಈ ಮಂತ್ರವನ್ನು 31 ಸಾರಿ ಜಪ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಸಮಾಧಾನ ಇರುತ್ತದೆ, ಜೊತೆಗೆ ಏಳಿಗೆ ಕಾಣುತ್ತೀರಿ.
*ಜೀವನದಲ್ಲಿ ಒಂದಾದ ಮೇಲೊಂದು ತೊಂದರೆಗಳು ಬರುತ್ತಲೇ ಇದ್ದರೆ, ನೆರಳು ದಾನ ಮಾಡಿ. ಒಂದು ಬಟ್ಟಲಿಗೆ ಸಾಸಿವೆ ಎಣ್ಣೆಹಾಕಿ, ಅದರಲ್ಲಿ ನಿಮ್ಮ ಮುಖ ನೋಡಿ, ನಂತರ ಆ ಎಣ್ಣೆಯ ಬಟ್ಟಲನ್ನು ಶನಿದೇವರ ದೇವಸ್ಥಾನದಲ್ಲಿ ಇರಿಸಿ.
*ಕೆಲಸ ಮಾಡುವ ಕಡೆ ನಿಮ್ಮ ಪ್ರಾಬಲ್ಯ ಹೆಚ್ಚಾಗಬೇಕಾದರೆ, ದಿನಕ್ಕೆ 108 ಸಾರಿ, ಶಂ ಓಂ ಶನೈ ನಮಃ, ಈ ಮಂತ್ರವನ್ನು ಪಠಿಸಿ, ಇದರಿಂದ ಕೆಲಸದಲ್ಲಿ ಏಳಿಗೆ ಉಂಟಾಗುತ್ತದೆ.
*‘ಓಂ ಶ್ರೀಂ ಹ್ರೀಂ ಶಾನ ಶನೈಶ್ಚರಾಯ ನಮಃ, ಈ ಮಂತ್ರವನ್ನು ಶನಿವಾರ 11 ಪಠಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

Comments are closed.