Neer Dose Karnataka
Take a fresh look at your lifestyle.

ಜೀವನಕ್ಕಿಂತ ಹೆಚ್ಚು ಪ್ರೀತಿ ಮಾಡುತ್ತೇನೆ ಎಂದು ನಂಬಿಸಿ, ಜ್ಯೋತಿಷಿ ಮಾತು ಕೇಳಿ ಎಂತಹ ಖತರ್ನಾಕ್ ಕೆಲಸ ಮಾಡಿದ್ದಾಳೆ ಗೊತ್ತೇ??

ಪ್ರಪಂಚದಲ್ಲಿ ಮಢನಂಬಿಕೆಗಳಿಂದ ಏನೆಲ್ಲಾ ದುರದೃಷ್ಟಕರ ಘಟನೆಗಳು, ಯಾರು ಊಹಿಸಲಾಗದ ಘಟನೆಗಳು ನಡೆದು ಹೋಗುತ್ತದೆ ಎಂದರೆ ಅವುಗಳನ್ನು ನೋಡಿದರೆ, ಎಂಥವರಿಗೂ ಬೆಚ್ಚಿಬೀಳಿಸುವುದು ಖಂಡಿತ. ಈ ಘಟನೆ ನಡೆದಿರುವುದು ಕೇರಳದ ತಿರುವನಂತಪುರಂನಲ್ಲಿ. ಗ್ರೀಷ್ಮ ಎನ್ನುವ ಹುಡುಗಿ ತನ್ನ ಲವ್ವರ್ ಶಾರೋನ್ ಅನ್ನು ಕೊಲೆ ಮಾಡಿದ್ದಾಳೆ. ಇವರಿಬ್ಬರು ಬಹಳ ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಯನ್ನು ಒಪ್ಪಿರಲಿಲ್ಲ.

ಹುಡುಗಿಯನ್ನು ಒಬ್ಬ ಸೈನಿಕನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು. ಆದರೆ ಹುಡುಗಿಗೆ ಈ ಮದುವೆ ಇಷ್ಟವಿರಲಿಲ್ಲ. ಮತ್ತೊಂದು ಜ್ಯೋತಿಷಿಯೊಬ್ಬರು, ಇವರಿಬ್ಬರ ಮದುವೆ ನವೆಂಬರ್ ಗಿಂತ ಮೊದಲೇ ನಡೆದರೆ, ಹುಡುಗ ಸಾಯಬಹುದು ಎಂದು ಹೇಳುತ್ತಾರೆ. ಈ ವಿಷಯ ಆಕೆ ಹುಡುಗನಿಗೂ ಹೇಳಿದ್ದಳು, ಆದರೂ ಆತ ಗ್ರೀಷ್ಮಳನ್ನು ಬಿಡಲು ರೆಡಿ ಇರಲಿಲ್ಲ. ಈ ವಿಚಾರವನ್ನು ನಂಬಿದ ಹುಡುಗಿ, ಮೂಢನಂಬಿಕೆ ಇಂದ ತನ್ನ ಹುಡುಗನಿಗೆ ವಿಷ ಕೊಟ್ಟು, ಸಾಯಿಸಿದ್ದಾಳೆ. ಆಕೆಯ ಮನೆಯವರು ಸಹ ಈ ಕೊಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆಕ್ಟೊಬರ್ 14ರಂದು ಈ ಹುಡುಗ ತಮಿಳುನಾಡಿನ ರಾಮವರ್ಮಂಚಿರಾದಲ್ಲಿ ಇರುವ ಹುಡುಗಿಯ ಮನೆಗೆ ಹೋಗಿದ್ದನು, ಆಗ ಆಕೆ ಹುಡುಗನಿಗೆ ತಾಮ್ರದ ಸಲ್ಫೇಟ್ ಅನ್ನು ಜ್ಯುಸ್ ಗೆ ಬೆರೆಸಿ ಕುಡಿಸಿದ್ದಾಳೆ. ಆಕೆಯ ಜೊತೆಗೆ ಹೊರಗೆ ಹೋದಾಗಲೆಲ್ಲಾ, ಹುಡುಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ತನಿಖೆ ಮಾಡಿದಾಗ, ಇಬ್ಬರ ವಾಟ್ಸಾಪ್ ಚಾಟ್ ನಲ್ಲಿ, ಜ್ಯುಸ್ ಚಾಲೆಂಜ್ ಎಂದು ಹೇಳಿ ಹುಡುಗನಿಗೆ ಪದೇ ಪದೇ ಜ್ಯುಸ್ ಕುಡಿಸುತ್ತಿದ್ದಳು ಎಂದು ಗೊತ್ತಾಗಿದೆ. ಪ್ರತಿದಿನ ವಿಷ ಬೆರೆಸಿದ ಜ್ಯುಸ್ ಕುಡಿಸಿ ಶಾರೋನ್ ಅನ್ನು ಕೊಂದಿದ್ದಾಳೆ ಎಂದು ಮಾಹಿತಿ ಸಿಕ್ಕಿದೆ.

Comments are closed.