Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಪಂದ್ಯ ಸೋತ ಬಳಿಕ ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ ಇಬ್ಬರು ಸ್ಟಾರ್ ಪ್ಲೇಯರ್ಸ್. ನೇರವಾಗಿ ಕೇಳಿಬಂದ ಉತ್ತರ ಏನು ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಪಯಣ ಸೆಮಿಫೈನಲ್ಸ್ ಹಂತದಲ್ಲಿ ಸೋಲು ಕಂಡಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ಟೀಮ್ ಇಂಡಿಯಾ ಸೆಮಿಫೈನಲ್ಸ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಹೀನಾಯವಾಗಿ ಸೋಲಿಸಿತು. ಭಾರತ ತಂಡ 10 ವಿಕೆಟ್ ಗಳ ಅಂತರದಲ್ಲಿ ಸೋತಿತು. ಈ ಸೋಲು ನಮ್ಮ ತಂಡದ ಎಲ್ಲಾ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ, ರಾಹುಲ್ ಅವರು 5 ರನ್ ಗಳಿಗೆ ಔಟ್ ಆದರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ರನ್ ರೇಟ್ ಹೆಚ್ಚಿಸಲು ಕಷ್ಟಪಟ್ಟರು.

ಸೂರ್ಯಕುಮಾರ್ ಯಾದವ್ ಅವರ ಮ್ಯಾಜಿಕ್ ಸಹ ಸರಿಯಾಗಿ ವರ್ಕ್ ಆಗಲಿಲ್ಲ, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಪರಿಶ್ರಮದಿಂದ 168 ರನ್ ಗಳ ಟಾರ್ಗೆಟ್ ನೀಡಿತು ಭಾರತ ತಂಡ. ಇದನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಒಂದು ವಿಕೆಟ್ ಕೂಡ ಕಳೆದುಕೊಳ್ಳದೆ, 16 ಓವರ್ ಗಳಲ್ಲೇ ಮ್ಯಾಚ್ ಮುಗಿಸಿ ಗೆದ್ದಿತು. ಈ ಮ್ಯಾಚ್ ಮುಗಿದು ಭಾರತ ತಂಡ ಸೋತ ನಂತರ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಅವರ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದ್ದು, ಇದಕ್ಕೆ ಕೋಚ್ ರಾಹುಲ್ ದ್ರಾವಿಡ್ ಅವರು ಉತ್ತರ ಕೊಟ್ಟಿದ್ದು ಹೀಗೆ, “ಅದರ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯ ಅಲ್ಲ..

ಈಗಲೇ ಮಾತನಾಡಿದರೆ ಅದು ಬಹಳ ಬೇಗ ಮಾತನಾಡಿದ ಹಾಗೆ ಆಗುತ್ತದೆ. ಅವರು ಬಹಳ ಅತ್ಯುತ್ತಮವಾದ ಆಟಗಾರರಾಗಿದ್ದಾರೆ. ಅದರ ಬಗ್ಗೆ ನಿರ್ಧಾರ ಮಾಡಲು ಇನ್ನು ಎರಡು ವರ್ಷಗಳ ಸಮಯ ಇದೆ. ಇವರು ನಮ್ಮ ತಂಡಡ್ಸ್ ಬಹಳ ಒಳ್ಳೆಯ ಆಟಗಾರರಾಗಿದ್ದಾರೆ, ಅದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಅಲ್ಲ. ಮುಂದಿನ ವರ್ಲ್ಡ್ ಕಪ್ ಬರುವಷ್ಟರ ಸಮಯಕ್ಕೆ ನಮಗೆ ಇನ್ನು ಸಮಯ ಇದೆ, ಮುಂದೆ ಬಹಳಷ್ಟು ಮ್ಯಾಚ್ ಗಳಿವೆ, ಆ ಮ್ಯಾಚ್ ಗಳ ಮೂಲಕ ನಮ್ಮ ಆಟಗಾರರು ಪ್ರಿಪೇರ್ ಆಗುತ್ತಾರೆ..” ಎಂದು ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.

Comments are closed.