Neer Dose Karnataka
Take a fresh look at your lifestyle.

Kannada News: ಬರೋಬ್ಬರಿ 8 ವರ್ಷಗಳಿಂದ ಪ್ರೀತಿ ಮಾಡಿ ಮದುವೆಗೆ ಕೆಲವೇ ದಿನಗಳು ಇರುವಾಗ ನಡೆಯಿತು ಊಹಿಸದ ಘಟನೆ. ಕೊನೆಗೆ ಏನಾಯಿತು ಗೊತ್ತೇ?

Kannada News: ಪ್ರಪಂಚದಲ್ಲಿ ಪ್ರೀತಿ ಬಹಳ ಮುಖ್ಯ, ಪ್ರೀತಿಯ ಎದುರು ಇನ್ನೇನು ಮುಖ್ಯವಾಗಿ ಕಾಣುವುದಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಅಂತಹ ಮತ್ತೊಂದು ಘಟನೆ ಈಗ ನಡೆದಿದೆ. ಈ ಘಟನೆ ನಡೆದಿರುವುದು ಒಡಿಶಾದಲ್ಲಿ. ಡೆಬಾಸ್ಮಿತ ಮತ್ತು ಸುಭ್ರಾಂಶು ಎನ್ನುವ ಹುಡುಗಿ ಮತ್ತು ಹುಡುಗ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಮದುವೆ ಆಗಬೇಕು ಎಂದುಕೊಂಡಿದ್ದರು. ಆದರೆ ಮದುವೆ ಸಮಯ ಹತ್ತಿರ ಬರುತ್ತಿದ್ದ ಹಾಗೆಯೇ ಇವರ ಜೀವನದಲ್ಲಿ ಯಾರು ಊಹಿಸಲಾಗದ ಘಟನೆ ನಡೆದು ಹೋಗಿತ್ತು.

ಡೆಬಾಸ್ಮಿತ (Debasmitha) ಮತ್ತು ಸುಭ್ರಾಂಶು (Subhranshu) ನಡುವೆ 8 ವರ್ಷಗಳ ಹಿಂದೆ ಪ್ರೀತಿ ಚಿಗುರೊಡೆದಿತ್ತು, ಇವರಿಬ್ಬರು ಕೂಡ 8 ವರ್ಷಗಳ ಹಿಂದೆ ಪ್ರೀತಿಸಲು ಶುರು ಮಾಡಿ, ಮೀಟಿಂಗ್, ಡೇಟಿಂಗ್ ಎಲ್ಲವನ್ನು ಮಾಡಿ ಕೊನೆಗೆ ಮದುವೆಯಾಗುವ ನಿರ್ಧಾರ ಮಾಡಿದರು. ಮದುವೆಗೆ ತಮ್ಮಿಬ್ಬರ ಕುಟುಂಬವನ್ನು ಒಪ್ಪಿಸಿ, 2019ರಲ್ಲಿ ಮದುವೆ ತಯಾರಿ ಶುರು ಮಾಡಿಕೊಂಡಿದ್ದರು. ಅದೇ ವರ್ಷ ಅವರಿಬ್ಬರು ಊಹೆ ಮಾಡಿರದ ಘಟನೆ ನಡೆಯಿತು. ಡೆಬಾಸ್ಮಿತ ಪಾರ್ಶ್ವವಾಯುವಿಗೆ ತುತ್ತಾಗಿ, ಇನ್ನೆಂದು ಸ್ವತಂತ್ರವಾಗಿ ಓಡಾಡಲಾಗದ ಸ್ಥಿತಿ ತಲುಪಿದರು. ಇದನ್ನು ಓದಿ.. Kannada Astrology: ಅದೃಷ್ಟವನ್ನು ಹೊತ್ತು ತರುತ್ತಿದ್ದಾನೆ ಶುಕ್ರ: ಈ ಬಾರಿ ಮೂರು ರಾಶಿಗಳಿಗೆ ಕಷ್ಟಗಳೆಲ್ಲ ಮುಗಿದು ಭಾಗ್ಯ ಉದಯವಾಗುತ್ತದೆ. ಯಾರಿಗೆ ಗೊತ್ತೇ?

ಈ ಜೋಡಿಯು ಒಡಿಶಾದ, ಬಾಲಾಸೋರ್ ಜಿಲ್ಲೆಯ ಖಂದ್ರಪದಾ ಎನ್ನುವ ಊರಿನವರು. ಪ್ರಸ್ತುತ ಡೆಬಾಸ್ಮಿತ ಒಂದು ಹೆಜ್ಜೆಯನ್ನು ಇಡಲು ಆಗುವುದಿಲ್ಲ. ಹಾಸಿಗೆಯೇ ಆಕೆಯ ಮನೆಯಾಗಿದ್ದು, ಎಲ್ಲದಕ್ಕೂ ಮತ್ತೊಬ್ಬರ ಸಹಾಯ ಅವರಿಗೆ ಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ಹುಡುಗ ಆಗಿದ್ದರು, ಆಕೆಯನ್ನು ಮದುವೆಯಾಗಲು ಹಿಂಜರಿಯುತ್ತಿದ್ದರು, ಆದರೆ ಸುಭ್ರಾಂಶು ಆ ರೀತಿ ಮಾಡಲಿಲ್ಲ. ತಮ್ಮ ಪ್ರೀತಿಯೇ ಮುಖ್ಯ ಎಂದು, ಡೆಬಾಸ್ಮಿತಾಳನ್ನೇ ಮದುವೆಯಾಗಿದ್ದಾರೆ. ಇತ್ತೀಚೆಗೆ ಈ ಜೋಡಿಯ ಮದುವೆ ನಡೆದಿದ್ದು, ಇವರಿಬ್ಬರ ಪ್ರೀತಿಗೆ ಸಲಾಂ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Cricket News: ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗುತ್ತಿದ್ದಂತೆ ಭಾರತ ತಂಡದ ಮುಂದೆ ಹೊಸ ಬೇಡಿಕೆ ಇಟ್ಟ ಹಾರ್ಧಿಕ್ ಪಾಂಡ್ಯ. ಒಂದೇ ಗೆಲುವಿಗೆ ಬೇಡಿಕೆನಾ??

Comments are closed.