Neer Dose Karnataka
Take a fresh look at your lifestyle.

Sudeep Darshan: ಅಷ್ಟಕ್ಕೂ ದರ್ಶನ್ ಹಾಗೂ ಕಿಚ್ಚ ಒಂದಾಗುತ್ತಾರಾ?? ಮುಂದೆ ಒಂದಾದರೆ ಸಿನಿಮಾ ಮಾಡುತ್ತಾರೆ?? ಏನಾಗುತ್ತಿದೆ ಗೊತ್ತೇ?

Sudeep Darshan: ಚಂದನವನದ ಸ್ಟಾರ್ ನಟರಾದ ಕಿಚ್ಚ ಸುದೀಪ್ (Kiccha Sudeep) ಅವರು ಮತ್ತು ದರ್ಶನ್ (Darshan) ಅವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಇವರಿಬ್ಬರು ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದವರು. ಇವರಿಬ್ಬರ ಫ್ರೆಂಡ್ಶಿಪ್ ನೋಡಿ, ವಿಷ್ಣುವರ್ಧನ್ (Vishnuvardhan) ಅವರು ಮತ್ತು ಅಂಬರೀಶ್ (Ambarish) ಅವರ ಸ್ನೇಹಕ್ಕೆ ಹೋಲಿಕೆ ಮಾಡಲಾಗುತ್ತಿತ್ತು. ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೊಮೋಟ್ ಮಾಡುತ್ತಾ, ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ, ಚಂದನವನದಲ್ಲಿ ಸ್ನೇಹಕ್ಕೆ ಮತ್ತೊಂದು ಹೆಸರಿನ ಹಾಗಿತ್ತು ಈ ಜೋಡಿ, ಆದರೆ ಇವರ ಮೇಲೆ ಯಾರ ಕಣ್ಣು ಬಿದ್ದಿತೋ, ವೈಮನಸ್ಸಿನಿಂದ ಇಂದು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವ ಹಾಗಿದ್ದಾರೆ.

ಇವರಿಬ್ಬರು ಒಂದಾಗಲಿ ಎನ್ನುವುದು ಅಭಿಮಾನಿಗಳ ಆಸೆ, ಆದರೆ ಈ ಜೋಡಿ ಮತ್ತೆ ಜೊತೆಯಾಗುವ ಸೂಚನೆಯಂತೂ ಸಿಗುತ್ತಿಲ್ಲ. ಆದರೆ ಅಭಿಮಾನಿಗಳು ಇವರಲ್ಲಿ ಮನವಿ ಮಾಡಿಕೊಳ್ಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದೀಗ ಇವರ ಅಭಿಮಾನಿಗಳು ಈ ಸ್ಟಾರ್ ನಟರ ಎದುರು ಒಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುವ ಇವರಿಬ್ಬರ ಅಭಿಮಾನಿಗಳು, ದರ್ಶನ್ ಅವರು ಮತ್ತು ಸುದೀಪ್ ಅವರು ಜೊತೆಯಾಗಿ ಸೇರಿ ಒಂದು ಸಿನಿಮಾ ಮಾಡಬೇಕು, ಕುಚಿಕು ಗೆಳೆಯರಾಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಜೊತೆಯಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನು ಓದಿ.. Kannadathi: ಕನ್ನಡತಿಯಲ್ಲಿ ಮತ್ತೊಂದು ಟ್ವಿಸ್ಟ್: ಭುವಿ ಗೆ ವಿಲ್ ವಿಚಾರ ತಿಳಿದ ನಂತರ ಏನಾಗಲಿದೆ ಗೊತ್ತೇ? ಊಹಿಸದ ಟ್ವಿಸ್ಟ್ ಕೊಟ್ಟ ಕನ್ನಡತಿ.

ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಆಸೆಯ ಹಾಗೆ, ಇವರಿಬ್ಬರು ಒಂದಾಗಿ, ಪ್ಯಾನ್ ಇಂಡಿಯಾ ಸಿನಿಮಾ ಮಾಡಿದರೆ, ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಎನ್ನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ದರ್ಶನ್ ಅವರು ಕ್ರಾಂತಿ (Kranthi) ಸಿನಿಮಾ ಪ್ರೊಮೋಶನ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷ ಜನವರಿ 23ರಂದು ಕ್ರಾಂತಿ ಸಿನಿಮಾ ಬಿಡುಗಡೆ ಆಗುತ್ತಿದೆ, ಇನ್ನು ಸುದೀಪ್ ಅವರು ವಿಕ್ರಾಂತ್ ರೋಣ (Vikranth Rona) ಸಕ್ಸಸ್ ನಂತರ ಮನೆಯವರ ಜೊತೆಗೆ ಸಮಯ ಕಳೆಯುತ್ತಾ, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಆಸೆಯ ಹಾಗೆ ಇವರಿಬ್ಬರು ಸಿನಿಮಾ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada Astrology: ನಿಮ್ಮ ಹಣೆಯಲ್ಲಿ ಹಣ ಇಡುವ ಸ್ಥಳವನ್ನು ಈ ರೀತಿ ಮಾಡಿದರೆ, ನೀವು ಕೂಡಲೇ ಶ್ರೀಮಂತರಾಗುತ್ತೀರಿ, ಲಕ್ಷ್ಮಿ ದೇವಿ ಅಲ್ಲಿಯೇ ನೆಲೆಸಿ ಬಿಡುತ್ತಾರೆ.

Comments are closed.