Neer Dose Karnataka
Take a fresh look at your lifestyle.

Kannada News: ಈ ಬಾರಿ ಗೆಲ್ಲುವ ಸಿನಿಮಾಗಾಗಿ ರವಿಚಂದ್ರನ್ ರವರು ನಟಿಯನ್ನು ಎಲ್ಲಿಂದ ಕರೆ ತಂದಿದ್ದಾರೆ ಗೊತ್ತೆ?? ಇದಪ್ಪ ಕ್ರೇಜಿ ಅಂದ್ರೆ.

Kannada News: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದ್ದಾರೆ. ಈ ಹೊಸ ಸಿನಿಮಾ ಹೆಸರು ಗೌರಿ. ಇದೊಂದು ವಿಭಿನ್ನವಾದ ಕೌಟುಂಬಿಕ ಸಿನಿಮಾ ಆಗಿದ್ದು, ಈ ಸಿನಿಮಾವನ್ನು ಅನಿಸ್ ಎನ್ನುವ ತಮಿಳು ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇರುವುದೇ 3 ಪಾತ್ರಗಳು, ಸಂಬಂಧಗಳ ಕುಟುಂಬದ ಮೌಲ್ಯವನ್ನು ಸಿನಿಮಾ ಅರ್ಥಮಾಡಿಸುತ್ತದೆ ಎಂದು ನಿರ್ದೇಶಕರು ಸಿನಿಮಾ ಕಥೆ ಬಗ್ಗೆ ಹೇಳಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಇರುವುದೇ ಮೂರು ಪಾತ್ರಗಳು, ನಾಯಕ, ನಾಯಕಿ ಮತ್ತು ಅವರ ಮಗುವಿನ ಪಾತ್ರ ಆಗಿದ್ದು, ಈ ಮೂರು ಪಾತ್ರಗಳ ಸುತ್ತವೆ ಕಥೆ ಸುತ್ತುತ್ತದೆ. ಇನ್ನು ಸಿನಿಮಾಗೆ ನಾಯಕಿಯಾಗಿ ಬೆಂಗಾಲಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಬರ್ಖಾ ಬಿಶ್ಟ್ ಸೇನ್‌ ಗುಪ್ತಾ ಅವರನ್ನು ಕರೆತರಲಾಗಿದೆ. ಹಲವು ಬೆಂಗಾಲಿ ಸಿನಿಮಾಗಳು ಮತ್ತು ಕೆಲವು ಹಿಂದಿ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಬರ್ಖಾ ಅವರಿಗೆ ಮೊದಲ ಸಿನಿಮಾ ಆಗಿದ್ದು, ಬಹಳ ಸಂತೋಷದಿಂದ ಹೇಳಿಕೊಂಡಿದ್ದಾರೆ . ಇದನ್ನು ಓದಿ..Kannada News: ದಿಡೀರ್ ಎಂದು ಬಂದರು, ಮಿಂಚಿದರು, ಮನಗೆದ್ದರು, ಹಾಗೆ ಕಣ್ಮರೆಯಾದ ಟಾಪ್ 10 ನಟಿಯರು ಯಾರ್ಯಾರು ಗೊತ್ತೇ??

“ಬೆಂಗಾಲಿ ಭಾಷೆಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ, ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ, ದಕ್ಷಿಣ ಭಾರತ ಚಿತ್ರರಂಗದಲ್ಲೇ ಇದು ನನ್ನ ಮೊದಲ ಸಿನಿಮಾ. ರವಿಚಂದ್ರನ್ ಅವರಂತಹ ಲೆಜೆಂಡ್ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಸಂತೋಷ ಇದೆ..ಇದೊಂದು ತುಂಬಾ ಒಳ್ಳೆಯ ಕಥೆ ಇರುವ ಸಿನಿಮಾ, ನಾನು ರವಿ ಸರ್ ಹೆಂಡತಿ ಪಾತ್ರದಲ್ಲಿ ನಟಿಸುತ್ತಿದ್ದೇನೆ, ನಮ್ಮಿಬ್ಬರಿಗೆ ಸಂಬಂಧದ ಮಹತ್ವ ಗೊತ್ತಿರುವುದಿಲ್ಲ. ಪರಿಸ್ಥಿತಿಗಳ ಮೂಲಕ ಅರ್ಥಮಾಡಿಕೊಂಡು ಒಂದಾಗುತ್ತೇವೆ..” ಎಂದು ನಟಿ ಬರ್ಖಾ ಹೇಳಿದ್ದಾರೆ. ಇವರ ಈ ಮಾತು ಕೇಳಿ, ರವಿಚಂದ್ರನ್ ಅವರು ಎಲ್ಲಿಂದ ಹೀರೋಯಿನ್ ಅನ್ನು ಕರೆತಂದಿದ್ದಾರೆ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನು ಓದಿ..Kannada News: ಗಣ್ಯಾತಿ ಗಣ್ಯರು ಆಗಮಿಸಿದ್ದ ಅಭಿಷೇಕ್ ಎಂಜೆಮೆಂಟ್ ಊಟಕ್ಕ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?

Comments are closed.