Neer Dose Karnataka
Take a fresh look at your lifestyle.

Kannada News: ರಶ್ಮಿಕಾ ಕನ್ನಡಕ್ಕೆ ಬರದೇ ಹೋದರೇನು ಅವರ ಸ್ಥಾನವನ್ನು ಗಟ್ಟಿಯಾಗಿ ತುಂಬುವ ನಟಿ ಸಿಕ್ಕೇ ಬಿಟ್ಟರು. ಆ ನಟಿ ಯಾರು ಗೊತ್ತೇ?

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ವಿಶೇಷವಾಗಿ ಪುಷ್ಪ ಸಿನಿಮಾ ಇವರ ಕ್ರೇಜ್ ಅನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿತು ಎಂದು ಹೇಳಬಹುದು. ಪಕ್ಕಾ ಹಳ್ಳಿ ಹುಡುಗಿ ಹಾಗೆ ಕಾಣಿಸಿಕೊಂಡಿದ್ದ ರಶ್ಮಿಕಾ ಅವರ ಗೆಟಪ್ ಕೂಡ ವೈರಲ್ ಆಗಿತ್ತು, ರಶ್ಮಿಕಾ ಅವರನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಆದರೆ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಕನ್ನಡದ ಬಗ್ಗೆ ಅವರಿಗೆ ಇರುವ ಧೋರಣೆ, ಅಸಡ್ಡೆಯನ್ನು ನೋಡಿ ಕನ್ನಡಿಗರು ಅವರನ್ನು ಬ್ಯಾನ್ ಮಾಡಬೇಕು ಎಂದುಕೊಂಡಿದ್ದರು.

ರಶ್ಮಿಕಾ ಅವರು ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ವಿಷಯ ಗೊತ್ತಿದೆ. ರಶ್ಮಿಕಾ ಅವರ ಪಾತ್ರ ಪುಷ್ಪ2 ನಲ್ಲೂ ಮುಂದುವರೆದಿದೆ. ಆದರೆ ಇದೀಗ ಸಿನಿಪ್ರಿಯರು ಮತ್ತು ನೆಟ್ಟಿಗರು ಪುಷ್ಪ2 ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರನ್ನು ಬಿಟ್ಟು, ಮತ್ತೊಬ್ಬ ನಟಿಯನ್ನು ಹಾಕಿಕೊಳ್ಳಿ ಎಂದು ಬೇಡಿಕೆ ಇಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬದಲಾಗಿ ನಟ್ಟಿಗರು ಆಯ್ಕೆ ಮಾಡಿರುವ ನಟಿ ಮತ್ಯಾರು ಅಲ್ಲ, ಕನ್ನಡ ಕಿರುತೆರೆಯಿಂದ ಹೆಸರು ಪಡೆದ ಖ್ಯಾತ ನಟಿ ಮೇಘಾ ಶೆಟ್ಟಿ ಅವರು. ಜೊತೆ ಜೊತೆಯಲಿ ಧಾರವಾಹಿ ಮೂಲಕ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದಲ್ಲಿ ಮನೆಮಾತಾಗಿದ್ದಾರೆ. ಅಷ್ಟೇ ಅಲ್ಲದೆ ದಿಲ್ ಪಸಂದ್ ಮತ್ತು ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಓದಿ..Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿ ಸದ್ದು ಮಾಡುತ್ತಿರುವ ಮೇಘಾ ಶೆಟ್ಟಿ ಅವರು, ಸೋಷಿಯಲ್ ಮೀಡಿಯಾದಲ್ಲಿ ಕೂಡ ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಅವರು ಲಂಗಾ ದಾವಣಿ ಧರಿಸಿ, ಕೈಗೆ ಬಳೆ ಹಾಕಿಕೊಂಡು, ಅಪ್ಪಟ ಹಳ್ಳಿ ಹುಡುಗಿಯ ಹಾಗೆ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ, ಹಾಗೆಯೇ ಪುಷ್ಪ2 ಚಿತ್ರತಂಡಕ್ಕೆ ಒಂದು ಹೊಸ ಬೇಡಿಕೆಯನ್ನು ಕೂಡ ಇಟ್ಟಿದ್ದಾರೆ. ಅದೇನೆಂದರೆ, ರಶ್ಮಿಕಾ ಮಂದಣ್ಣ ಅವರ ಬದಲಾಗಿ, ಪುಷ್ಪ2 ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಮೇಘಾ ಶೆಟ್ಟಿ ಅವರಿಗೆ ನೀಡಿ ಎನ್ನುತ್ತಿದ್ದಾರೆ ನೆಟ್ಟಿಗರು. ನೆಟ್ಟಿಗರ ಈ ಆಸೆ ನೆರವೇರುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಹತ್ತು ವರ್ಷಗಳ ಬಳಿಕ ಮನೆಗೆ ಬರುತ್ತಿರುವ ಸಮಯದಲ್ಲಿ ನಯನತಾರ ಮಡಿದ ತಪ್ಪನ್ನೇ ಮಾಡುತ್ತಿರುವ ರಾಮ್ ಚರಣ್ ಪತ್ನಿ. ಏನಾಗಿದೆ ಗೊತ್ತೆ?

Comments are closed.