Neer Dose Karnataka
Take a fresh look at your lifestyle.

Kannada News: ಮತ್ತದೇ ಬಿಲ್ಡ್ ಅಪ್ ಕೊಟ್ಟ ವಿಶಾಲ್, ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯುತ್ತಿದ್ದೆ, ಆದರೆ ಎಂದು ಹೇಳಿದ್ದೇನು ಗೊತ್ತೆ?

Kannada News: ತಮಿಳು ನಟ ವಿಶಾಲ್ (Vishal) ಅವರು ಕನ್ನಡ ಚಿತ್ರರಂಗಕ್ಕೆ ಹತ್ತಿರವಾಗಿದ್ದಾರೆ, ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅಪ್ಪು ಅವರು ಇನ್ನಿಲ್ಲವಾದ ಸಮಯದಲ್ಲಿ ಕಣ್ಣೀರು ಹಾಕಿದ್ದರು. ಅಷ್ಟೇ ಅಲ್ಲದೆ, ಅಪ್ಪು ಅವರು ತಮ್ಮ ಸಹೋದರನ ಹಾಗೆ ಎಂದು ಹೇಳಿ, ಅಪ್ಪು ಅವರು ನೋಡಿಕೊಳ್ಳುತ್ತಿರುವ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ತಾವು ಸಿದ್ಧ ಎಂದು ಹೇಳಿದ್ದರು ನಟ ವಿಶಾಲ್. ಹಲವು ಬಾರಿ ಅಪ್ಪು ಅವರನ್ನು ನೆನೆದಿದ್ದರು.

ಅಷ್ಟೇ ಅಲ್ಲದೆ, ಒಂದು ಸಾರಿ ಮೈಸೂರಿಗೆ (Mysore) ಕೂಡ ಭೇಟಿ ನೀಡಿ, ಶಕ್ತಿಧಾಮದ (,Shaktidhama) ಮಕ್ಕಳ ಜೊತೆಗೆ ಒಂದಷ್ಟು ಹೊತ್ತು ಸಮಯ ಕಳೆದು, ಮಕ್ಕಳಿಂದ ತುಂಬಾ ಕಲಿತೆ ದೇವಸ್ಥಾನಕ್ಕೆ ಹೋದರೆ ಒಬ್ಬರು ದೇವರು ಇರುತ್ತಾರೆ. ಆದರೆ ಶಕ್ತಿಧಾಮದಲ್ಲಿ ಒಂದೇ ಕಡೆ ಎಲ್ಲಾ ದೇವರುಗಳು ಇದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ತಾನು ಮಕ್ಕಳ ಸೇವೆಗೆ ಸದಾ ಸಿದ್ಧ, ಡಾ.ರಾಜ್ ಕುಮಾರ್ ಅವರ ಕುಟುಂಬದವರು, ಶಿವಣ್ಣ ಗೀತಕ್ಕ ಒಂದು ಅವಕಾಶ ಕೊಡಬೇಕು ಎಂದು ಹೇಳಿದ್ದರು. ಇದನ್ನು ಓದಿ..Kannada News: ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಪಟ್ಟ ನಟಿಸಿದ ಈಕೆ ನಿಜಕ್ಕೂ ಯಾರು ಗೊತ್ತೇ? ಈಕೆಯ ಅಸಲಿ ಟ್ಯಾಲೆಂಟ್ ಏನು ಗೊತ್ತೇ?

ಸಾಕಷ್ಟು ಸಾರಿ ಈ ರೀತಿ ಹೇಳಿದ್ದರು ಕೂಡ ವಿಶಾಲ್ ಅವರು ಮಕ್ಕಳನ್ನು ನೋಡಿಕೊಳ್ಳುವುದಾಗಲಿ ಅಥವಾ ಇನ್ನೇನೇ ಆಗಲಿ ಮಾಡಿರಲಿಲ್ಲ. ಇದೀಗ ಮತ್ತೊಮ್ಮೆ ಮೈಸೂರಿಗೆ ಬಂದು, ಅದೇ ರೀತಿ ಮಾತನಾಡಿದ್ದಾರೆ, “ಶಕ್ತಿಧಮದ ಮಕ್ಕಳನ್ನು ದತ್ತು ಪಡೆದು ಅವರ ಸೇವೆ ಮಾಡಲು ನಾನು ಕಾಯುತ್ತಿದ್ದೇನೆ. ಇದಕ್ಕಾಗಿ ಡಾ. ರಾಜ್ ಕುಮಾರ್ (Dr. Rajkumar) ಅವರ ಕುಟುಂಬದ ಒಪ್ಪಿಗೆ ನನಗೆ ಬೇಕು. ಮಕ್ಕಳ ಸೇವೆ ಮಾಡಲು ನಾನು ಯಾವಾಗಲೂ ಸಿದ್ಧವಾಗಿರುತ್ತೇನೆ. ಈಗ ಇಲ್ಲಿ ಪರಿಸ್ಥಿತಿ ನೋಡಿದರೆ, ಇವರಿಗೆ ಸಹಾಯದ ಅವಶ್ಯಕತೆ ಇಲ್ಲ. ಡಾ.ರಾಜ್ ಕುಮಾರ್ ಅವರ ಕುಟುಂಬ ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ..

ಇಲ್ಲಿಗೆ ಅವಶ್ಯಕತೆ ಇದ್ದರೆ ಖಂಡಿತವಾಗಿ ನಾನು ಬಂದು ನೋಡಿಕೊಳ್ಳುತ್ತೇನೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರು ಕೂಡ, ಶಕ್ತಿಧಾಮಕ್ಕೆ ಬಂದು ಈ ಮಕ್ಕಳ ಸೇವೆ ಮಾಡಲು ನಾನು ಸದಾ ಸಿದ್ಧ…” ಎಂದು ಹೇಳಿದ್ದಾರೆ ನಟ ವಿಶಾಲ್. ಆದರೆ ಅಭಿಮಾನಿಗಳು ವಿಶಾಲ್ ಅವರ ಮಾರು ಕೇಳಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಶಾಲ್ ಅವರ ಈ ಹೇಳಿಕೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳು ಬೇರೆಯದೇ ರೀತಿಯಲ್ಲಿ ವಿಶಾಲ್ ಅವರ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಓದಿ..Kannada News: ಹತ್ತಾರು ನಟಿಯರನ್ನು ಪ್ರೀತಿಸಿ ಕೈಕೊಟ್ಟ ನಟ ರಾಣಾ: ಕೊನೆಗೆ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ? ಹೇಗೆ ಸಂಬಂಧ ಗೊತ್ತೇ? ಇದು ಪ್ರತಿ ಹುಡುಗರ ಕನಸ್ಸು.

ದತ್ತು ತೆಗೆದುಕೊಳ್ಳುತ್ತೇನೆ ತೆಗೆದುಕೊಳ್ಳುತ್ತೇನೆ ಎಂದು ಅವತ್ತಿನಿಂದ ಹೇಳ್ತಾನೆ ಇದ್ದೀರಾ, ಆದರೆ ತಗೊಂಡಿಲ್ಲ. ಇಲ್ಲಿ ಅವಕಾಶ ಇಲ್ಲ ಅಂದ್ರೆ ಬೇರೆ ಮಕ್ಕಳನ್ನ ದತ್ತು ಪಡೆಯಿರಿ, ಅಥವಾ ನೀವೇ ಹೊಸದಾಗಿ ಟ್ರಸ್ಟ್ ಆರಂಭಿಸಿ ಅದಕ್ಕೆ ಅಪ್ಪು ಹೆಸರಿಡಿ, ಅದರಿಂದ ಅಪ್ಪು ಅವರಿಗೆ ಸಂತೋಷ ಆಗುತ್ತದೆ, ಇನ್ನಷ್ಟು ಮಕ್ಕಳಿಗೂ ಒಳ್ಳೆಯದಾಗುತ್ತದೆ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶಾಲ್ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನು ಮೈಸೂರಿನಲ್ಲಿ ಮಾತನಾಡಿರುವ ವಿಶಾಲ್ ಅವರು, ತಮಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಆಸೆ ಇದೆ ಎಂದು ಕೂಡ ಹೇಳಿದ್ದಾರೆ. ವಿಶಾಲ್ ಅವರ ತಂದೆ ಕರ್ನಾಟಕದವರು, ಹಾಗಾಗಿ ವಿಶಾಲ್ ಅವರ ತಂದೆಗೆ ಮತ್ತು ವಿಶಾಲ್ ಅವರಿಗೆ ಇಬ್ಬರಿಗೂ ಕೂಡ ಕನ್ನಡದಲ್ಲಿ ನಟಿಸಬೇಕು ಎಂದು ಆಸೆ ಇದೆಯಂತೆ. 2023ರಲ್ಲಿ ವಿಶಾಲ್ ಅವರು ಬಹಳ ಬ್ಯುಸಿ ಇದ್ದು, ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ, 2024ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ ನಟ ವಿಶಾಲ್. ಇದನ್ನು ಓದಿ.. Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.