Neer Dose Karnataka
Take a fresh look at your lifestyle.

Kannada News: ಬಾಯ್ತಪ್ಪಿ ನಾಲಿಗೆ ಹರಿ ಬಿಟ್ಟ ದರ್ಶನ್: ಒಬ್ಬ ನಟನೆ ಹೀಗೆ ಹೇಳಿದರೆ ಹೇಗೆ ಎಂದ ನೆಟ್ಟಿಗರು. ದರ್ಶನ್ ಮಾಡಿದ ಎಡವಟ್ಟೇನು ಗೊತ್ತೇ??

Kannada News: ನಟ ದರ್ಶನ್ (Darshan) ಅವರಿಗೆ ಹೊಸಪೇಟೆಯಲ್ಲಿ ನಡೆದ ಘಟನೆ ಎಷ್ಟು ದೊಡ್ಡದಾಗಿ ಚರ್ಚೆಗೆ ಒಳಗಾಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಆ ರೀತಿ ಮಾಡಿದ ವ್ಯಕ್ತಿ ಈಗ, ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಆದರೆ ಈ ಘಟನೆ ನಡೆದಾಗ, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೇ ಈ ರೀತಿ ಮಾಡಿದ್ದಾನೆ ಎಂದು ದರ್ಶನ್ ಅವರ ಅಭಿಮಾನಿಗಳು ಕಿಡಿ ಕಾರಿದ್ದರು. ಇತ್ತ ಅಪ್ಪು (Appu) ಅವರ ಅಭಿಮಾನಿಗಳು, ಮೂರನೇ ವ್ಯಕ್ತಿ ಯಾರೋ ಮಾಡಿದ ತಪ್ಪಿಗೆ ಅಪ್ಪು ಅವರ ಹೆಸರನ್ನು ತರಬೇಡಿ, ಅವರ ಅಭಿಮಾನಿಗಳು ಆ ರೀತಿ ಮಾಡುವುದಿಲ್ಲ ಎಂದು ಹೇಳಿದರು.

ಇತ್ತ ಯುವ ರಾಜ್ ಕುಮಾರ್ ಅವರು ಕೂಡ ಮೂರನೆಯವರು ಮಾಡಿದ ಕೃತ್ಯಕ್ಕೆ ಅಭಿಮಾನಿಗಳ ಮೇಲೆ ಅಪವಾದ ಹಾಕಬೇಡಿ ಎಂದು ಪತ್ರ ಬರೆದಿದ್ದರು. ಇದೆಲ್ಲ ಒಂದು ಕಡೆ ನಡೆಯುತ್ತಿದ್ದರೆ, ಡಿಸೆಂಬರ್ 15ರಂದು ಹುಬ್ಬಳ್ಳಿಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಯಿತು. ಈ ಸಮಯದಲ್ಲಿ ನಟ ದರ್ಶನ್ ಕೆಲವು ಮಾತುಗಳನ್ನಾಡಿದ್ದು, ಆ ಮಾತಿಗೆ ನೆಟ್ಟಿಗರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದೆ.. “ನೀವು ಏನೇ ಮಾಡಿದರೂ ನಾವು ಬೇಜಾರ್ ಮಾಡ್ಕೊಳಲ್ಲ..ತಲೆಗ್ ಹಾಕೋಳಲ್ಲ..ನೊಂದುಕೊಳ್ಳಲ್ಲ.. ಈ ರೀತಿ ಅಂದುಕೊಂಡೆ ಓಡಾಡೋಣ..ನಾವು ಇನ್ನು ಒಂದ್ ಸ್ಟೆಪ್ ಮುಂದೆ ಹೋಗಿ ಉರ್ಸ್ಬೇಕು ಅಂದ್ರೆ.. ಮುಂದೆ ಹೋಗಿ ಉರಿಸೋಣ.. ಇದನ್ನು ಓದಿ..Kannada News: ವಂಶಿಕ ರವರನ್ನು ಕೂಡ ಹಿಂದಿಕ್ಕಿ ಮುನ್ನುಗ್ಗಿದ ಪುಟಾಣಿ ದಿವ್ಯ ಹೆಗ್ಡೆ. ಏನು ಗೊತ್ತೇ??

ನಾವು ಮಾತಾಡೋದು ಬೇಡ.. ನಮ್ಮ ಕೆಲಸ ಮಾತಾಡಲಿ ಅಂತ ಬಯಸೋದು..” ಎಂದು ನಟ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಆದರೆ ಈ ಮಾತುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಉನ್ನತ ಸ್ಥಾನದಲ್ಲಿರುವ ನಟನಾಗಿ ದರ್ಶನ್ ಅವರೆ ಈ ರೀತಿ ಮಾಡಿದರೇ, ಇನ್ನು ಅಭಿಮಾನಿಗಳ ಕಥೆ ಏನು ಎನ್ನುತ್ತಿದ್ದಾರೆ ನೆಟ್ಟಿಗರು. ಆದರೆ ದರ್ಶನ್ ಅವರ ಅಭಿಮಾನಿಗಳು ಈ ಮಾತುಗಳಿಗೆ ಬೆಂಬಲ ನೀಡಿದ್ದಾರೆ. ಡಿಬಾಸ್ ಅವರ ಈ ಮಾತು ಕೇಳಿ, ವಾರ್ನಿಂಗ್ ಅಂದ್ರೆ ಇದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ನೆಟ್ಟಿಗರು ವಿರೋಧವಾಗಿ ಹೇಳುತ್ತಿದ್ದಾರೆ.. ಇದನ್ನು ಓದಿ.. Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

Comments are closed.