Neer Dose Karnataka
Take a fresh look at your lifestyle.

Biggboss Kannada: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ ಆರ್ಯವರ್ಧನ್; ರೂಪೇಶ್ ಶೆಟ್ಟಿ ಬಗ್ಗೆ ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಓಟಿಟಿ ಸೀಸನ್ ಇಂದ ಬಿಗ್ ಬಾಸ್ ಟಿವಿ ಶೋಗೆ ಬಂದಿದ್ದ ಆರ್ಯವರ್ಧನ್ ಗುರೂಜಿ, ಫಿನಾಲೆ ವೀಕ್ ಗೆ ಬಂದು, ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮಂಗಳವಾರ ಎಲಿಮಿನೇಟ್ ಆದರು. ಗುರುಜಿ ಅವರಿಗೆ ಗೆಲ್ಲಬೇಕು ಎನ್ನುವ ಆಸೆ ಇತ್ತು, ಆದರೆ ಅದು ನೆರವೇರಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ಆರ್ಯವರ್ಧನ್ ಗುರೂಜಿ ಮಾಧ್ಯಮಗಳ ಎದುರು ಮಾತನಾಡಿ ಕಣ್ಣೀರು ಹಾಕಿದ್ದಾರೆ.

ಮೊದಲಿಗೆ ಬಿಗ್ ಬಾಸ್ ಇಂದ ಎಲಿಮಿನೇಟ್ ಆದಾಗಲು ಗುರುಜಿ ಕಣ್ಣೀರು ಹಾಕಿದ್ದರು., ಇದೀಗ ಎರಡನೇ ಸಾರಿ ರೂಪೇಶ್ ಶೆಟ್ಟಿ ಅವರು ಗೆಲ್ಲಬೇಕು, ನನ್ನ ಮಗ ಗೆಲ್ಲಬೇಕು ಎಂದು ಆರ್ಯವರ್ಧನ್ ಗುರೂಜಿ ಕಣ್ಣೀರು ಹಾಕಿದ್ದಾರೆ. “ಎಲ್ಲರಿಗು ಒಂದ್ ಮಾತು ಹೇಳ್ತೀನಿ, ರೂಪೇಶ್ ಶೆಟ್ಟಿ ಗೆಲ್ಲಬೇಕು, ಅವನು ನನ್ನ ಮಗನ ಥರ..ಈ ಮಾತನ್ನ ನಾನು ಹಲವು ಅರ್ಥಗಳಿಂದ ಹೇಳುತ್ತಿದ್ದೀನಿ. ಮಧ್ಯರಾತ್ರಿ ನಾನು ಎಲಿಮಿನೇಟ್ ಆಗ್ತೀನಿ ಅಂತ ನನಗೆ ಗೊತ್ತಿತ್ತು. ರಾಕೇಶ್ ಆಗಾಗ ಕೇಳ್ತಾ ಇದ್ದ, ಯಾರು ಹೋಗೋದು ಅಂತ, 4 ರಿಂದ 7 ಸಂಖ್ಯೆ ಒಳಗೆ ಇರುವವರು ಹೋಗ್ತಾರೆ ಅಂತ ಹೇಳಿದ್ದೆ. ಅದೇ ಥರ ನಾನು ಬಂದೆ. ಇದನ್ನ ನಾನು ಗೆಸ್ ಮಾಡಿದ್ದೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಆಸ್ಪತ್ರೆ ಸೇರಿದ್ದ ಸಮಂತಾ ಆರೋಗ್ಯದ ಕುರಿತು ತಿಂಗಳ ನಂತರ ತಿಳಿಯಿತು ಅಪ್ಡೇಟ್: ದೇವ ಲೋಕದ ಅಪ್ಸರೆ, ಹೇಗಿದ್ದಾರೆ ಅಂತೇ ಗೊತ್ತೇ??

ಒಂದ್ ಮಾತನ್ನ ಯಾವಾಗಲೂ ಹೇಳ್ತೀನಿ.. ರೂಪೇಶ್ ಶೆಟ್ಟಿ ಗೆಲ್ಲಬೇಕು. ಮಗ ನೀನು ಗೆಲ್ಲು, ನಾನು ನಿನ್ನ ಹಿಂದೆ ಇರ್ತೀನಿ. ನನಗೆ ಗೊತ್ತಿತ್ತು ಎರಡನೇ ವಾರವೇ ನಾನು ಮನೆಯಿಂದ ಹೊರಗಡೆ ಬರ್ತೀನಿ ಅಂದುಕೊಂಡಿದ್ದೇ, ಆದರೆ ಕಷ್ಟಪಟ್ಟು ಆಡಿ ಇಲ್ಲಿವರೆಗು ತಲುಪಿದ್ದೇ, ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ತಗೊಂಡೆ. ನಾನು ಬಹಳ ಸಾರಿ ತಪ್ಪು ಮಾಡಿ, ತಪ್ಪಾಗಿ ಮಾತನಾಡಿದ್ದೀನಿ.. ನನ್ನನ್ನ ಕ್ಷಮಿಸಿ ಅಂತ ಎಲ್ಲರನ್ನು ಕೇಳಿಕೊಳ್ಳುತ್ತೀನಿ. ನಾನು ಚೆನ್ನಾಗಿ ಆಟ ಆಡಿದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲರನ್ನ ನಾನು ನನ್ನ ಮನೆಯವರೇ ಅಂದುಕೊಂಡಿದ್ದೆ. ಕರ್ನಾಟಕದ ಜನರಿಗೆ ನನ್ನನ್ನ ನೋಡಿ ಖುಷಿಯಾಗಿದೆ…” ಎಂದು ಸಂತೋಷಪಟ್ಟಿದ್ದಾರೆ ಆರ್ಯವರ್ಧನ್ ಗುರೂಜಿ. ಇದನ್ನು ಓದಿ..Kannada News: ದೇಶವೇ ಮೆಚ್ಚಿರುವ ಜೋಡಿ, ಅಲ್ಲೂ ಅರ್ಜುನ್ ರವರು ತಮ್ಮ ಪತ್ನಿ ಸ್ನೇಹ ರವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೇ? ಇಷ್ಟೆಲ್ಲ ಬೇಕಾ??

Comments are closed.