Neer Dose Karnataka
Take a fresh look at your lifestyle.

Kannada News: ಸಮಂತಾಗೆ ಶಾಕ್ ಕೊಟ್ಟ ನಾಗ ಚೈತನ್ಯ; ಎಮ್ ಮಾಯ ಚೆಸವೇ ಎರಡನೇ ಭಾಗಕ್ಕೆ ಕನ್ನಡತಿ ನಟಿಯಾಗಿ ಆಯ್ಕೆ. ಯಾರು ಗೊತ್ತೇ ಆ ಚೆಲುವೆ??

Kannada News: ಯೇ ಮಾಯ ಚೇಸಾವೆ (Ye Maya Chesave) ಇದು ಟಾಲಿವುಡ್ (Tollywood) ನಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾ, ಗೌತಮ್ ಮೆನನ್ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾ, ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು, ತಮಿಳಿನಲ್ಲಿ ಸಿಂಬು ಮತ್ತು ಮತ್ತು ತ್ರಿಷಾ ನಟಿಸಿದರೆ, ತೆಲುಗಿನಲ್ಲಿ ನಾಗಚೈತನ್ಯ (Nagachaitanya) ಮತ್ತು ಸಮಂತಾ (Samantha) ಜೊತೆಯಾಗಿ ನಟಿಸಿದ್ದರು. ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಇದಾಗಿತ್ತು, ಈ ಸಿನಿಮಾ ಚಿತ್ರೀಕರಣ ಸಮಯದಿಂದಲೇ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಕಾರ್ತಿಕ್ ಜೆಸ್ಸಿ ಪಾತ್ರಗಳು ಈಗಲೂ ತೆಲುಗು ಚಿತ್ರರಂಗದ ಫೇವರೆಟ್ ಪಾತ್ರಗಳಾಗಿ ಉಳಿದಿದೆ.

ಈಗ ಯೇ ಮಾಯ ಚೇಸಾವೆ ಪಾರ್ಟ್ 2 ತೆರೆಗೆ ತರಲು ಪ್ಲಾನ್ ಮಾಡಲಾಗುತ್ತಿದೆ. ಕಾರ್ತಿಕ್ ಜೆಸ್ಸಿ ಮದುವೆಯಾದ ನಂತರ ಕಥೆಯಲ್ಲಿ ಏನಾಯಿತು ಎನ್ನುವ ಮುಂದುವರೆದ ಭಾಗವನ್ನು ಕಥೆಯಾಗಿ ತೆರೆಮೇಲೆ ತರಲು ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಗೌತಮ್ ವಾಸುದೇವ ಮೆನನ್. ಆದರೆ ಈಗ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಜೊತೆಯಾಗಿಲ್ಲ. ಜೊತೆಗೆ ಸಮಂತಾ ಅವರು ಮಯೋಸೈಟಿಸ್ ಸಮಸ್ಯೆ ಇಂದ ಬಳಲುತ್ತಿದ್ದಾರೆ ಇದರಿಂದ ಸಮಂತಾ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಮತ್ತೊಮ್ಮೆ ನಾಗಚೈತನ್ಯ ಅವರ ಜೊತೆಗೆ ಮತ್ತೊಮ್ಮೆ ಸಿನಿಮಾ ಮಾಡುತ್ತಾರಾ ಎಂದು ಖಚಿತ ಮಾಹಿತಿ ಇಲ್ಲ. ಇದನ್ನು ಓದಿ..Kannada News: ಇಂದು ಮಹಾರಾಣಿಯಂತೆ ನರೇಶ್ ಅರಮನೆಯ ಸಿಂಹಾಸನ ಏರಿರುವ ಪವಿತ್ರ, ಅಂದು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಮೇರು ನಟ ಯಾರು ಗೊತ್ತೇ??

ಹಾಗಾಗಿ ನಾಗಚೈತನ್ಯ ಅವರು ಸಮಂತಾ ಅವರ ಬದಲಾಗಿ ಮತ್ತೊಬ್ಬ ನಟಿಯನ್ನು ಜೆಸ್ಸಿ ಪಾತ್ರಕ್ಕೆ ಕರೆತರಲು ಪ್ಲಾನ್ ಮಾಡಿದ್ದಾರೆ, ಅದು ಕನ್ನಡದ ನಟಿಯನ್ನೇ ಕರೆತರಲಾಗುತ್ತಿದೆ, ಜೆಸ್ಸಿ ಪಾತ್ರಕ್ಕೆ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು. ಪುಷ್ಪ2 (Pushpa2) ಮತ್ತು ಅನಿಮಲ್ ಹೊರತಾಗಿ ರಶ್ಮಿಕಾ ಅವರ ಕೈಯಲ್ಲಿ ಇನ್ಯಾವುದೇ ಸಿನಿಮಾ ಇಲ್ಲ, ಹಾಗಾಗಿ ರಶ್ಮಿಕಾ ಅವರು ಈ ಸಿನಿಮಾ ಒಪ್ಪಿಕೊಳ್ಳಬಹುದು ಎನ್ನಲಾಗುತ್ತಿದೆ. ಇನ್ನು ಸಿನಿಮಾ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇದನ್ನು ಓದಿ.. Biggboss Kannada: ಹಣ ಬಂತು, ಹೆಸರು ಬಂತು, ಆದರೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಹೋದಮೇಲೆ, ಮತ್ತೊಂದು ಸಿಕ್ತು. ಅದೇ ಎಲ್ಲದಕ್ಕಿಂತ ಮುಖ್ಯ. ಏನು ಗೊತ್ತೇ??

Comments are closed.