Neer Dose Karnataka
Take a fresh look at your lifestyle.

Kannada News: ಟ್ರೊಲ್ ಮಾಡಲು ನಾನೇನು ತಪ್ಪು ಮಾಡಿಲ್ಲ, ನನ್ನ ತಪ್ಪನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದ ರಶ್ಮಿಕಾ. ಅದು ಹೇಗೆ ಅಂತೇ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ನ್ಯಾಶನಲ್ ಕ್ರಶ್ ಆಗಿ ದೊಡ್ಡ ಹೆಸರು ಮಾಡಿದ್ದಾರೆ. ಅಭಿಮಾನಿಗಳಿಗೆ ರಶ್ಮಿಕಾ ಎಂದರೆ ಬಹಳ ಇಷ್ಟ. ಪುಷ್ಪ ಸಿನಿಮಾ ಯಶಸ್ಸಿನಿಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಬಾಲಿವುಡ್ ಗು ಕಾಲಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರ ಜೊತೆಗೆ ಗುಡ್ ಬೈ ಸಿನಿಮಾದಲ್ಲಿ ನಟಿಸಿದರು. ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದಾರೆ, ಆ ಸಿನಿಮಾ ಜನವರಿ 26ರಂದು ತೆರೆಕಾಣುತ್ತಿದೆ. ಇನ್ನುಳಿದ ಹಾಗೆ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ.

ಹಾಗೆಯೇ ಕಾಲಿವುಡ್ ನ ಖ್ಯಾತ ನಟ ವಿಜಯ್ ಅವರೊಡನೆ ನಟಿಸಿರುವ ವಾರಿಸು ಸಿನಿಮಾ ತೆರೆಕಂಡಿದೆ. ವೃತ್ತಿಯಲ್ಲಿ ರಶ್ಮಿಕಾ ಅವರು ಯಶಸ್ಸಿನಲ್ಲಿ ತೇಲುತ್ತಿದ್ದಾರೆ, ಅವರ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರುತ್ತಿದೆ. ಆದರೆ ರಶ್ಮಿಕಾ ಅವರು ವಿವಾದಗಳಿಗೂ ಸಿಲುಕಿಕೊಳ್ಳುತ್ತಿದ್ದಾರೆ. ಇವರು ಕೊಡುವ ಹೇಳಿಕೆಗಳು ಭಾರಿ ಟ್ರೋಲ್ ಗೆ ಒಳಗಾಗುತ್ತಿದೆ. ಈ ವಿಚಾರದ ಬಗ್ಗೆ ಈಗ ಖುದ್ದು ರಶ್ಮಿಕಾ ಅವರೇ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಅವರು ಹೇಳಿದ್ದು ಹೀಗೆ.. “ಈ ರೀತಿ ಆಗೋದಕ್ಕೆ ಕಾರಣ ನನಗೆ ನಾನು ಅಂದುಕೊಂಡಿರೋದನ್ನ ಸರಿಯಾಗಿ ಹೇಳೋದಕ್ಕೆ ಬರಲ್ಲ. ನನ್ನ ಮನಸ್ಸಿನಲ್ಲಿ ಇರುವ ವಿಷಯವನ್ನು ಎದುರಿಗೆ ಇರೋರಿಗೆ.. ಇದನ್ನು ಓದಿ.. Kannada News: ತಂದೆ ನಟ ಅಂತ ಗೊತ್ತು: ಆದರೆ ಅದನ್ನು ಮೀರಿಸಿದ ಪವಿತ್ರ ರವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ? IAS ಆಗಬೇಕಾಗಿದ್ದವರು ನಟಿಯಾಗಿದ್ದು ಯಾಕೆ ಗೊತ್ತೇ??

ಸರಿಯಾಗಿ ಹೇಳಿ ಅರ್ಥ ಮಾಡಿಸೋದಕ್ಕೆ ನನಗೆ ಆಗುತ್ತಿಲ್ಲ. ಅದರಿಂದಲೇ ಹೆಚ್ಚು ವಿವಾದಗಳು ಆಗುತ್ತಿದೆ..ನಾನು ಹೇಳುವ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ, ಅಥವಾ ಅದು ತಪ್ಪಾಗಿ ಜನರಿಗೆ ತಲುಪುತ್ತಿದೆ..” ಎಂದಿದ್ದಾರೆ ರಶ್ಮಿಕಾ. ಇದಕ್ಕೆ ಉದಾಹರಣೆ ಕೊಟ್ಟ ರಶ್ಮಿಕಾ, ರೊಮ್ಯಾಂಟಿಕ್ ಹಾಡುಗಳ ಬಗ್ಗೆ ಹೇಳಿದ ಹೇಳಿಕೆಯನ್ನು ಉದಾಹರಣೆಯಾಗಿ ನೀಡಿ, ಬಾಲಿವುಡ್ ಹಾಡುಗಳು ನನಗೆ ಇಷ್ಟ ಎಂದು ಹೇಳಿದೆ, ಹಾಗಂತ ಸೌತ್ ಇಂಡಿಯಾದ ಹಾಡುಗಳನ್ನು ಮರೆಯುವ ದಡ್ಡಿ ಅಲ್ಲ ನಾನು. ಮಾತನ್ನ ಬ್ಯಾಲೆನ್ಸ್ಡ್ ಆಗಿ ಹೇಳೋದಕ್ಕೆ ನನಗೆ ಬರಲಿಲ್ಲ.. ಎಂದು ಹೇಳಿ ತಮ್ಮ ತಪ್ಪು ಏನು ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ಓದಿ..Kannada News: ದೇಶದ ಮೈ ರೋಮವೇ ಎದ್ದು ನಿಲ್ಲುವಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಸಿನ್ ಬ್ಯಾನ್ ಆಗಿದ್ದು ಯಾಕೆ ಗೊತ್ತೇ?? ಯಪ್ಪಾ ಚಿತ್ರರಂಗದಲ್ಲಿ ಹಿಂಗೆಲ್ಲ ನಡೆಯುತ್ತಾ.

Comments are closed.