Kannada News: ಒಂದು ಕಾಲದಲ್ಲಿ ಎಲ್ಲರ ಮನಗೆದ್ದಿದ್ದ ಟಾಪ್ ನಟಿ, ಸುಮನ್ ರವರು ಈಗ ಹೇಗಿದ್ದಾರೆ ಗೊತ್ತೇ? ಏನು ಮಾಡುತ್ತಿದ್ದಾರೆ ಗೊತ್ತೇ??
Kannada News: 90ದಶಕದಲ್ಲಿ ಬಹಳ ಹೆಸರುವಾಸಿ ಆಗಿದ್ದ ನಿರ್ದೇಶಕರಲ್ಲೊ ಒಬ್ಬರು ಸುನೀಲ್ ಕುಮಾರ್ ದೇಸಾಯಿ. ಇವರು ಅತ್ಯುನ್ನತ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಹಾಗೆಯೇ ಇವರು ನಿರ್ದೇಶನ ಮಾಡಿದ ಸಿನಿಮಾ ನಾಯಕಿಯರಲ್ಲಿ ಒಬ್ಬರು ಸುಮನ್ ನಗರ್ಕರ್. ಸುಮನ್ ಅವರು ನಿಷ್ಕರ್ಷ, ಬೆಳದಿಂಗಳ ಬಾಲೆ, ಹೂಮಳೆ ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ನಟಿ ಸುಮನ್ ಅವರು ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..
ನಟಿ ಸುಮನ್ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 1991ರಲ್ಲಿ ಕಲ್ಯಾಣ ಮಂಟಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಸುಮನ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿಷ್ಕರ್ಷ, ಇದು ವಿಷ್ಣುವರ್ಧನ್ ಅವರು ನಾಯಕನಾಗಿ, ಬಿ.ಸಿ.ಪಾಟೀಲ್ ಅವರು ಮುಖ್ಯಪಾತ್ರದಲ್ಲಿ ನಟಿಸಿದ ಸಿನಿಮಾ ಆಗಿದ್ದು, ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ಸುಮನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮತ್ತು ಬೆಳದಿಂಗಳ ಬಾಲೆ ಸಿನಿಮಾ ಇವರ ಕೆರಿಯರ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.. ಇದನ್ನು ಓದಿ..Kannada News: ರಾಹುಲ್ ಏನು ಸುಮ್ಮನೆ ಮದುವೆಯಾಗಿಲ್ಲ, ಆಥಿಯಾ ಶೆಟ್ಟಿ ರವರ ಅಸ್ತಿ ಕೇಳಿದರೆ ಒಂದು ಕ್ಷಣ ದಂಗಾಗಿ ಹೋಗ್ತೀರಾ. ಅದೆಷ್ಟು ಕೋಟಿ ಗೊತ್ತೇ?

ಬಳಿಕ ಸುಮನ್ ಅವರು ನಮ್ಮೂರ ಮಂದಾರ ಹೂವೇ, ಹೂಮಳೆ, ದೋಣಿ ಸಾಗಲಿ ಸಿನಿಮಾಗಳಲ್ಲಿ ನಟಿಸಿ, ಬೇಡಿಕೆಯ ನಟಿಯಾಗಿದ್ದರು. ಆದರೆ ಗುರುದೇವ್ ನಾಗರಾಜ್ ಅವರೊಡನೆ ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದರು. ಅಮೆರಿಕಾದಲ್ಲಿ ನೆಲೆಸಿದ್ದ ಸುಮನ್ ಅವರು ಅಲ್ಲಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಹೇಳಿಕೊಡುತ್ತಿದ್ದರು. ಬಹಳಷ್ಟು ವರ್ಷಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಸಿನಿಮಾದಲ್ಲಿ ನಟಿಸಲು ಅವರನ್ನು ಕೇಳಿದಾಗ, ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ಆದರೆ ಸಿಕ್ಕ ಪಾತ್ರವನ್ನೆಲ್ಲಾ ಮಾಡದೆ ಮುಖ್ಯವಾದ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಓದಿ.. Kannada News: ಖ್ಯಾತ ನಟ ವಿಜಯ್ ವಿಚ್ಚೇದನ ನೀಡಿ ಟಾಪ್ ನಟಿಯನ್ನು ಮದುವೆಯಾಗುತ್ತಾರೆ?? ಆ ದೇವಲೋಕದ ಅಪ್ಸರೆ ಯಾರು ಎಂದು ತಿಳಿದರೆ ಊಟ ಮಾಡೋದೇ ಬಿಡ್ತೀರಾ.