ಜೊತೆ ಜೊತೆಯಲಿಗೆ ಬ್ರೇಕ್. ಒಂದಷ್ಟು ಸಿಹಿ ಸಾಕಷ್ಟು ಕಹಿ ಸುದ್ದಿ ನೀಡಲು ಮುಂದಾದ ಅನು. ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಜೊತೆ ಜೊತೆಯಲಿ ಧಾರವಾಹಿ ಪ್ರಮುಖ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ದನ್ ರವರ ಮದುವೆಯ ವಿಚಾರ ಫೈನಲ್ ಆಗಲಿದೆ. ಇದಕ್ಕಾಗಿ ಹಲವಾರು ತಿಂಗಳುಗಳಿಂದ ಎಲ್ಲಾ ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಮಧ್ಯದಲ್ಲಿ ಧಾರವಾಹಿಯನ್ನು ಬಹಳ ಎಳೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದ ಕಾರಣ ಇದೀಗ ಕೊನೆಗೂ ಆರ್ಯವರ್ದನ್ ಹಾಗೂ ಅನು ಸಿರಿಮನೆ ರವರನ್ನು ಒಂದು ಮಾಡಿಸುವ ಕೆಲಸ ಜೊತೆ ಜೊತೆಯಲ್ಲಿ ದಾರವಾಹಿ ಯಲ್ಲಿ ನಡೆಯಲಿದೆ. ಈತನ್ಮಧ್ಯೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಅದರ ಜೊತೆ ಕಹಿಸುದ್ದಿ ಕೂಡ ಕಾಣಿಸಿಕೊಳ್ಳಲಿದೆ.

ಹೌದು ಸ್ನೇಹಿತರೇ ಇದೀಗ ಕೇಳಿ ಬಂದಿರುವ ಕಿರುತೆರೆ ಮೂಲಗಳ ಪ್ರಕಾರ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಟನೆ ಮಾಡುತ್ತಿರುವ ಅನು ಸಿರಿ ಮನೆ ಖ್ಯಾತಿಯ ಮೇಘ ಶೆಟ್ಟಿ ರವರು ಕೆಲವು ದಿನಗಳ ಕಾಲ ಧಾರವಾಹಿಯಿಂದ ದೂರ ಉಳಿಯಲಿದ್ದಾರೆ, ಬಿಗ್ ಬಾಸ್ ಮನೆಗೆ ತೆರಳಲು ತುದಿಗಾಲಲ್ಲಿ ಕಾದು ನಿಂತಿರುವ ಅನು ಸಿರಿಮನೆ ರವರು ಬಿಗ್ ಬಾಸ್ ಮನೆಯಲ್ಲಿ ಇರುವಾಗ ಜೊತೆ ಜೊತೆಯಲ್ಲಿ ದಾರವಾಹಿ ಯಲ್ಲಿ ರಾಜನಂದಿನಿ ಪಾತ್ರದ ಕುರಿತು ಎಪಿಸೋಡ್ಗಳು ಪ್ರಸಾರವಾಗಲಿದೆ, ರಾಜ ನಂದಿನಿ ಪಾತ್ರದಲ್ಲಿ ಹಿಂದಿ ಕಿರುತೆರೆಯ ಖ್ಯಾತ ನಟಿ ಎರಿಕಾ ಫರ್ನಾಂಡಿಸ್ ಅವರು ನಟಿಸಿದ್ದಾರೆ.