ಕನ್ನಡತಿಗೆ ಒಲಿದು ಬಂದ ಮತ್ತೊಂದು ಅದೃಷ್ಟ ! ಏನ ಡಿಮ್ಯಾಂಡ್ ಅಂತೀರಾ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕನ್ನಡ ನಟಿಯರು ಸಾಕಷ್ಟು ಹವಾ ಸೃಷ್ಟಿಸಿದ್ದಾರೆ, ಅದರಲ್ಲಿಯೂ ಖ್ಯಾತ ನಟಿ ಅನುಷ್ಕಾ ಹಾಗೂ ಪೂಜಾ ಹೆಗಡೆ ರವರು ಇಂದಿಗೂ ಕೂಡ ಒಂದು ಸಿನಿಮಾ ಮಾಡಲು ಕೋಟಿ ಕೋಟಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗೆ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಸಾಲುಸಾಲು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ರವರು ಕೂಡ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹೀಗೆ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ರಶ್ಮಿಕಾ ಮಂದಣ್ಣ ರವರಿಗೆ ಮತ್ತೊಂದು ಅದೃಷ್ಟ ಒಲಿದು ಬಂದಿದೆ.

ಹೌದು ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಂದು ಚಿತ್ರ ನಿರ್ಮಾಣ ಮಾಡುವಾಗ ಕಥೆಗೆ ಸೂಕ್ತ ನಟ ಹಾಗೂ ನಟಿಯರನ್ನು ಆಯ್ಕೆ ಮಾಡುವ ಕೆಲಸ ನಡೆಯುತ್ತದೆ, ಆದರೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ನಟರಿಗೆ ಮಾತ್ರ, ನಟಿಯನ್ನು ಕಾಲ್ ಶೀಟ್ ಗಾಗಿ ಕೇಳಿದಾಗ ನಟಿಯು ಆಫರನ್ನು ತಿರಸ್ಕರ ಮಾಡಿದರೆ ಇನ್ನಿತರ ನಟಿಯನ್ನು ಹಾಕಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತದೆ. ಆದರೆ ರಶ್ಮಿಕಾ ಮಂದಣ್ಣ ರವರು ಕಾಲ್ ಶೀಟ್ ನೀಡದೆ ಇದ್ದರೂ ಕೂಡ ಚಿರಂಜೀವಿ ಪುತ್ರ ರಾಮಚರಣ್ ರವರು ತಮ್ಮದೇ ಆದ ಬ್ಯಾನರ್ ನಲ್ಲಿ ನಿರ್ಮಾಣ ವಾಗುತ್ತಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ರವರೇ ಬೇಕು ಅವರು ಯಾವಾಗ ಕಾಲ್ ಶೀಟ್ ನೀಡುತ್ತಾರೋ ಅವಾಗಲೇ ಸಿನಿಮಾ ನಿರ್ಮಾಣ ಮಾಡೋಣ ಎಂದಿದ್ದರಂತೆ. ತೆಲುಗಿನ ಟಾಪ್ ನಟರಲ್ಲಿ ಒಬ್ಬರಾದ ರಾಮಚರಣ್ ರವರು ನಿಜಕ್ಕೂ ರಶ್ಮಿಕಾ ಮಂದಣ್ಣ ರವರ ಕಾಲ್ ಶೀಟ್ ಗಾಗಿ ಕಾಯಲು ನಿರ್ಧಾರ ಮಾಡಿರುವುದು ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.