ಹುಚ್ಚ ವೆಂಕಟ್ ಬಿಗ್ ಬಾಸ್ ಮನೆ ರೂಲ್ಸ್ ಬ್ರೇಕ್ ಮಾಡಿ ಹೊರಹೋಗಿಲ್ಲದಿದ್ದರೆ ಏನಾಗುತ್ತಿತ್ತು ಎಂದು ಸುದೀಪ್ ಹೇಳಿದ್ದಾರೆ ಗೊತ್ತಾ

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಯಾರು ಏನೇ ಮಾಡಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರೆ ಖಂಡಿತ ಅವರು ಕೊನೆಯ ದಿನದವರೆಗೂ ಉಳಿದಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿ ಬಾರಿಯೂ ಹಲವಾರು ಸ್ಪರ್ಧಿಗಳ ಕುರಿತು ವಿವಾದಗಳು ಕೇಳಿ ಬರುತ್ತದೆಯಾದರೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೋ’ಟಿಂಗ್ ಉತ್ತರದ ಪ್ರಕಾರ ಪ್ರತಿವಾರವೂ ಸ್ಪರ್ಧಿಗಳು ಮನೆಯಲ್ಲಿ ಉಳಿಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧಾರ ಮಾಡುವುದು ಪ್ರೇಕ್ಷಕರು

ಇನ್ನು ಹೀಗೆ ಪ್ರೇಕ್ಷಕರು ಮೆಚ್ಚಿಕೊಂಡು ಅಂತಹ ಸ್ಪರ್ದಿಗಳಲ್ಲಿ ಹುಚ್ಚ ವೆಂಕಟ್ ಕೂಡ ಒಬ್ಬರು, ಹುಚ್ಚ ವೆಂಕಟ್ ರವರು ನೇರವಾಗಿ ನನಗೆ ಯಾರು ಮೆಸೇಜ್ ಕಳುಹಿಸುವುದು ಬೇಡ ಅದಕ್ಕಾಗಿ ಆರು ರೂಪಾಯಿ ಖರ್ಚು ಮಾಡಿ ಕೊಳ್ಳಬೇಡಿ ಆ ರೂಪಾಯಿಯಲ್ಲಿ ನಾಯಿಗೆ ಒಂದು ಬನ್ ನೀಡಿ ಎಂದು ಹೇಳಿದರೂ ಕೂಡ ಹಾಗೂ ಪ್ರತಿ ಬಾರಿಯೂ ನಾಮಿನೇಟ್ ಆದರೂ ಕೂಡ ಹುಚ್ಚ ವೆಂಕಟ್ ರವರನ್ನು ಪ್ರೇಕ್ಷಕರು ಮನೆಯಲ್ಲಿ ಉಳಿಸಿದ್ದರು.

ಆದರೆ ಬಿಗ್ ಬಾಸ್ ನಿಯಮವನ್ನು ಬ್ರೇಕ್ ಮಾಡಿ ಹುಚ್ಚ ವೆಂಕಟ್ ರವರು ಮನೆಯಿಂದ ಹೊರ ಬಂದರು, ಈ ಕುರಿತು ಸುದೀಪ್ ರವರನ್ನು ಪ್ರಶ್ನಿಸಿದಾಗ ನನ್ನ ಅಂದಾಜಿನ ಪ್ರಕಾರ ಒಂದು ವೇಳೆ ಹುಚ್ಚ ವೆಂಕಟ್ ರವರು ಒಂದು ನಿಯಮವನ್ನು ಪಾಲಿಸಿ ಬ್ರೇಕ್ ಮಾಡದೇ ಇದ್ದಿದ್ದರೆ ಖಂಡಿತ ಆ ಸೀಸನ್ ನಲ್ಲಿ ಹುಚ್ಚ ವೆಂಕಟ್ ರವರು ವಿಜೇತರಾಗಿ ಹೊರಬ ರುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಿನ ಟ್ರೆಂಡ್ ನೋಡಿದರೆ ಕಂಡಿತ ನಮಗೂ ಕೂಡ ಹಾಗೆ ಎನಿಸಿತು. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.