ರಾಬರ್ಟ್ ಗೆ ಬಿಗ್ ಶಾಕ್, ಸುಮ್ಮನೆ ಇರುತ್ತೇವೆ ಏನು ಮಾಡುವುದಿಲ್ಲ ಎಂದು ಸುಮ್ಮನಾದ ಉಮಾಪತಿ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆ ಎಂದ ತಕ್ಷಣ ಒಂದಲ್ಲ ಒಂದು ರೀತಿಯ ವಿವಾದಗಳು ಸದಾ ಸೃಷ್ಟಿಯಾಗುತ್ತಿರುತ್ತದೆ, ಈ ಬಾರಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿಯಿದೆ ಎಂದು ಕೊಳ್ಳುತ್ತಿರುವ ಸಂದರ್ಭದಲ್ಲಿ ಕೆಲವೊಂದು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಿಜಕ್ಕೂ ಬೇಸರ ಮೂಡಿಸಿವೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತೆ?? ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಚಿತ್ರರಂಗದ ದೊಡ್ಡ ಭೂತ ಪೈರಸಿ ಕಾಟ ಇದೀಗ ದರ್ಶನ್ ರವರು ನಟಿಸಿರುವ ರಾಬರ್ಟ್ ಸಿನಿಮಾ ಕೂಡ ಅಂಟಿಕೊಂಡಿದೆ. ಈ ಕುರಿತು ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರು ಮಾತನಾಡಿ ಸಿನಿಮಾ ಪೈರಸಿ ಆಗಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಸಾವಿರದ ಐನ್ನೂರಕ್ಕೂ ಹೆಚ್ಚು ಲಿಂಕುಗಳನ್ನು ಡಿಲೀಟ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ಆದರೆ ಅದೇ ಸಮಯದಲ್ಲಿ ಮಾತನಾಡಿರುವ ಉಮಾಪತಿ ಶ್ರೀನಿವಾಸ್ ರವರು ರಾಬರ್ಟ್ ಪೈರಸಿಯಿಂದ ಸ್ಟಾರ್ ನಟರ ಕೈವಾಡ ಇದೆ, ಅವರಿಗೆ ತಕ್ಕ ಶಾಸ್ತಿ ಮಾಡುವುದು ದೊಡ್ಡ ವಿಷಯವಲ್ಲ ಆದರೆ ಪೈರಸಿ ಮಾಡಿದವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲು ಹೋದರೆ ಅವರು ಕೆಲವರು ನಟರ ಅಭಿಮಾನಿಗಳು ಎಂಬುದು ತಿಳಿದು ಬರುತ್ತದೆ, ಅದೇ ಕಾರಣಕ್ಕಾಗಿ ಅವರನ್ನು ಸುಮ್ಮನೆ ಬಿಡುತ್ತಿದ್ದೇವೆ ಎಂದು ಉಮಾಪತಿ ರವರು ಹೇಳಿದ್ದಾರೆ. ಈ ಮೂಲಕ ಸ್ಟಾರ್ ನಟರ ಅಭಿಮಾನಿಗಳು ಈ ಕೆಲಸಕ್ಕೆ ಇಳಿದಿರುವುದು ಖಚಿತವಾಗಿದೆ. ಇದು ನಿಜಕ್ಕೂ ಕನ್ನಡ ಚಿತ್ರರಂಗ ಬೆಳೆಯುವುದನ್ನು ತಡೆಯುತ್ತಿದೆ ಎಂದರೆ ತಪ್ಪಾಗಲಾರದು.