ಕೊನೆಗೂ ಸಿಕ್ತು ಕಾರಣ, ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬರಲಿ ಕಾರಣವಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ, ಕನ್ನಡ ಕಿರುತೆರೆಯ ಹಿಟ್ ಸೀರಿಯಲ್ ಎಂದ ತಕ್ಷಣವೇ ನೆನಪಾಗುವುದು ಜೊತೆ ಜೊತೆಯಲಿ ಧಾರಾವಾಹಿ. ಹೌದು ಈ ಧಾರಾವಾಹಿ ಬಂದ ಮೊದಲ ದಿನದಿಂದಲೂ ಸುಮಾರು ಐದಾರು ತಿಂಗಳವರೆಗೂ ಟಿಆರ್ಪಿ ಲಿಸ್ಟ್ನಲ್ಲಿ ಮಿಕ್ಕ ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಸತತವಾಗಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತಿತ್ತು. ಅಲ್ಲದೆ ಕಿರುತೆರೆ ಲೋಕದಲ್ಲಿ ಹೊಸದೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಅದ್ಭುತ ಧಾರವಾಹಿ ಇದು. ಈ ಸೀರಿಯಲ್ ಲಾಂಚ್ ಆದ ದಿನವೇ ದೊಡ್ಡ ಹವಾ ಕ್ರಿಯೆಟ್ ಮಾಡಿತ್ತು ಎಂದರೆ ತಪ್ಪಾಗಲಾರದು. ಹೌದು ನಟ ಅನಿರುದ್ಧಗೆ ದೊಡ್ಡದೊಂದು ಬ್ರೇಕ್ ಕೊಟ್ಟಂತಹ ಅದ್ಭುತ ಸೀರಿಯಲ್ ಇದು.

ಇಂದಿಗೂ ಕೂಡ ಆರ್ಯವರ್ಧನ್ ಹಾಗೂ ಅನುಸಿರಿಮನೆ ಪಾತ್ರ ಮನೆ ಮನೆ ಮಾತಾಗಿದೆ. ಪ್ರೀತಿಗೆ ಯಾವ ವಯಸ್ಸಿನ ಅಂತರವಿಲ್ಲ ಎಂದು ತೋರಿಸಿಕೊಟ್ಟಂತಹ ಈ ಸೀರಿಯಲ್ಗೆ ಅದೆಷ್ಟೋ ಜನ ಪ್ರೇಮಿಗಳು ಫಿದಾ ಆಗಿದ್ದಾರೆ. ಇನ್ನು ಚಿಕ್ಕವರಿಂದ ಹಿರಿಯರವರೆಗೂ ಕುಳಿತು ನೋಡುವಂತಹ ಈ ಸೀರಿಯಲ್ನಲ್ಲಿ ಕೇವಲ ನಾಯಕ ನಾಯಕಿಯರಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ಅದರಲ್ಲಿ ಬರುವಂತಹ ಪೋಷಕ ಪಾತ್ರಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪುಷ್ಪ ಹಾಗೂ ಸುಬ್ಬು ಜೋಡಿಯ ಮಾತಿಗೆ ನಗದ ಫ್ಯಾನ್ಸ್ ಇಲ್ಲ.

ಅಷ್ಟರಮಟ್ಟಿಗೆ ಸೀರಿಯಲ್ ಜನಪ್ರಿಯತೆಯನ್ನು ಪಡೆದುಕೊಂಡು ಎಲ್ಲರ ಮನಸ್ಸನ್ನು ಗೆದ್ದಿತ್ತು. ಇದೀಗ ಅಚ್ಚರಿಯೆನ್ನುವಂತೆ ಸೀರಿಯಲ್ ನಾಯಕಿ ಮೇಘ ಶೆಟ್ಟಿ ಧಾರಾವಾಹಿಯಿಂದ ಹೊರಬರಲು ನಿರ್ಧರಿಸಿದ್ದಾರಂತೆ. ಅಷ್ಟಕ್ಕೂ ಅನುಸಿರಿಮನೆ ಹೀಗೆ ಮಾಡಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಟಿ ಮೇಘ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್ನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ನೆನ್ನೆಯಷ್ಟೆ ತನ್ನ ಕೊನೆ ದಿನದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಕೆಲವು ದಿನಗಳ ಕಾಲ ಮೇಘ ಶೆಟ್ಟಿ ಈಗಾಗಲೇ ನಟಿಸಿರುವಂತಹ ಎಪಿಸೋಡ್ಗಳು ಪ್ರಸಾರವಾಗುತ್ತದೆ. ಆದ್ದರಿಂದಾಗಿ ಈ ತಿಂಗಳ ಅಂತ್ಯದಲ್ಲಿ ಸೀರಿಯಲ್ಗೆ ಹೊಸ ನಾಯಕಿಯ ಎಂಟ್ರಿ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಟಿ ಮೇಘ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಸಿನಿಮಾದ ಶೂಟಿಂಗ್ ಟೈಮಿಂಗ್ ಮ್ಯಾಚ್ ಆಗುತ್ತಿಲ್ಲ ಎಂಬ ಕಾರಣಕ್ಕೆ ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದಿದ್ದಾರೆ. ಈಕೆಯ ಕುರಿತು ನಿಮ್ಮ ಅನಿಸಿಕೆಯನ್ನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.