ಕನ್ನಡ ಕಿರುತೆರೆಯ ಹೂಮಳೆ ಧಾರವಾಹಿ ನಿಲ್ಲಿಸುತ್ತಿದೆ ಪ್ರಸಾರ, ಕಾರಣವೇನು ಗೊತ್ತೇ?? ಬಿಗ್ ಬಾಸ್ ಚಂದನಾಗೆ ಮತ್ತೊಂದು ನಿರಾಸೆ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜನರಿಗೆ ಸಿನಿಮಾಗಳಿಗಿಂತ ಹೆಚ್ಚಾಗಿ ದಾರವಾಹಿಗಳು ಜಾಸ್ತಿಯಾಗಿ ಕನೆಕ್ಟ್ ಆಗುತ್ತದೆ. ಹೌದು ಸ್ನೇಹಿತರೆ ಸಿನಿಮಾಗಳು ಕೇವಲ ಎರಡೂವರೆಯಿಂದ ಮೂರು ಗಂಟೆ ಒಳಗಡೆ ಜನರಿಗೆ ಆಕರ್ಷಣೆ ಹಾಗೂ ಮನರಂಜನೆ ನೀಡುತ್ತದೆ. ಆದರೆ ಧಾರವಾಹಿಗಳು ವರ್ಷಾದ್ಯಂತ ಉತ್ತಮ ಕಥೆಯನ್ನು ಹೆಣೆದುಕೊಂಡು ಪ್ರತಿಯೊಂದು ದಿನಕ್ಕೂ ಕುತೂಹಲವನ್ನು ಉಳಿಸಿಕೊಂಡು ಹಾಗೂ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುವುದರಲ್ಲಿ ಕಿರುತೆರೆಯಲ್ಲಿ ಧಾರವಾಹಿಗಳ ಅಬ್ಬರ ಜೋರಾಗಿದೆ.

ಇತ್ತೀಚಿಗೆ ಒಂದು ಧಾರವಾಹಿ ಯಾವುದೇ ಸುಳಿವನ್ನೂ ನೀಡದೆ ತನ್ನ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಹೌದು ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ತನ್ನ ಪ್ರಸಾರವನ್ನು ನಿಲ್ಲಿಸಿದೆ. ಹೌದು ಸ್ನೇಹಿತರೆ ಆದರೆ ಇದಕ್ಕೆ ಯಾವುದೇ ಅಧಿಕೃತವಾದ ನಿರ್ಧಾರ ಹೊರ ಬಂದಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಹೂಮಳೆ ಧಾರವಾಹಿ ಕಥೆ ಕೂಡ ಉತ್ತಮವಾಗಿ ಸಾಗುತ್ತಿತ್ತು. ಇಲ್ಲಿ ನಾಯಕನಹಟ್ಟಿಯ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ ಆದರೆ ಅವಳ ತಾಯಿ ಹುಡುಗನನ್ನು ಮುಗಿಸಿ ಇನ್ನೊಬ್ಬನೊಂದಿಗೆ ಮದುವೆ ಮಾಡಲು ಹೋಗುತ್ತಾಳೆ.

ಆದರೆ ಆ ಹುಡುಗ ಕೂಡ ನಾಯಕಿಗೆ ಉತ್ತಮವಾದ ಸಪೋರ್ಟ್ ನೀಡುತ್ತಾನೆ ಮತ್ತು ಆ ನಾಯಕಿ ಹುಡುಗನ ಮಗನನ್ನು ಕೂಡ ತನ್ನ ಸ್ವಂತ ಮಗುವಿನಂತೆ ಸಾಕುತ್ತಿರುತ್ತಾರೆ. ಇಷ್ಟೆಲ್ಲಾ ಚೆನ್ನಾಗಿ ಕಥೆ ನಡೆಯುತ್ತಿದ್ದರೂ ಕೂಡ ಹೂಮಳೆ ಧಾರವಾಹಿ ಅರ್ಧದಲ್ಲೇ ನಿಂತಿರುವುದಕ್ಕೆ ಕಾರಣ ಈಗ ತಿಳಿದುಬಂದಿದೆ. ಹೌದು ಗೆಳೆಯರೇ ಹೂಮಳೆ ಧಾರವಾಹಿ ಪ್ರಾರಂಭವಾದಾಗ ಇದ್ದಂತಹ ಟಿಆರ್ಪಿ ಈಗ ಕಂಡುಬರುತ್ತಿಲ್ಲ ಎಂಬುದೇ ಧಾರವಾಹಿ ತಂಡದ ತಲೆಬಿಸಿ ಗೆ ಕಾರಣ. ಇದಕ್ಕಾಗಿ ಧಾರವಾಹಿಯನ್ನು ಅರ್ಧದಲ್ಲಿಯೇ ನಿಲ್ಲಿಸಲಾಗಿದ್ದು ಇದರ ಅಭಿಮಾನಿಗಳಿಗೆ ಧಾರವಾಹಿ ಹಠಾತ್ ಆಶ್ಚರ್ಯವನ್ನು ನೀಡಿದೆ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.