ಆ ದಿನ ಪಡೆದಿದ್ದ ಹಣಕ್ಕೆ ಇಷ್ಟು ವರ್ಷಕ್ಕೆ ಮೂರರಷ್ಟು ಬಡ್ಡಿ ಸೇರಿಸಿ ಹದಿಮೂರು ಕೋಟಿ ವಾಪಸ್ ಕೊಟ್ಟ ನಟ ಯಶ್, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ಬಿಡುಗಡೆಯ ನಂತರ ಕನ್ನಡ ಚಿತ್ರರಂಗವನ್ನು ಪರಭಾಷಾ ಪ್ರೇಕ್ಷಕರು ನೋಡುವ ರೀತಿಯೇ ಬದಲಾಗಿಹೋಗಿದೆ. ಹೌದು ಸ್ನೇಹಿತರೆ ಕನ್ನಡ ಚಿತ್ರದ ಮಹತ್ವವನ್ನು ಕೆಜಿಎಫ್ ಚಿತ್ರ ವಿಶ್ವದಾದ್ಯಂತ ನೋಡುವಂತೆ ಮಾಡಿದೆ. ಇನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ರಾಕಿಂಗ್ ಸ್ಟಾರ್ ಯಶ್ ರವರು ಕೂಡ ಕೆಜಿಎಫ್ ಚಿತ್ರದ ನಂತರ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ಒಂದು ಕಾಲದಲ್ಲಿ ಸಿನಿಮಾ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಯಶ್ ರವರು ಈಗ ಯಾವ ಚಿತ್ರವನ್ನು ಕೂಡ ಆಯ್ಕೆ ಮಾಡಬಲ್ಲಂತಹ ಸೂಪರ್ಸ್ಟಾರ್ ಪಟ್ಟದಲ್ಲಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ಯಶ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಇನ್ನು ತಮ್ಮ ಮುಂದಿನ ಚಿತ್ರದ ಕುರಿತಂತೆ ಕೂಡ ಯಶ್ ಅವರು ಎಲ್ಲಿಯೂ ಕೂಡ ಬಿಟ್ಟುಕೊಟ್ಟಿಲ್ಲ. ಇನ್ನು ಇದರ ನಡುವೆ ರಾಕಿಂಗ್ ಸ್ಟಾರ್ ಯಶ್ ಅವರು ಈ ಹಿಂದೆ ಒಬ್ಬ ವ್ಯಕ್ತಿಯ ಬಳಿ ತೆಗೆದುಕೊಂಡಿದ್ದ ಹಣವನ್ನು ಅದಕ್ಕೆ ಬಡ್ಡಿಸಮೇತ ಸೇರಿಸಿ ಕೊಟ್ಟಿದ್ದಾರೆ ಎಂಬ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಚಿತ್ರದ ಚಿತ್ರೀಕರಣದ ನಂತರ ಯಶ್ ರವರ ಜೀವನದ ಟರ್ನಿಂಗ್ ಪಾಯಿಂಟ್ ಚಿತ್ರ ಕಿರಾತ-2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇನ್ನು ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಈ ಚಿತ್ರವನ್ನು ನಿಲ್ಲಿಸಲು ಹೇಳಿದ್ದರು. ಇನ್ನು ಈಗ ಈ ಚಿತ್ರವನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಯಶ್ ಚಿತ್ರದ ನಿರ್ಮಾಪಕರಾಗಿರುವ ಜಯಣ್ಣ ರವರಿಗೆ ಇಲ್ಲಿಯವರೆಗೆ ನನ್ನಿಂದಾಗಿ ಚಿತ್ರ ಅರ್ಧಕ್ಕೆ ನಿಂತಿರುವ ಕಾರಣದಿಂದಾಗಿ ಇಲ್ಲಿಯವರೆಗೆ ಚಿತ್ರೀಕರಣಕ್ಕೆ ತಗುಲಿದಂತಹ ವೆಚ್ಚ ಹಾಗೂ ಪಡೆದಿರುವ ಸಂಭಾವನೆ ಎಲ್ಲಾ ಸೇರಿ 3% ಬಡ್ಡಿಯನ್ನು ಕೂಡ ಸೇರಿಸಿ ಒಟ್ಟಾರೆಯಾಗಿ 13 ಕೋಟಿ ರೂಪಾಯಿಯನ್ನು ಜಯಣ್ಣ ರವರಿಗೆ ರಾಕಿಂಗ್ ಸ್ಟಾರ್ ಯಶ್ ಅವರು ವಾಪಸು ನೀಡಿದ್ದಾರೆ.