ಇಂದು ದರ್ಶನ್ ಹಾಗೂ ಕಿಚ್ಚ ಸುದೀಪ್ ರವರ ಅಭಿಮಾನಿಗಳಿಗೆ ಸಿಗಲಿದೆ ಗುಡ್ ನ್ಯೂಸ್. ಏನು ಗೊತ್ತೇ?? ಇಬ್ಬರ ಅಭಿಮಾನಿಗಳಿಗೂ ಕಾದಿದೆ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಅಂತು ಇಂತು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಚಿಗುರು ಮೂಡಲು ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ. ಹಲವಾರು ತಿಂಗಳುಗಳ ಕಾಲ ಯಾವುದೇ ಸಿನಿಮಾಗಳ ಬಿಡುಗಡೆ ಇಲ್ಲದೆ ಕನ್ನಡ ಚಿತ್ರರಂಗ ಮನರಂಜನೆ ಹೀನವಾಗಿತ್ತು. ಆದರೆ ಈಗ ಒಂದೊಂದಾಗಿ ದೊಡ್ಡ ಚಿತ್ರಗಳು ಬಿಡುಗಡೆ ಆಗಲು ಆರಂಭಿಸಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರ ಕುರಿತು.

ಒಂದು ಕಾಲದಲ್ಲಿ ಇವರಿಬ್ಬರು ಎರಡು ದೇಹ ಒಂದು ಆತ್ಮ ಎಂಬಂತೆ ಕುಚಿಕು ಗಳಾಗಿದ್ದರು. ಇವರಿಬ್ಬರ ಸ್ನೇಹಕ್ಕೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಇಡೀ ಚಿತ್ರರಂಗ ಕೂಡ ಮೆಚ್ಚುವಂತೆ ಇತ್ತು ಇವರಿಬ್ಬರ ಸ್ನೇಹ. ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಕೂಡ ಇವರಿಬ್ಬರು ಒಟ್ಟಿಗೆ ಹೋಗುತ್ತಿದ್ದರು. ಆದರೆ ಯಾರ ಕಣ್ಣು ಇವರಿಬ್ಬರ ಸ್ನೇಹ ಸಂಬಂಧದ ಮೇಲೆ ಬಿತ್ತೋ ಏನೋ ಅಂದಿನಿಂದ ಇವರಿಬ್ಬರು ಒಬ್ಬರನ್ನೊಬ್ಬರು ಇಷ್ಟಪಡುತ್ತಿಲ್ಲ. ಬೆಸ್ಟ್ ಫ್ರೆಂಡ್ಸ್ ಆಗಿದ್ದವರು ಒಬ್ಬರ ಮುಖ ನೋಡಿದರೆ ಇನ್ನೊಬ್ಬರಿಗೆ ಆಗದ ಅಷ್ಟರಮಟ್ಟಿಗೆ ಆಗಿ ಹೋಗುತ್ತಾರೆ. ಆದರೆ ಇಂದುದಿನ ಕಿಚ್ಚ ಹಾಗೂ ದಚ್ಚು ಫ್ಯಾನ್ಸ್ ಗಳಿಗೆ ಸಿಹಿಸುದ್ದಿ ಸಿಗುತ್ತಿದೆ ಏನದು ಗೊತ್ತಾ.

ಹೌದು ಇಂದು ವಿಜಯದಶಮಿ ಹಬ್ಬವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ3 ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ. ಇನ್ನು ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮುಹೂರ್ತ ಪೂಜೆ ಕೂಡ ನಡೆಯಲಿದೆ. ಒಂದೇ ದಿನ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳಿಗೆ ಸಂತೋಷದ ಸುದ್ದಿ ಸಿಗುತ್ತಿರುವುದು ಸ್ಯಾಂಡಲ್ವುಡ್ನಲ್ಲಿ ಸಂತಸದ ಮನೆ ಮಾಡಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.