ಹತ್ತಾರು ಕನಸುಗಳ ನಡುವೆ ಇತ್ತೀಚಿಗೆ ಹೊಸ ಆಸೆಯನ್ನು ಸ್ಟೇಜ್ ಮೇಲೆ ಬಹಿರಂಗವಾಗಿ ಹೇಳಿದ್ದ ಅಪ್ಪು, ಹೇಳಿದ ಕೆಲವೇ ದಿನಗಳಲ್ಲಿ ಯಾಕೆ ಹೀಗಾಯ್ತೋ.

ನಮಸ್ಕಾರ ಸ್ನೇಹಿತರೇ ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆ. ಯಾರ ಪಯಣ ಯಾವಾಗ ಅಂತ್ಯವಾಗುತ್ತದೆ ಎಂಬುದು ಕೇವಲ ಆ ಭಗವಂತನಿಗೆ ಮಾತ್ರ ತಿಳಿದಿರುತ್ತದೆ. ಕಾಕತಾಳಿಯವವೋ ಅಥವಾ ಅನಿರಿಕ್ಷೀತವೋ ಮೊನ್ನೆ ತಾನೇ ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಿತ್ತು. ಅಲ್ಲಿ ಶಿವಣ್ಣ, ಪುನೀತ್ ಹಾಗೂ ಯಶ್ ರವರು ಪಾಲ್ಗೊಂಡಿದ್ದರು. ಅಲ್ಲಿ ಶಿವಣ್ಣ ಮತ್ತು ನಟ ಉಪೇಂದ್ರತಮ್ಮ ಮುಂದಿನ ಸಿನಿಮಾಗಳು ಹಾಗೂ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿದ್ದರು. ಈ ವೇಳೆಯಲ್ಲಿ ಅಪ್ಪು ಸಹ ಮೊದಲ ಭಾರಿಗೆ ತುಂಬಿದ ಸಭೆಯಲ್ಲಿ ವಿಶಿಷ್ಟವಾಗಿ ಮಾತನಾಡಿದರು.

ನನಗೆ ಮೊದಲಿನಿಂದಲೂ ಸಹ ನಿರ್ದೇಶಕನಾಗಬೇಕು ಎಂಬ ಆಸೆ ಇತ್ತು. ಅದರಲ್ಲೂ ಶಿವಣ್ಣನನ್ನೇ ಹಾಕಿಕೊಂಡು ನಾನು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಏಕೆಂದರೇ ಶಿವಣ್ಣ ಒಬ್ಬ ನಿರ್ದೇಶಕರ ನಟ. ಎಲ್ಲಾ ನಿರ್ದೇಶಕರು ಮೆಚ್ಚುವ ಏಕೈಕ ನಟನೆಂದರೇ ಅದು ಶಿವಣ್ಣ ಮಾತ್ರ ಎಂದು ಹೇಳಿದ್ದರು. ಅದಲ್ಲದೇ ತಾವು ನಿರ್ದೇಶಿಸುವ ಸಿನಿಮಾದಲ್ಲಿ ನನಗೆ ಹೆಚ್ಚು ಕೆಲಸ ಇರುವುದಿಲ್ಲ. ಸಂತೋಶ್ ಆನಂದರಾಮ್ ನನಗೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಕೊಡುತ್ತಾರೆ. ಚೇತನ್ ರವರು ನನಗೆ ನಿರ್ದೇಶನದಲ್ಲಿ ಸಹಾಯ ಮಾಡುತ್ತಾರೆ.

ಹೀಗಾಗಿ ನನಗೆ ಕೇವಲ ಸೆಟ್ ಗೆ ಬಂದು ಆಕ್ಷನ್ , ಕಟ್ ಹೇಳುವ ಕೆಲಸ ಮಾತ್ರ ಬಾಕಿ ಉಳಿದಿರುತ್ತದೆ. ಎಲ್ಲಾ ಪ್ರೇಕ್ಷಕರು ತಮ್ಮ ಕುರ್ಚಿಯ ತುದಿಗೆ ಬಂದು ಕೂರುವಂತೆ ಮಾಡುವ ಕತೆ ಮಾಡಿ ಅಂತಹ ಚಿತ್ರವನ್ನ ನಿರ್ದೇಶನ ಮಾಡುವ ಕನಸಿದೆ ಎಂದು ಹೇಳಿಕೊಂಡಿದ್ದರು. ಆಗ ಅಲ್ಲಿಯೇ ಇದ್ದ ಉಪೇಂದ್ರ ನೀವು ನಿರ್ದೇಶನ ಮಾಡುವುದಾದರೇ, ನಾನು ನಿಮಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಸಿದ್ದ ಎಂದು ಘೋಷಿಸಿದ್ದರು. ಆದರೇ ಕೊನೆಗೂ ಪುನೀತ್ ರಾಜಕುಮಾರ್ ರವರ ಆಸೆ ಕೊನೆಗೂ ಈಡೇರಲಿಲ್ಲ‌. ಪವರ್ ಸ್ಟಾರ್ ಆಗಿ ಮೆರೆದಿದ್ದ ಪುನೀತ್ ಇನ್ಮುಂದೆ ನೆನಪು ಮಾತ್ರ. ಅವರು ಅಭಿನಯಿಸಿದ ಸಿನಿಮಾಗಳಷ್ಟೇ ಇನ್ನು ನೆನಪಿನ ಭಿತ್ತಿಯಲ್ಲಿ ಇರುವುದು. ಅಪ್ಪುರವರ ಕೊನೆಯ ಆಸೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.