ಅಪ್ಪುವಿನ ಸಮಾಧಿಗೆ ಭೇಟಿ ನೀಡಿ ಮಹತ್ವದ ನಿರ್ಧಾರ ಘೋಷಣೆ ಮಾಡಿದ ರೇಣುಕಾಚಾರ್ಯ, ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ವಾರದ ಮೇಲೆ ಆಗಿ ಹೋಗಿದ್ದರು ಕೂಡ ಇನ್ನು ಕೂಡ ಅವರ ನೆನಪು ನವನವೀನ ವಾಗಿದೆ. ಅವರನ್ನು ಕಳೆದುಕೊಂಡಿದ್ದೇವೆ ಎಂಬ ನೆನಪು ಕೂಡ ಕೆಟ್ಟ ಕನಸು ಎಂಬಂತೆ ಭಾಸವಾಗುತ್ತದೆ. ಇನ್ನು ಈಗ ಅಪ್ಪು ಅವರ ಸಮಾಧಿಗೆ ಖ್ಯಾತ ರಾಜಕೀಯ ನಾಯಕರಾಗಿರುವ ಹೊನ್ನಾಳಿ ಕ್ಷೇತ್ರದ ರೇಣುಕಾಚಾರ್ಯ ಅವರು ಆಗಮಿಸಿ ಕುಟುಂಬದೊಂದಿಗೆ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಅಪ್ಪು ಅವರ ಕುರಿತಂತೆ ಮಾತನಾಡುತ್ತಾ ರೇಣುಕಾಚಾರ್ಯ ರವರು ಅಪ್ಪು ನಿರ್ಜನವಾಗಿದ್ದ ದಿನದಂದೇ ನನಗೆ ಶಸ್ತ್ರಚಿಕಿತ್ಸೆ ಆಗಿತ್ತು ಹೀಗಾಗಿ ನಾನು ವಿಶ್ರಾಂತಿಯಲ್ಲಿದೆ ಈಗ ವಿಶ್ರಾಂತಿಯನ್ನು ಬಿಟ್ಟು ಅಪ್ಪು ಸಮಾಧಿಗೆ ನಮಿಸಲು ಕುಟುಂಬ ಸಮೇತನಾಗಿ ಬಂದಿದ್ದೇನೆ ಎಂಬುದಾಗಿ ಹಂಚಿಕೊಂಡಿದ್ದರು. ಇನ್ನು ಅಪ್ಪು ರವರ ಸಮಾಜಸೇವೆಯ ಮುಂದೆ ನಮ್ಮದೇನೂ ಅಲ್ಲ ಇನ್ನುಮುಂದೆ ಆದರೂ ಅವರು ನಡೆಸಿಕೊಂಡು ಹೋಗುತ್ತಿದ್ದಂತಹ ಮೈಸೂರಿನ ಶಕ್ತಿಧಾಮ ಸಂಸ್ಥೆಗೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂಬುದಾಗಿ ಕೂಡ ಹೇಳಿದ್ದರು.

ಇನ್ನು ಅಪ್ಪು ಅವರ ಮರಣಾನಂತರ ನೇತ್ರದಾನ ಮಾಡಿರುವುದು ಈಗಾಗಲೇ ಅವರ ಅಭಿಮಾನಿಗಳಲ್ಲಿ ಕೂಡ ಸಾಕಷ್ಟು ಪ್ರಭಾವ ಬೀರಿ ಎಲ್ಲರೂ ಕೂಡ ನೇತ್ರದಾನ ಮಾಡಲು ಸಾಲುಗಟ್ಟಿ ನಿಂತಿದ್ದಾರೆ ನಾವು ಕೂಡ ಮರಣಾನಂತರ ನೇತ್ರದಾನ ಮಾಡುತ್ತೇವೆ ಎಂಬುದಾಗಿ ರೇಣುಕಾಚಾರ್ಯ ಅವರು ಹೇಳಿಕೊಂಡಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ವಾರಗಳ ಮೇಲೆ ದಿನಗಳು ಕಳೆದರೂ ಕೂಡ ಇಂದಿಗೂ ಅಪ್ಪು ಸಮಾಧಿಗೆ ದಿನಕ್ಕೆ ಸಾವಿರಾರು ಜನರು ಕ್ಯೂನಲ್ಲಿ ನಿಂತು ನಮನ ಸಲ್ಲಿಸಿ ಹೋಗುತ್ತಿದ್ದಾರೆ. ಅಪ್ಪು ಅಭಿಮಾನಿಗಳಿಗೆ ದೀಪಾವಳಿಯನ್ನು ವುದು ಅಂದಕಾರ ವಾಗಿಬಿಟ್ಟಿದೆ. ತಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅಪ್ಪುವನ್ನು ಅವರ ಅಭಿಮಾನಿಗಳು ನಡೆಸಿಕೊಳ್ಳುತ್ತಿರುವ ರೀತಿ ಖಂಡಿತವಾಗಿಯೂ ಹೃದಯವಿದ್ರಾವಕ.