ಸುದೀಪ್ ನಂತರ ಮತ್ತೊಬ್ಬ ನಟ ತೆಲುಗಿಗೆ ವಿಲ್ಲನ್ ಆಗಿ, ಬಾಲಕೃಷ್ಣ ಮೂವಿ ಯಲ್ಲಿ ವಿಲ್ಲನ್ ಆಫರ್ ಪಡೆದ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೆಲುಗು ಸಿನಿಮಾಗಳಲ್ಲಿ ಪ್ರತಿ ದೃಶ್ಯವನ್ನು ಶ್ರೀಮಂತವಾಗಿ ಚಿತ್ರಿಕರಿಸುತ್ತಾರೆ. ಇನ್ನು ಸಹನಟರನ್ನ ಅತಿ ಹೆಚ್ಚು ಬಳಸುವುದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ. ಸಣ್ಣ ಪುಟ್ಟ ದೃಶ್ಯಗಳಿಗೂ ಸಹ ಬೇರೆ ಭಾಷೆಯ ಪ್ರಸಿದ್ದ ನಟರನ್ನ ಸಿನಿಮಾಕ್ಕೆ ಕರೆತರುವುದು ತೆಲುಗು ಇಂಡಸ್ಟ್ರಿಯ ಒಂದು ಪಾಲಿಸಿಕೊಂಡು ಬಂದಿರುವ ತಂತ್ರ.

ಸದ್ಯ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸದ್ಯ ನಟ ನಂದಮೂರಿ ಬಾಲಕೃಷ್ಣರ ಸಿನಿಮಾಗಳು ಸಾಕಷ್ಟು ಹೈಪ್ ಮೂಡಿಸುತ್ತಿವೆ. ಈಗ ತೆಲುಗಿನ ಖ್ಯಾತ ನಿರ್ದೇಶಕ ಬೊಯಪಾಟಿ ಶ್ರೀನು ಜೊತೆಗೆ ಅಖಂಡ ಎನ್ನುವ ಸಿನಿಮಾ ಮುಗಿಸಿರುವ, ಬಾಲಣ್ಣ ಈಗ ಗೋಪಿಚಂದ್ ಮಲಿನೇನಿ ಎಂಬ ನಿರ್ದೇಶಕನ ಜೊತೆ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಖ್ಯಾತ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಕ್ಕೆ ಕನ್ನಡದ ಸೂಪರ್ ಸ್ಟಾರ್ ಒಬ್ಬರನ್ನ ವಿಲನ್ ಪಾತ್ರ ನಿರ್ವಹಿಸಲು ಸಿನಿಮಾ ತಂಡ ಕೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಹೌದು ಕನ್ನಡದ ಸೂಪರ್ ಸ್ಟಾರ್ ಬೇರಾರೂ ಅಲ್ಲ. ಈಗಷ್ಟೇ ಸಲಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿರುವ ನಟ, ನಿರ್ದೇಶಕ ದುನಿಯಾ ವಿಜಯ್. ಕನ್ನಡದ ಚಲನಚಿತ್ರರಂಗಕ್ಕೆ ಮೊದಲು ಖಳನಾಯಕನಾಗಿಯೇ ವಿಜಯ್ ಕಾಲಿಟ್ಟಿದ್ದರು. ನಂತರದ ದಿನಗಳಲ್ಲಿ ನಟರಾಗಿ, ಸದ್ಯ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಸುಮಾರು 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ದುನಿಯಾ ವಿಜಯ್, ಇದುವರೆಗೂ ಬೇರೆ ಭಾಷೆಗಳಿಗೆ ಕಾಲಿಟ್ಟಿರಲಿಲ್ಲ. ಆದರೇ ಇದೇ ಮೊದಲ ಭಾರಿಗೆ ತೆಲುಗು ಸೂಪರ್ ಸ್ಟಾರ್ ಬಾಲಣ್ಣ ಆಫರ್ ಒಪ್ಪುವ ಸಾಧ್ಯತೆ ಇದೆ. ಈ ಹಿಂದೆ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ನಟ ಉಪೇಂದ್ರ ಸಹ ತೆಲುಗು ಭಾಷೆಯ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಅಭಿನಯಿಸಿದ್ದರು. ಈಗ ದುನಿಯಾ ವಿಜಯ್ ಸಹ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡದ ಸ್ಟಾರ್ ನಟರು ಬೇರೆ ಭಾಷೆಯ ಪ್ರೇಕ್ಷಕರಿಂದ ಸಹ ಶಿಳ್ಳೆ,ಚಪ್ಪಾಳೆ ಯನ್ನು ಸ್ವೀಕರಿಸುವ ದಿನಗಳು ಹತ್ತಿರ ಬರಲಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.