ಬಿಗ್ ನ್ಯೂಸ್: ಅಪ್ಪು ವಿಚಾರದ ಕುರಿತು ಸಿಬಿಐ ಗೆ ?? ಅಖಾಡಕ್ಕೆ ದರ್ಶನ್ ಫ್ಯಾನ್ಸ್, ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಎಲ್ಲರಿಂದ ಪ್ರೀತಿಯನ್ನು ಪಡೆದಂತಹ ಅಜಾತಶತ್ರು ನಟ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಜನರು ಬಂದಿರುವುದನ್ನು ನೋಡಿಯೇ ನೀವು ಅವರು ಸಂಪಾದಿಸಿರುವ ಅಭಿಮಾನಿಗಳ ಸಂಖ್ಯೆಯನ್ನು ಅಂದಾಜು ಮಾಡಬಹುದಾಗಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಆಕಸ್ಮಿಕವಾಗಿ ನಿಧನ ಹೊಂದಿರುವುದು ಖಂಡಿತವಾಗಿಯೂ ಬಹುತೇಕ ಎಲ್ಲರಿಗೂ ಕೂಡ ಶಾಕಿಂಗ್ ವಿಚಾರವಾಗಿದೆ. ಇತ್ತೀಚಿನದಿನಗಳಲ್ಲಿ ಹೊರಬರುತ್ತಿರುವ ಸುದ್ದಿಯ ಪ್ರಕಾರ ಅವರನ್ನು ತಪಾಸಣೆ ಮಾಡಿರುವ ಅವರ ಫ್ಯಾಮಿಲಿ ಡಾಕ್ಟರ್ ವಿರುದ್ಧ ದೂರುಗಳು ದಾಖಲಾಗಿದ್ದು ಅವರನ್ನು ಬಂಧಿಸುವ ಮಾತುಗಳು ಕೂಡ ನಡೆಯುತ್ತಿವೆ. ಹಾಗಿದ್ದರೆ ಇದು ಅಪ್ಪು ಅವರ ಆಕಸ್ಮಿಕ ಮರಣ ಅಲ್ಲವಾ ಎಂಬ ಅನುಮಾನಗಳು ಕೂಡ ಹೊಗೆ ಆಡಲಾರಂಭಿಸಿದೆ. ಹೌದು ಇದರ ಕುರಿತಂತೆ ಸಂಪೂರ್ಣ ಸಿಬಿಐ ತನಿಖೆ ಆಗಬೇಕೆಂಬುದಾಗಿ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ ಆಗ್ರಹಿಸಿದೆ.

ಹೌದು ಹಿಂದಿನ ರಾತ್ರಿಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಗೀತ ನಿರ್ದೇಶಕ ಗುರುಕಿರಣ್ ರವರ ಬರ್ತಡೇ ಪಾರ್ಟಿಯಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದರು. ದಿಡೀರನೆ ಬೆಳಗ್ಗೆ ಹೃದಯಾಘಾತ ವಾಗಲು ಹೇಗೆ ಸಾಧ್ಯ ಎಂಬುದು ಎಲ್ಲರ ಅನುಮಾನವಾಗಿತ್ತು ಇದರ ಕುರಿತಂತೆ ಸಿಬಿಐ ತನಿಖೆ ಆಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇನ್ನು ಈ ಕುರಿತಂತೆ ದರ್ಶನ್ ರವರ ಅಭಿಮಾನಿಗಳು ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದು ತನಿಖೆ ನಡೆಯಲೇಬೇಕು ಎಂಬುದಾಗಿ ಕೂಡ ಕೇಳಿಕೊಂಡಿದ್ದಾರೆ. ಇದರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.