ಇದ್ದಕ್ಕಿದ್ದಂತೆ ಅಪ್ಪು ಸಮಾಧಿ ಬಳಿ ಬಂದು ಅಪ್ಪು ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?? ಕಣ್ಣೀರು ಬರುತ್ತೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದಿದ್ದರೂ ಕೂಡ ಮನಸ್ಸಿನಲ್ಲಿರುವ ಅವರ ನಗುಮುಖದ ನೆನಪುಗಳು ಇನ್ನೂ ಕೂಡ ಮಾಸಿ ಹೋಗಲು ತಯಾರಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಿಧನ ಹೊಂದಿದ ನಂತರ ಬಾಲಿವುಡ್ ನಿಂದ ಹಿಡಿದು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದ ಗಣ್ಯರಿಂದ ಸಂತಾಪದ ಸುರಿಮಳೆ ಹರಿದುಬಂದಿತ್ತು. ಪುನೀತ್ ರಾಜಕುಮಾರ್ ಅವರ ನಿಧನ ಅಷ್ಟರಮಟ್ಟಿಗೆ ಎಲ್ಲರನ್ನೂ ಕಾಡಿತ್ತು.

ಇನ್ನು ಕೆಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಕೂಡಾ ಬಂದು ಅಂತಿಮ ನಮನವನ್ನು ಸಲ್ಲಿಸಿ ಹೋಗಿದ್ದರು. ಆದರೆ ಇನ್ನು ಕೆಲವು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಇರಲಿ ಸಮಾಧಿಯ ಬಳಿ ಕೂಡ ಬಂದಿರಲಿಲ್ಲ. ಇದರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು. ರಾಧಿಕಾ ಪಂಡಿತ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೊತೆಗೆ ದೊಡ್ಮನೆ ಹುಡುಗ ಹಾಗೂ ಹುಡುಗರು ಚಿತ್ರದಲ್ಲಿ ನಟಿಸಿದ್ದರು. ಚಿತ್ರಕ್ಕಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರೊಂದಿಗೆ ಒಳ್ಳೆಯ ರೀತಿಯ ಸ್ನೇಹ ಸಂಬಂಧವನ್ನು ಕೂಡ ರಾಧಿಕಾ ಪಂಡಿತ್ ಹಾಗೂ ಯಶ್ ರವರು ಹೊಂದಿದ್ದರು. ಇದಕ್ಕಾಗಿ ಅಪ್ಪು ಅಭಿಮಾನಿಗಳು ಕೂಡ ಯಾಕೆ ನೀವು ಶ್ರದ್ಧಾಂಜಲಿ ಕೋರಿಲ್ಲ ಹಾಗೂ ಸಮಾಧಿಯ ಬಳಿಗೆ ಬಂದಿಲ್ಲ ಎಂಬುದಾಗಿ ಅಸಮಾಧಾನಕರ ರೀತಿಯಲ್ಲಿ ಕೇಳುತ್ತಿದ್ದರು.

ಇದಕ್ಕೆ ಪ್ರತ್ಯುತ್ತರವೆಂಬಂತೆ ರಾಧಿಕಾ ಪಂಡಿತ್ ಅವರು ಈಗ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಪ್ಪು ಅವರ ಭಾವಚಿತ್ರವನ್ನು ಪೋಸ್ಟ್ ಮಾಡುವುದರ ಮೂಲಕ ಭಾವನಾತ್ಮಕವಾಗಿ ಅಂತಿಮ ವಿದಾಯವನ್ನು ಕೋರಿದ್ದಾರೆ. ನೀವು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಈಗಲೂ ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ ನೀವಿಲ್ಲದೆ ಚಿತ್ರರಂಗ ಮೊದಲಿನಂತೆ ಇರಲು ಸಾಧ್ಯವಿಲ್ಲ. ನಿಮ್ಮ ಜಾಗವನ್ನು ಭರ್ತಿ ಮಾಡಲು ಯಾರಿಗೂ ಕೂಡ ಸಾಧ್ಯವಿಲ್ಲ ನಿಮ್ಮೊಂದಿಗೆ ನಟನೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ನೀವು ನಮ್ಮ ನೆನಪಿನಲ್ಲಿ ಎಂದಿಗಿಂತ ಜೀವಂತ ಎಂಬುದಾಗಿ ಬರೆದುಕೊಂಡಿದ್ದಾರೆ.