ಕನ್ನಡದ ಖ್ಯಾತ ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯ ಧಾರವಾಹಿಗಳು ಸಾಕಷ್ಟು ಮುನ್ನೆಲೆಗೆ ಬಂದು ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಾಗಿವೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಸಿನಿಮಾಗಳಿಗಿಂತ ಹೆಚ್ಚಾಗಿ ಧಾರವಾಹಿಗಳನ್ನು ನೋಡುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆಯ ಧಾರವಾಹಿಯಲ್ಲಿ ಅಣ್ಣ-ತಂಗಿಯಾಗಿ ಜೊತೆಗೆ ನಟಿಸಿದ್ದ ಇಬ್ಬರು ಜೋಡಿಗಳು ಈಗ ಮದುವೆಯಾಗಲು ಹೊರಟಿದ್ದಾರೆ.

ಹಾಗಿದ್ದರೆ ಆ ಜೋಡಿಗಳು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ ತಪ್ಪದೆ ಕೊನೆಯವರೆಗೂ ಓದಿ. ಸಂಘರ್ಷ ಧಾರವಾಹಿ ಖ್ಯಾತಿಯ ಲಾವಣ್ಯ ಹಾಗೂ ಆಕಾಶದೀಪ ಖ್ಯಾತಿಯ ಶಶಿ ಇವರಿಬ್ಬರೂ ಕೂಡ ಈಗಾಗಲೇ ತಮ್ಮ ಸಂಬಂಧಿಕರು ಹಾಗೂ ಧಾರವಾಹಿ ಕ್ಷೇತ್ರದ ಗೆಳೆಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ವನ್ನು ಪೂರೈಸಿದರು. ಇವರಿಬ್ಬರಿಗೂ ಕೃಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ನು ಇವರಿಬ್ಬರೂ ಸಾಕಷ್ಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಇನ್ನು ಇವರಿಬ್ಬರೂ ಕೂಡ ಹಲವಾರು ಧಾರವಾಹಿಗಳಲ್ಲಿ ನಟಿಸುತ್ತಿದ್ದು, ಇವರಿಬ್ಬರ ನಿಶ್ಚಿತಾರ್ಥ ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿವೆ. ಇನ್ನು ಲಾವಣ್ಯ ರವರು ತೆಲುಗಿನ ಕೃಷ್ಣವಾಣಿ ಧಾರವಾಹಿಯಲ್ಲಿ ಕೂಡ ನಟಿಸಿದ್ದರು. ಇನ್ನು ಲಾವಣ್ಯ ಹಾಗೂ ಶಶಿ ಇಬ್ಬರೂ ಕೂಡ ರಾಜ-ರಾಣಿ ಧಾರವಾಹಿಯಲ್ಲಿ ಅಣ್ಣ-ತಂಗಿಯ ಪಾತ್ರವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಇವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ನಂತರ ಶಶಿ ಲಾವಣ್ಯ ರವರ ಬಳಿ ತಮ್ಮ ಪ್ರೀತಿಯನ್ನು ನಿವೇದಿಸಿಕೊಂಡು ಇಬ್ಬರೂ ಕೂಡ ಈಗ ಪರಸ್ಪರ ಒಪ್ಪಿ ಮದುವೆಗೆ ಸಿದ್ದರಾಗಿದ್ದಾರೆ. ಇವರ ದಾಂಪಾಂತ್ಯ ಜೀವನ ಸುಖಕರವಾಗಿರಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.