ವಿಚ್ಚೇದನ ನಂತರದ ಸಂತೋಷದ ಗುಟ್ಟನ್ನು ರಟ್ಟು ಮಾಡಿದ ಸಮಂತಾ, ನೀವಿಲ್ಲದಿದ್ದರೇ ನಾನು ಏನಾಗಿಬಿಡುತ್ತಿದ್ದೇನೋ ಗೊತ್ತಿಲ್ಲ ಎಂದ ಸಮಂತಾ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟಿ ಸಮಂತಾ ಪ್ರಭು ಬಹುಷಃ ಪತಿ ನಾಗಚೈತನ್ಯ ಅಕ್ಕಿನೇನಿಯವರಿಂದ ವಿಚ್ಛೇದನ ಪಡೆದ ನಂತರ ಬಹಳಷ್ಟು ಸುದ್ದಿಯಾಗುತ್ತಿದ್ದಾರೆ. ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಹಲವಾರು ಅಭಿಮಾನಿಗಳನ್ನ ಹೆಚ್ಚಿಗೆ ಪಡೆದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಮಂತಾ ಆಗಾಗ ಸಾಕಷ್ಟು ಪೋಸ್ಟ್ ಗಳನ್ನ ಮಾಡುತ್ತಿರುತ್ತಾರೆ. ಇವುಗಳು ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಎಲ್ಲೆಡೆ ಸಾಕಷ್ಟು ಸುದ್ದಿ ಮಾಡುತ್ತಿದೆ.

ಈಗ ಇಬ್ಬರೂ ಸ್ನೇಹಿತರ ಜೊತೆ ಸೋಫಾದಲ್ಲಿ ಕುಳಿತುಕೊಂಡ ಫೋಟೋವನ್ನ ಹಾಕಿ ನೀವಿಬ್ಬರಿಲ್ಲದಿದ್ದರೇ ಎಂಬ ಭಾವನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಅಷ್ಟಕ್ಕೂ ಸಮಂತಾ ಜೊತೆ ಸೋಫಾದಲ್ಲಿ ಕುಳಿತಕೊಂಡ ಇಬ್ಬರು ಪುರುಷ ಸ್ನೇಹಿತರೂ ಬೇರೆ ಯಾರೂ ಅಲ್ಲ. ಒಬ್ಬರೂ ತೆಲುಗಿನ ಖ್ಯಾತ ಹಾಸ್ಯ ನಟ ವೆನ್ನೆಲ ಕಿಶೋರ್ ಹಾಗೂ ರಾಹುಲ್ ರವೀಂದ್ರ.

ವೆನ್ನೆಲ ಕಿಶೋರ್ ನಾಗಚೈತನ್ಯ ಹಾಗೂ ಸಮಂತಾರ ಕಾಮನ್ ಫ್ರೆಂಡ್ ಆಗಿದ್ದವರು. ಆದರೇ ಈಗ ವಿಚ್ಛೇದನದ ನಂತರ ವೆನ್ನೆಲ ಕಿಶೋರ್ ಸದ್ಯ ಸಮಂತಾ ಜೊತೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಛೇದಿತ ಸಮಾಜ ಹೇಗೆ ನೋಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.ಅಂತಹದೇ ಅನುಭವ ಸಮಂತಾರವರಿಗೂ ಆಯಿತು. ಆದರೇ ಆ ಸಮಯದಲ್ಲಿ ಸಮಂತಾ ಗೆಳೆಯರು ಅವರಿಗೆ ಧೈರ್ಯ ತುಂಬಿದರು. ಸದ್ಯ ಚಿತ್ರರಂಗ ಹಾಗೂ ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಸಾಕಷ್ಟು ಆಫರ್ ಗಳಲ್ಲಿ ಮಿಂಚುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಆಸರೆಯಾದ ಸ್ನೇಹಿತರನ್ನು ಅಭಿನಂದಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.