ಹಣ ಬರುತ್ತದೆ ಎಂದು ತಿಳಿದ ತಕ್ಷಣ ನಾಗ ಚೈತನ್ಯ ಏನು ಮಾಡಿದ್ದಾರೆ ಗೊತ್ತಾ?? ಟಾಪ್ ನಟಿಯ ಸಾಥ್ ಜೊತೆಗೆ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ನಮ್ಮ ಭಾರತದೇಶದಲ್ಲಿ ಇಬ್ಬರು ಸೆಲೆಬ್ರಿಟಿಗಳ ವಿವಾಹ ವಿಚ್ಛೇದನ ಎನ್ನುವುದು ಸಾಕಷ್ಟು ಸುದ್ದಿ ಮಾಡಿತ್ತು. ಅದು ಯಾರು ಎನ್ನುವುದು ಕೂಡ ನಿಮಗೆಲ್ಲ ಗೊತ್ತಿದೆ. ಹೌದು ನಾವು ಮಾತನಾಡುತ್ತಿರುವುದು ನಾಗಚೈತನ್ಯ ಹಾಗೂ ಸಮಂತಾ ರವರ ವಿವಾಹ ವಿಚ್ಛೇದನದ ಕುರಿತಂತೆ. ಇಬ್ಬರು ಕೂಡ ಪ್ರೀತಿಸಿ 2017 ರಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಪ್ರಕಾರ ಅದ್ದೂರಿಯಾಗಿ ಮದುವೆಯಾಗಿದ್ದರು. ಹಲವಾರು ವರ್ಷಗಳ ಪ್ರೀತಿ ಹಾಗೂ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ತಿಲಾಂಜಲಿ ಇಟ್ಟಿದ್ದರು.

ವಿವಾಹ ವಿಚ್ಛೇದನದ ನಂತರ ಸಮಂತ ರವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರು ನಟಿಸಿದ ಸಿನಿಮಾಗಳಲ್ಲಿ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ ಹಾಗೂ ಅವರು ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ ಇಷ್ಟು ಮಾತ್ರವಲ್ಲದೆ ಹೊಸ ಹೊಸ ಸಿನಿಮಾಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ ವಿವಾಹ ವಿಚ್ಛೇದನದ ನಂತರ ಸಮಂತ ರವರ ಬೇಡಿಕೆಯನ್ನು ವುದು ಚಿತ್ರರಂಗದಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ಕಡೆ ನಾಗಚೈತನ್ಯ ಅವರು ಕೂಡ ತಮ್ಮ ಸಿನಿಮಾ ಕರಿಯರ್ ಕುರಿತಂತೆ ಗಮನವನ್ನು ವಹಿಸುತ್ತಿದ್ದಾರೆ. ಈಗಾಗಲೇ ಲವ್ ಸ್ಟೋರಿ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಬೆಳೆಸಿದೆ.

ಮೊನ್ನೆ ಸಂಕ್ರಾಂತಿಗೆ ಬಿಡುಗಡೆಯಾಗಿರುವ ಬಂಗಾರ್ ರಾಜು ಚಿತ್ರ ಕೂಡ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಾಗಚೈತನ್ಯ ರವರು ಮಾಡಿರುವ ಒಂದು ಕೆಲಸ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು ಅದೇನೆಂದರೆ ಥ್ಯಾಂಕ್ಯು ಸಿನಿಮಾಗಾಗಿ ಈಗಾಗಲೇ ನಾಗಚೈತನ್ಯ ರಷ್ಯಾದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕೆಲವೊಂದು ಸುದ್ದಿಗಳ ಪ್ರಕಾರ ರಷ್ಯಾದಲ್ಲಿ ಚಿತ್ರೀಕರಣ ಮಾಡುತ್ತಿರುವುದು ದುಡ್ಡಿಗಾಗಿ ಎಂಬುದಾಗಿ ಕೇಳಿಬರುತ್ತಿದೆ. ಯಾಕೆಂದರೆ ಸರ್ಕಾರ ತಮ್ಮ ದೇಶದಲ್ಲಿ ಚಿತ್ರೀಕರಣವನ್ನು ಮಾಡುವ ಸಿನಿಮಾಗಳ 90% ಹಣವನ್ನು ನೀಡುತ್ತಾರೆ ಎಂಬ ಘೋಷಣೆ ಹೊರಡಿಸಿದೆ. ಯಾಕೆಂದರೆ ತಮ್ಮ ದೇಶಗಳ ಸುಂದರತೆಯನ್ನು ಸಿನಿಮಾಗಳಲ್ಲಿ ಪ್ರದರ್ಶಿಸಿದ ನಂತರ ಪ್ರವಾಸಿ ಉದ್ಯಮ ಹೆಚ್ಚಾಗಲಿದೆ ಎಂಬ ನಿರೀಕ್ಷೆ. ನಾಗಚೈತನ್ಯ ಹಾಗೂ ರಾಶಿ ಖನ್ನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಥ್ಯಾಂಕ್ಯು ಚಿತ್ರ ಕೂಡ ಇದೇ ಕಾರಣಕ್ಕಾಗಿ ಚಿತ್ರೀಕರಣವನ್ನು ಮಾಡುತ್ತಿದೆ ಎಂಬುದಾಗಿ ಕೇಳಿಬರುತ್ತಿದೆ.